Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ
    Literature

    ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ

    January 23, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗಂಗಾವತಿ : ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧಿವೇಶನವನ್ನು ಮೇ ತಿಂಗಳಲ್ಲಿ ದಾವಣಗೇರಿಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಕವಿಗೋಷ್ಠಿ ಹಮ್ಮಿಕೊಂಡಿದ್ದು, ಕವಿತೆಗಳನ್ನು ಆಹ್ವಾನಿಸಿದೆ. ಈ ಕುರಿತು ಪರಿಷತ್ ವಿಭಾಗೀಯ ಪ್ರಮುಖ ಅಶೋಕ ರಾಯ್ಕ‌ರ್, ನಾಗಪ್ಪ ಬಡಿಗೇರಿ ತಿಳಿಸಿದ್ದಾರೆ.

    ಸಾಹಿತ್ಯವೂ ಸೇರಿದಂತೆ ಕಲೆ, ಶಿಕ್ಷಣ, ನಡೆ-ನುಡಿ, ಉಡುಗೆ-ತೊಡುಗೆ, ಪರಿಸರ, ಆಚರಣೆ, ವಾಣಿಜ್ಯ ಇತ್ಯಾದಿ ನಮ್ಮ ರಾಷ್ಟ್ರಜೀವನದ ವಿವಿಧ ರಂಗಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡಾಗ ನಷ್ಟಗೊಂಡ ಸ್ವತ್ವವನ್ನು ಮತ್ತೆ ಗಳಿಕೊಳ್ಳಬೇಕಿತ್ತಷ್ಟೆ. ಸ್ವತ್ವವನ್ನು ಕಳಕೊಂಡರೆ ಸ್ವಾತಂತ್ರ್ಯವನ್ನು ಕಳಕೊಂಡಂತೆ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದೆಂದರೆ ಸ್ವತ್ವವನ್ನು ಪಡಕೊಳ್ಳುವುದೆಂದೇ ಅರ್ಥ, ಎಲ್ಲಾ ರಂಗಗಳಲ್ಲೂ ಸ್ವತ್ವದ ಅಭಿವ್ಯಕ್ತಿ ಸಾಧ್ಯವಾದಾಗ ಗಳಿಸಿಕೊಂಡ ಸ್ವಾತಂತ್ರ್ಯ ಪೂರ್ಣವಾಯಿತೆಂದುಕೊಳ್ಳಬಹುದು.

    ಎಲ್ಲಾ ರಂಗಗಳಲ್ಲಿ ನಾವು ಕಳೆದುಕೊಂಡ ನಮ್ಮತನವನ್ನು ಮತ್ತೆ ಪಡೆಯುವ ಸಾಧ್ಯತೆಗಳನ್ನು, ಅವು ಪಡೆಯಬೇಕಾದ ಅಭಿವ್ಯಕ್ತಿಯ ಬಗೆಯನ್ನು ಇತ್ಯಾದಿ ಹತ್ತು ಹಲವು ಆಯಾಮಗಳಲ್ಲಿ ಕೆಲವನ್ನಾದರೂ ಸ್ಪರ್ಶಿಸಿ ಉತ್ಕೃಷ್ಟ ಕಾವ್ಯಗುಣವುಳ್ಳ ಸ್ವರಚಿತ ಕವಿತೆಗೆ ಈ ಕವಿಗೋಷ್ಠಿಯಲ್ಲಿ ವಾಚನಕ್ಕೆ ಅವಕಾಶವಿದೆ. ಕವಿತೆಗಳು ಹದಿನಾರರಿಂದ ಇಪ್ಪತ್ತೆರಡು ಸಾಲುಗಳ ಮಿತಿಯಲ್ಲಿ ಮತ್ತು ಭಾರತೀಯ ಭಾಷೆಯಲ್ಲಿರಲ್ಲಿರಬೇಕು. ಕನ್ನಡದ ಹೊರತಾದ ಕವಿತೆಗಳ ಕನ್ನಡ ಭಾವಾನುವಾದವನ್ನು ಕಳುಹಿಸಬೇಕು. ಆಯ್ಕೆಯಾದ ಕವಿತೆಗಳನ್ನು ರಾಜ್ಯ ಅಧಿವೇಶನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು. ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ. ಕವಿತೆಗಳನ್ನು ದಿನಾಂಕ 31 ಜನವರಿ 2025ರೊಳಗೆ ಕಳುಹಿಸಬೇಕು. ಕವಿತೆಗಳನ್ನು ವಾಟ್ಸಾಪಿನಲ್ಲಿ ವರ್ಡ್ ಫೈಲಿನಲ್ಲಿಯೇ ಸುಜಾತಾ ಹೆಗಡೆ 9480007488 ಈ ಸಂಖ್ಯೆಗೆ ಕವಿತೆ ಜತೆಗೆ ಹೆಸರು, ವಯಸ್ಸು ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಿ ಕಳುಹಿಸಬೇಕು.

    Literature
    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ’ | ಜನವರಿ 26
    Next Article ಉಡುಪಿಯ ಬಡಗುಪೇಟೆಯಲ್ಲಿ ಸಾಂಝಿ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.