Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಅಗಲಿದ ಕಲಾಸಾಧಕರಿಗೆ ನುಡಿನಮನ 
    Drama

    ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಅಗಲಿದ ಕಲಾಸಾಧಕರಿಗೆ ನುಡಿನಮನ 

    April 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ವತಿಯಿಂದ ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 29-03-2024ರಂದು ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು.
    ನಮ್ಮ ನಡುವೆ ಸದಾ ಸ್ನೇಹ ಪೂರ್ಣ ಚಟುವಟಿಕೆಗಳಿಂದ ಮಾದರಿ ಮಾರ್ಗದರ್ಶಕರಾಗಿದ್ದು ಜನ ಮನ್ನಣೆಗಳಿಸಿ ಇತ್ತೀಚೆಗೆ ದಿವಂಗತರಾದ ಮಾಧ್ಯಮ ತಜ್ಞ ಮನೋಹರ ಪ್ರಸಾದ್, ಚಲನಚಿತ್ರ ಹಾಗೂ ರಂಗನಟ ವಿ.ಜಿ. ಪಾಲ್, ಗಾಯಕ, ಪ್ರಸಾದನಕಾರ  ಎಸ್. ರಾಮದಾಸ್, ಸಂಗೀತ ಕ್ಷೇತ್ರದ ಗಿಟಾರಿಸ್ಟ್ ನವೀನ್ ಚಂದ್ರ ಎಂ. ಅವರಿಗೆ ತೋನ್ಸೆ ಅವರು ನುಡಿನಮನ ಸಲ್ಲಿಸಿ, ಒಕ್ಕೂಟದ ವತಿಯಿಂದ  ಶ್ರದ್ಧಾಂಜಲಿ ಅರ್ಪಿಸಲಾಯಿತು.
    ಕಾರ್ಯಕ್ರಮದಲ್ಲಿ ಮಾತನಾಡಿದ ಹರಿದಾಸರಾದ ತೋನ್ಸೆ ಪುಷ್ಕಳ ಕುಮಾರ್ “ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರನ್ನು ಸ್ಮರಿಸುವುದು ಸಾಂಸ್ಕೃತಿಕ ಸಂಘಟನೆಗಳ ಆದ್ಯ ಕರ್ತವ್ಯ.” ಎಂದರು.
    ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮುಂದಿನ ಏಪ್ರಿಲ್, ಮೇ ಹಾಗೂ ಜೂನ್ ಮೂರು ತಿಂಗಳ ಒಕ್ಕೂಟದ ಕಾರ್ಯಕ್ರಮಗಳ ಮುನ್ನೋಟ ನೀಡಿದರು. ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ ಅವರು ಸ್ವಾಗತಿಸಿ, ಅನಾರೋಗ್ಯದಲ್ಲಿದ್ದ ಸದಸ್ಯ ಕಲಾವಿದರಿಗೆ ಸಹಾಯ ವಿತರಿಸಿದ ವಿವರ ಸಲ್ಲಿಸಿ ಮಂಜೂರಾತಿ ಪಡೆದರು. ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಮುರಳಿಧರ ಕಾಮತ್, ಮಲ್ಲಿಕಾ ಶೆಟ್ಟಿ, ರಮೇಶ್ ಸಾಲ್ಯಾನ್, ಮೋಹನ್ ಪ್ರಸಾದ್ ನಂತೂರ್, ಹುಸೇನ್ ಕಾಟಿಪಳ್ಳ, ಸತೀಶ್, ಧನುರಾಜ್, ದಿನಕರ ಕಾವೂರು , ಸಂತೋಷ್ ಅಂಚನ್, ರವಿ, ರಾಮ್ ಕುಮಾರ್, ಹರೀಶ್ ದೇವಾಡಿಗ, ಜ್ಯೋತಿ ಬಿ. ಕೆ., ಶ್ರೀ ವಿದ್ಯಾ, ಸುಶ್ಮಿತಾ, ಧನ್ಯ ಶ್ರೀ, ಸುಮಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಜತೆ  ಕಾರ್ಯದರ್ಶಿ ಚೈತ್ರಾ ಸುವರ್ಣ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷ ಲಾವಣ್ಯ-24’ ಸರಣಿ ಕಾರ್ಯಕ್ರಮದಲ್ಲಿ ‘ಭೃಗುಶಾಪ’ ತಾಳಮದ್ದಳೆ 
    Next Article ಮೈಸೂರಿನಲ್ಲಿ ‘ಕಿಶೋರ ಗಾಯನ ನಮನ’ | ಏಪ್ರಿಲ್ 7, 14 ಮತ್ತು 21
    roovari

    Add Comment Cancel Reply


    Related Posts

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    ತೆಕ್ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನಕಂಡ “ಸೂರ್ಯ ಚಂದ್ರ” ಮಕ್ಕಳ ನಾಟಕ

    June 6, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.