Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’

    December 31, 2025

    ರಿಶಲ್ ಬ್ರಿಟ್ನಿ ಫೆರ್ನಾಂಡಿಸ್‌ಗೆ ‘ದೇಶ್ ರತ್ನಾ’ ಪ್ರಶಸ್ತಿ

    December 31, 2025

    ‘ಕಾವ್ಯಾಂ ವ್ಹಾಳೊ- 10’ ಕೊಂಕಣಿ ಕವಿಗೋಷ್ಠಿ | ಜನವರಿ 03

    December 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಕವಿಗೋಷ್ಠಿಗೆ ಕಾಯಕಲ್ಪ
    Dance

    ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಕವಿಗೋಷ್ಠಿಗೆ ಕಾಯಕಲ್ಪ

    December 9, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗುರುವಾಯನಕೆರೆ : ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 27 ನವೆಂಬರ್ 2025ರಿಂದ ನಾಲ್ಕು ದಿನಗಳ ಕಾಲ ಎಕ್ಸೆಲ್ ಹಬ್ಬ – ಅಕ್ಷರೋತ್ಸವ-2025 ನಡೆಯಿತು.

    ಈ ಸಂಭ್ರಮದ ಆರಂಭದ ದಿನ ನಾಡು – ನುಡಿಯ ಅಕ್ಷರೋತ್ಸವ ರಾಷ್ಟ್ರೀಯ ಸಮ್ಮೇಳನದ ಕವಿಗೋಷ್ಠಿಯು ಸುಂದರವಾಗಿ ಮೂಡಿ ಬಂತು. ಸುಗ್ರಾಸ ಭೋಜನದ ತರುವಾಯ, ತಂಪಾದ ವಾತಾವರಣದಲ್ಲಿ 35 ಮಂದಿ ಕವಿಗಳ ಗೋಷ್ಠಿ ನಡೆದರೂ ಸೇರಿದ್ದ ಪ್ರೇಕ್ಷಕರನ್ನು ನಿದ್ದೆ ಕಾಡಲೇ ಇಲ್ಲ. ಕಾಲೇಜಿನ ಕನ್ನಡ ಉಪನ್ಯಾಸಕರು ಅಷ್ಟು ವೈವಿಧ್ಯಮಯವಾಗಿ ಕವಿಗೋಷ್ಠಿಯನ್ನು ಸಂಯೋಜಿಸಿದ್ದರು. ಕವಿಗೋಷ್ಠಿಯ ಆರಂಭದಲ್ಲಿ ಗೋಷ್ಠಿಗೆ ಆಯ್ಕೆಯಾಗಿದ್ದ ಕವಿಯು ತಮ್ಮ ಕವನವನ್ನು ವಾಚಿಸುತ್ತಾರೆ. ಅನಂತರ ಕೆಲವು ರಾಗ ಸಂಯೋಜನೆಗೆ ಹೊಂದಿಕೊಳ್ಳುವ ಕವನಗಳನ್ನು ಸಂಗೀತದೊಂದಿಗೆ ಹಾಡಲಾಯಿತು. ಜತೆಗೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಕೆಲವೊಂದು ಕವನಗಳ ಆಶಯವನ್ನು ಕಾಲೇಜಿನ ಉಪನ್ಯಾಸಕ ಸಂಜೀವ ಕೊಡಗು ಇವರು ಚಿತ್ರ ರಚಿಸುವ ಮೂಲಕ ತಿಳಿಸಿದರು. ಹೀಗೆ ಕವನ ವಾಚನ-ಗಾಯನ-ನೃತ್ಯ-ಕುಂಚ ಸಹಿತವಾದ ವೈವಿಧ್ಯತೆಯಿಂದ ಮೂಡಿ ಬಂದ ಕವಿಗೋಷ್ಠಿಯು ಸೇರಿದ್ದ ಸಾಹಿತ್ಯಾಸಕ್ತರ ಮನ ಗೆದ್ದಿತು. ಸುಮಾರು 4-30 ಗಂಟೆಗಳ ಕಾಲ ನಡೆದ ಕವಿಗೋಷ್ಠಿಯು ಯಾರಿಗೂ ಬೋರ್ ಅನ್ನಿಸಲಿಲ್ಲ.

    ಈ ಕವಿಗೋಷ್ಠಿಯಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ ಕವಿಗಳು ತಮ್ಮ ಕಲ್ಪನೆ, ಚಿಂತನೆಗಳನ್ನು ಸಮರ್ಥವಾಗಿ ಮಂಡಿಸಿದರು. ಒಂದು ಕವನವು ಸಂಗೀತ, ಗಾಯನವು ಸೇರಿದಾಗ ಅದ್ಭುತವಾಗಿ ಮೂಡಿ ಬರುತ್ತದೆ ಎಂಬುವುದಕ್ಕೆ ಈ ಕವಿಗೋಷ್ಠಿಯು ಸಾಕ್ಷಿಯಾಯಿತು. ಕಾಲೇಜಿನ ಪ್ರಾಧ್ಯಾಪಕಿ ಅನೂಷಾ ಸೇರಿದಂತೆ ವಿದ್ಯಾರ್ಥಿಗಳು ಹಾಡುಗಳನ್ನು ಹಾಡಿದರು. ಉಪನ್ಯಾಸಕ ರಘು ಮಾಸ್ತರ್ ಇವರ ನಿರ್ದೇಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ವಿವೇಕ ಬಾಳಿಗ (ತಬಲಾ), ಕಮಲಾಕ್ಷ ಗುಡಿಗಾರ್ (ಕೀಬೋರ್ಡ್) ಸಹಕರಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಕವಿಗೋಷ್ಠಿಗೆ ಕಿವಿಯಾದರು. ಇದೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕವಿಗಳಾಗಿ ವೇದಿಕೆ ಏರಿದರೆ, ಈ ಕವಿಗೋಷ್ಠಿಯು ಇನ್ನಷ್ಟೂ ಸಾರ್ಥಕವಾಗುತ್ತದೆ. ಕಾಲೇಜಿನ ಅಧ್ಯಕ್ಷರಾದ ಬಿ. ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರಾದ ಡಾ. ನವೀನ್ ಕುಮಾರ ಮರಿಕೆ ಹಾಗೂ ಡಾ. ಪ್ರಜ್ವಲ್ ಕಜೆ ಇವರ ಉಸ್ತುವಾರಿಕೆಯಲ್ಲಿ ಕವಿಗೋಷ್ಠಿ ನಡೆಯಿತು.

    baikady dance drawing Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleತುಳು ತಾಳಮದ್ದಲೆ ಸಪ್ತಾಹದಲ್ಲಿ ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿಗೆ ಗೌರವ
    Next Article ಶಿರ್ವದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’

    December 31, 2025

    ರಿಶಲ್ ಬ್ರಿಟ್ನಿ ಫೆರ್ನಾಂಡಿಸ್‌ಗೆ ‘ದೇಶ್ ರತ್ನಾ’ ಪ್ರಶಸ್ತಿ

    December 31, 2025

    ‘ಕಾವ್ಯಾಂ ವ್ಹಾಳೊ- 10’ ಕೊಂಕಣಿ ಕವಿಗೋಷ್ಠಿ | ಜನವರಿ 03

    December 31, 2025

    ‘ಕಡೆಂಗೋಡ್ಲು ಪ್ರಶಸ್ತಿ’ಗೆ ಕವನ ಸಂಕಲನಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 15

    December 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.