Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ‘ಕೊಂಕಣಿ ಕಲೋತ್ಸವ- 2025’ | ಡಿಸೆಂಬರ್ 14

    December 12, 2025

    ಮೈಸೂರಿನಲ್ಲಿ ರಂಗಸಂಪದ ಸುವರ್ಣ ಸಂಭ್ರಮದ ಪ್ರಯುಕ್ತ ನಾಟಕ ಪ್ರದರ್ಶನ | ಡಿಸೆಂಬರ್ 13 ಮತ್ತು 14

    December 12, 2025

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ರಕ್ತ ಧ್ವಜ’ ನಾಟಕ ಪ್ರದರ್ಶನ | ಡಿಸೆಂಬರ್ 14   

    December 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೊಡಿನಲ್ಲಿ ದಿ.ಪ್ರೊ. ಪಿ.ಸುಬ್ರಾಯ ಭಟ್ ಜನ್ಮ ಶತಮಾನೋತ್ಸವವನ್ನು ಉದ್ಘಾಟನೆ
    News

    ಕಾಸರಗೊಡಿನಲ್ಲಿ ದಿ.ಪ್ರೊ. ಪಿ.ಸುಬ್ರಾಯ ಭಟ್ ಜನ್ಮ ಶತಮಾನೋತ್ಸವವನ್ನು ಉದ್ಘಾಟನೆ

    February 27, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    27 ಫೆಬ್ರವರಿ 2023, ಕಾಸರಗೋಡು: ಗುರುಗಳನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವುದು ನಮ್ಮ ನಾಡಿನ ಸಂಸ್ಕೃತಿ  – ನಾಡೋಜ ಡಾ.ಮಹೇಶ್ ಜೋಶಿ

    ಅಶಾಶ್ವತವಾದ ದೇಹಕ್ಕೆ ಶಾಶ್ವತವಾದ ಅರಿವನ್ನು ನೀಡಿ ಜಗತ್ತನ್ನೇ ಗೆಲ್ಲುವ ಶಕ್ತಿಯನ್ನು ನೀಡುವವರು ಗುರುಗಳು. ಅಂತಹ ಗುರುಗಳನ್ನು ಸ್ಮರಿಸಿ ಗೌರವವನ್ನು ಸಲ್ಲಿಸುವುದು ನಮ್ಮ ಧರ್ಮ ಮತ್ತು ಸಂಸೃತಿ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.
    26.2.2023ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾದ ದಿ.ಪ್ರೊ. ಪಿ.ಸುಬ್ರಾಯ ಭಟ್ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಕನ್ನಡದ ಮೇಲೆ ಅಪಾರ ಪ್ರೀತಿ ಅಭಿಮಾನ ಹೊಂದಿದ ಭಟ್ಟರು ಕನ್ನಡ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಪ್ರೋತ್ಸಾಹ ನೀಡುತ್ತಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ವಿವೇಕ ರೈ ಮಾತನಾಡಿ ಪ್ರೊ.ಸಬ್ರಾಯ ಭಟ್ಟರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಂತ ಹಂತವಾಗಿ ಕನ್ನಡ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಿ ಸದಾ ಕಾಲ ಕನ್ನಡ ಹೋರಾಟವನ್ನು ನಡೆಸಿದವರು ಎಂದರು. ಕಾರ್ಯಕ್ರಮದ ಅಧ್ಕ್ಷತೆಯನ್ನು ವಹಿಸಿದ್ದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಮಾತನಾಡಿ, ಇದು ಅತ್ಯಂತ ಮಹತ್ವದ ಕಾರ್ಯಕ್ರಮ, ಉನ್ನತ ವ್ಯಕ್ತಿತ್ವದ ಸುಬ್ರಾಯ ಭಟ್ಟರಿಗೆ ಇದು ಸಮಯೋಚಿತವಾದುದು ಎಂದರು. ಕೆಂದ್ರ ಅಕಾಡಮಿಯ ವಿಶ್ರಾಂತ ಪ್ರದೇಶಿಕ ಕಾರ್ಯದರ್ಶಿ ಎಸ್. ಪಿ. ಮಹಾಲಿಂಗೇಶ್ವರ ಅವರು ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.ಪ್ರೊ. ಪಿ. ಸುಬ್ರಾಯ ಭಟ್ಟರ ಭಾವಚಿತ್ರವನ್ನು ಕಾರ್ಯಕ್ರಮದ ಅಂಗವಾಗಿ ಅವರ ಹಿರಿಯ ಪುತ್ರ ಕೇಶವ ಭಟ್ ಅನಾವರಣಗೊಳಿಸಿದರು. ಪ್ರೊ. ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಮಿತಿ ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಸರಕಾರಿ ಕಾಲೇಜು ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಈ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.
    ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ಪಿ. ಕೃಷ್ಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್. ಸ್ವಾಗತಿಸಿ, ಡಾ. ವಿದ್ಯಾಲಕ್ಷ್ಮಿ ಕುಂಬ್ಳೆ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಗುರುರಾಜ ಮಾರ್ಪಳ್ಳಿಯವರ ‘ಅವ್ವ ನನ್ನವ್ವ’ ಕೃತಿ ಬಿಡುಗಡೆ
    Next Article ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ನಿಧನ

    November 27, 2025

    ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ “ಕೃಷ್ಣಾನಂದ ಲಹರಿ”

    November 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.