Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿ ಇವರಿಗೆ ನುಡಿ ನಮನ

    June 11, 2025

    ಡಾ. ಜಿ.ಎಲ್. ಹೆಗಡೆ ಮತ್ತು ಸರ್ಪಂಗಳ ಈಶ್ವರ ಭಟ್ ಇವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’

    June 11, 2025

    ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈಯವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ

    June 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ ಮತ್ತು ‘ಭಾವಸ್ಥ’ ನೃತ್ಯ ಕಾರ್ಯಕ್ರಮ 
    Bharathanatya

    ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ ಮತ್ತು ‘ಭಾವಸ್ಥ’ ನೃತ್ಯ ಕಾರ್ಯಕ್ರಮ 

    June 3, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತಪಡಿಸುವ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ರಚಿಸಿರುವ ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ, ‘ಭಾವಸ್ಥ’ ಭಕ್ತಿ ಮತ್ತು ನಾಯಕ ಭಾವ ಕೇಂದ್ರಿತ ಭರತನಾಟ್ಯ ಮಾರ್ಗ ನೃತ್ಯ ಪ್ರಸ್ತುತಿ ಕಾರ್ಯಕ್ರಮ ಜೂನ್ 4ರಂದು ಸಂಜೆ 4.30ಕ್ಕೆ ಪುರಭವನದಲ್ಲಿ ನಡೆಯಲಿದೆ ಎಂದು ಬಿ. ಸುಮಂಗಲಾ ರತ್ನಾಕರ್ ರಾವ್ ತಿಳಿಸಿದರು.

    ಕಲಾಕೇಂದ್ರದ ಘಟಕವಾದ ಹೀರಾ ಪಬ್ಲಿಕೇಷನ್ಸ್ ಮೂಲಕ ‘ನೃತ್ಯ ಕಾವ್ಯ’ ಭರತನಾಟ್ಯ ಮಾರ್ಗದ ನೃತ್ಯ ಬಂಧಗಳು ಎಂಬ ಭರತನಾಟ್ಯ ನೃತ್ಯ ಸಾಹಿತ್ಯದ ಕನ್ನಡ ಭಾಷೆಯ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಪುಸ್ತಕದ 9 ಹಾಡುಗಳಿಗೆ ದಕ್ಷಿಣ ಭಾರತದ 6 ಮಂದಿ ಯುವ ನೃತ್ಯ ಕಲಾವಿದರು. ‘ಭಕ್ತಿ, ನಾಯಕ ಭಾವಕೇಂದ್ರಿತ ಭಾವಸ್ಥ ಆತನ ಭಾವಛಾಯೆಗಳು’ ಎಂಬ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.

    ವಿದ್ವಾನ್‌ ಬಿ. ದೀಪಕ್ ಕುಮಾರ್‌ ಪುತ್ತೂರು, ವಿದ್ವಾನ್ ಪ್ರಮೋದ್‌ ಕುಮಾರ್ ಉಳ್ಳಾಲ, ವಿದ್ವಾನ್ ಸುಜಯ್ ಶ್ಯಾನುಬಾಗ್‌ ಹುಬ್ಬಳ್ಳಿ, ವಿದ್ವಾನ್ ವಿಜಯಕುಮಾರ್ ಎಸ್‌. ಚೆನ್ನೈ, ವಿದ್ವಾನ್ ಅನಿಲ್ ಅಯ್ಯ‌ರ್ ಬೆಂಗಳೂರು ಮತ್ತು ವಿದ್ವಾನ್ ಸಾಗರ್ ಟಿ.ಎಸ್. ತುಮಕೂರು ಇವರಿಂದ ‘ಭಾವಸ್ಥ’ ನೃತ್ಯ ಕಾರ್ಯಕ್ರಮ ನಡೆಯಲಿದೆ. ಚೆನ್ನೈನ ವಿದ್ವಾನ್ ಶ್ರೀಕಾಂತ ಗೋಪಾಲಕೃಷ್ಣ ಗಾಯನ, ವಿದುಷಿ ಬಿ.ಸುಮಂಗಲಾ ರಾವ್ ನಟುವಾಂಗ, ಬೆಂಗಳೂರಿನ ವಿನಯ್ ನಾಗರಾಜ್ ಮೃದಂಗ ಹಾಗೂ ಮೈಸೂರಿನ ಕೇಶವ ಮೋಹನ ವಯೋಲಿನ್ ಸಾಥ್ ನೀಡಲಿದ್ದಾರೆ.

    ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್‌ ಉದ್ಘಾಟಿಸುವುದರೊಂದಿಗೆ ನಟಿ ಡಾ. ಸೀತಾ ಕೋಟೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನಯ್ ಭಟ್ ಪಿ.ಜೆ., ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಅಧ್ಯಕ್ಷ ಯು.ಕೆ. ಪ್ರವೀಣ್, ಶಿಕ್ಷಣ ತಜ್ಞ ಶ್ರೀರಾಮ ರಾವ್ ಸುರತ್ಕಲ್ ಮತ್ತಿತರರು ಭಾಗವಹಿಸುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ರಂಗ ಭೂಮಿ ಆನಂದೋತ್ಸವ’ | ಜೂನ್ 3 ಮತ್ತು 4ರಂದು
    Next Article ಸಾರಡ್ಕದಲ್ಲಿ “ಮಂಜುನಾದ” ಸಂಗೀತ ಕಛೇರಿ
    roovari

    Add Comment Cancel Reply


    Related Posts

    ನೃತ್ಯ ಶಂಕರ ಸರಣಿಯ ‘ಶತ ಸಂಭ್ರಮ’

    June 10, 2025

    ಕಲಾರಸಿಕರ ರಂಜಿಸಿದ ‘ಯುವ ನೃತ್ಯೋತ್ಸವ-2025’

    June 10, 2025

    ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’

    June 10, 2025

    ಲೋಕಾರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications