ಪುತ್ತೂರು : ಹಲಸು ಹಣ್ಣುಗಳ ‘ಕವಿಗೋಷ್ಠಿ’ಯು ಹಲಸು ಮೇಳದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದಿನಾಂಕ 06 ಜೂನ್ 2025ರಂದು ಸಂಜೆ 6-00 ಗಂಟೆಗೆ ನಡೆಯಲಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಅಧ್ಯಕ್ಷತೆ ವಹಿಸಲಿದ್ದು, ಉಮಾಶಂಕರಿ ಎ.ಪಿ. ಮರಿಕೆ ಇವರು ಸಂಯೋಜನೆ ಮಾಡಲಿದ್ದಾರೆ. ಈ ಕವಿಗೋಷ್ಠಿಯಲ್ಲಿ ಒಂದು ಕವಿಗೆ ಮೂರು ನಿಮಿಷಗಳ ಅವಕಾಶವಿದ್ದು, ಕವಿಗಳು ತಮ್ಮ ಹೆಸರನ್ನು ಸಂಯೋಜಕರಲ್ಲಿ ನೋಂದಾಯಿಸಿಕೊಳ್ಳುವುದು. ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9449741592 ಸಂಖ್ಯೆಯನ್ನು ಸಂಪರ್ಕಿಸಿರಿ.