Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ

    December 10, 2025

    ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯ ವಾಹಿನಿ’

    December 10, 2025

    ಮಂಗಳೂರಿನಲ್ಲಿ ‘ಕನ್ನಡದ ಕಂಪು ಸರಣಿ -5’ | ಡಿಸೆಂಬರ್ 21

    December 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯ ವಾಹಿನಿ’
    Bharathanatya

    ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯ ವಾಹಿನಿ’

    December 10, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಲೆಯ ಬೆಳವಣಿಗೆಗೆ ಉತ್ತಮ ಸಂಘಟಕರು, ಕಲಾಪ್ರೇಕ್ಷಕರೂ ಬೇಕಂತೆ. ಅದರಲ್ಲೂ ನೃತ್ಯ ಕಾರ್ಯಕ್ರಮದ ಆಯೋಜನೆಗೆ ಆಯೋಜಕರಾಗಿ ನೃತ್ಯಕಲಾಸಂಸ್ಥೆಗಳೇ ಮುಂದಾದಾಗ ಆ ಪ್ರದರ್ಶನಕ್ಕೇ ಒಂದಷ್ಟು ಮೆರುಗು ಹೆಚ್ಚೇ ಎನ್ನಬಹುದು. ಹೀಗೊಂದು ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮ ‘ನೃತ್ಯ ವಾಹಿನಿ’. ಸನಾತನ‌ ನಾಟ್ಯಾಲಯ ಮಂಗಳೂರು ಹಾಗೂ ನೃತ್ಯಾಂಗನ್ ಮಂಗಳೂರು ಎರಡೂ ನೃತ್ಯ ಸಂಸ್ಥೆಗಳು ಜಂಟಿಯಾಗಿ ನಾಲ್ಕನೇ ವರ್ಷದ ಕಾರ್ಯಕ್ರಮವನ್ನು ದಿನಾಂಕ 07 ಡಿಸೆಂಬರ್ 2025ರಂದು ಸಂಘಟಿಸಿದ್ದರು.

    ಈ ಬಾರಿ ಮೂರು ವಿಭಿನ್ನ ನೃತ್ಯ ಪ್ರಯೋಗಗಳನ್ನು ಸವಿಯುವ ಭಾಗ್ಯ ನೋಡುಗರದ್ದಾಗಿತ್ತು. ಮೊದಲನೆಯದಾಗಿ ನರ್ತಿಸಿದವರು ಯುವಕಲಾವಿದೆ ಅನಘ ಜಿ.ಎಸ್. ಸ್ಪಷ್ಟವಾದ ಹೆಜ್ಜೆಗಳು, ಚೆಲುವಾದ ಅಂಗಶುದ್ಧಿ ಹಾಗೂ ಪ್ರಬುದ್ದತೆಯಿಂದ ಕೂಡಿದ ಅಭಿನಯದೊಂದಿಗೆ ಕಾರ್ಯಕ್ರಮಕ್ಕೇ ಉತ್ತಮವಾದ ಚಾಲನೆಯೇ ದೊರಕಿತು.

    ಎರಡನೆಯದಾಗಿ ಪ್ರದರ್ಶನಗೊಂಡಿರುವುದು ‘ಪೂತನ’ ರಂಗರೂಪಾತ್ಮಕ ಪ್ರಯೋಗ. ಪುಣೆಯ ಸ್ವರದ ಭಾವೆ ಹಾಗೂ ಈಶ ಪಿಂಗ್ಳೈ ಇಬ್ಬರು ಕಲಾವಿದರ ಜೋಡಿ ರಾಕ್ಷಸಿ ಪೂತನಿಯ ಮನದ ಮಾತುಗಳನ್ನು ತೆರೆದಿಟ್ಟರು. ದೇಹ ಭಾಷೆಯನ್ನು ಬಳಸಿಕೊಂಡು, ರಂಗಭೂಮಿಯ ಚಲನೆಗಳನ್ನು ಅಳವಡಿಸಿಕೊಂಡು, ಭರತನಾಟ್ಯದ ಜತಿಗಳ ಮೂಲಕವೇ ಪೂತನಿಯ ಕತೆಯನ್ನು ತಲುಪಿಸುವ ಪ್ರಯತ್ನ ನಿಜಕ್ಕೂ ಒಂದು ಉತ್ತಮ ಪ್ರಯೋಗವಾಗಿ ಮೂಡಿಬಂತು. ಪೂತನಿಯ ಸಾವನ್ನು ದೃಶ್ಯೀಕರಿಸಿದ ಪರಿ ಆಕೆಯ ಮೇಲೇ ಕನಿಕರಿಸುವಷ್ಟು ಪರಿಣಾಮಕಾರಿಯಾಗಿತ್ತು. ಪ್ರಥ್ವಿನ್ ಉಡುಪಿಯವರು ಮಾಡಿದ ಬೆಳಕಿನ ವಿನ್ಯಾಸ ಪ್ರಯೋಗದ ಚೆಂದವನ್ನು ಇನ್ನಷ್ಟು ಹೆಚ್ಚಿಸಿತು.

    ಕೊನೆಯದಾಗಿ ಪ್ರದರ್ಶನಗೊಂಡ ರೂಪಕ ‘ರಾಮ’ ಸೃಷ್ಟಿ ಫೌಂಡೇಶನ್ ಇದರ ಡಾ. ಮಂಜರೀಚಂದ್ರ ಪುಷ್ಪರಾಜ್ ಬಳಗದವರು ಪ್ರಸ್ತುತ ಪಡಿಸಿದ್ದರು. ರಾಮನ ಕುರಿತು ಮಹಾಕವಿ ಸ್ವಾತಿ ತಿರುನಾಳ್ ರಚಿತ ಭಾವಯಾಮಿ ರಘುರಾಮ‌ ಕೃತಿಯನ್ನು ಮೂಲವಾಗಿಟ್ಟುಕೊಂಡು ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧಾ ಕಾಂಡವನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿ ಪಡಿಸಲಾಯಿತು. ಕಥೆಯ ನಿರೂಪಣೆ, ಶುರುವಿನಿಂದ ಕೊನೆಯ ತನಕ ಎಲ್ಲಾ ಕಲಾವಿದರ ಚುರುಕಿನ ನಡೆ ಅಲ್ಲದೇ ತಮ್ಮ‌ನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ನೃತ್ಯರೂಪಕದ ಚೆಂದವಾದ ಪ್ರದರ್ಶನಕ್ಕೇ ಕಾರಣವಾಯಿತು. ಬಾಲಕೃಷ್ಣ ಕೊಡವೂರು ಇವರ ಬೆಳಕಿನ ವಿನ್ಯಾಸವೂ ಪೂರಕವಾಗಿತ್ತು ಎನ್ನಬಹುದು. ಒಟ್ಟಿನಲ್ಲಿ ನೃತ್ಯ ವಾಹಿನಿ ಒಂದು ಸುಂದರವಾದ ನೃತ್ಯಪ್ರಸ್ರುತಿಗಳ‌ ಗೊಂಚಲಾಗಿ ನೋಡುಗರಿಗೆ ಮುದನೀಡಿದುದಂತು ಸತ್ಯ. ಈ ಕಾರಣಕ್ಕೇ ಕಾರ್ಯಕ್ರಮದ ಆಯೋಜನೆಗಾಗಿ ಶ್ರಮಿಸಿದ ಸನಾತನ‌ ನಾಟ್ಯಾಲಯದ ವಿದುಷಿ ಶ್ರೀಲತಾ ನಾಗರಾಜ್ ಹಾಗೂ ನೃತ್ಯಾಂಗನ್ ಸಂಸ್ಥೆಯ ರಾಧಿಕಾ ಶೆಟ್ಟಿ ಅಭಿನಂದನಾರ್ಹರು.

    ಮಂಜುಳಾ ಸುಬ್ರಹ್ಮಣ್ಯ

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಕನ್ನಡದ ಕಂಪು ಸರಣಿ -5’ | ಡಿಸೆಂಬರ್ 21
    Next Article ಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ
    roovari

    Add Comment Cancel Reply


    Related Posts

    ಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ

    December 10, 2025

    ಮಂಗಳೂರಿನಲ್ಲಿ ‘ಕನ್ನಡದ ಕಂಪು ಸರಣಿ -5’ | ಡಿಸೆಂಬರ್ 21

    December 10, 2025

    ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಶೆಣೈ ಹಾಗೂ ಮೇಧಾ ರಾವ್ ನೃತ್ಯ ಪ್ರದರ್ಶನ

    December 10, 2025

    ಕಲ್ಕೂರ ಪ್ರತಿಷ್ಠಾನದಿಂದ ಚಿತ್ರ ರಚನಾ ಸ್ಪರ್ಧೆ | ಕೊನೆಯ ದಿನಾಂಕ ಡಿಸೆಂಬರ್ 25

    December 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.