ಮೈಸೂರು : ರಂಗಚಂದಿರ (ರಿ.) ಬೆಂಗಳೂರು ಆಯೋಜಿಸುವ ಕಾಜಾಣ ಅರ್ಪಿಸುವ ಒಡನಾಡಿ ಬಂಧು ಸಿಜಿಕೆ-75 ಮಾಸದ ನೆನಪು ಸರಣಿ ಕಾರ್ಯಕ್ರಮದ ಅಂಗವಾಗಿ ‘ಏಷಿಯ ಬುಕ್ಕ ಆಫ್ ರೆಕಾರ್ಡ್ಸ್’ ಸೇರ್ಪಡೆಯಾಗಿರುವ ‘ಪಂಚಗವ್ಯ’ ಪಂಚಕಾವ್ಯಗಳ ಅಭಿನಯಗುಚ್ಛ ನಾಟಕ ಪ್ರದರ್ಶನವನ್ನು ದಿನಾಂಕ 05 ಜುಲೈ 2025ರಂದು ಸಂಜೆ 7-00 ಗಂಟೆಗೆ ಮೈಸೂರು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಮೈಸೂರಿನ ಜಿ.ಪಿ.ಐ.ಇ.ಆರ್. ರಂಗ ತಂಡದ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ಗೋಕುಲ ಸಹೃದಯನ ಅಸಾಮಾನ್ಯ ದೃಶ್ಯ ಸಂಪುಟ ಏಕವ್ಯಕ್ತಿ ರಂಗಪ್ರವೇಶದ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಡಾ. ಎಸ್.ಎಲ್.ಎನ್. ಸ್ವಾಮಿ ಇವರು ಮಾಡಿರುತ್ತಾರೆ.