ಮಡಿಕೇರಿ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ಮಡಿಕೇರಿಯ ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 28 ಸೆಪ್ಟೆಂಬರ್ 2025ರ ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ಮಡಿಕೇರಿಯ ಶೋಭಾ ಸುಬ್ಬಯ್ಯನವರ ಮನೆಯಲ್ಲಿ ಕಾವ್ಯ ಕಮ್ಮಟ ಏರ್ಪಡಿಸಲಾಗಿದ್ದು, ಖ್ಯಾತ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಇವರು ನಡೆಸಿಕೊಡಲಿದ್ದಾರೆ.
ಭಾಗವಹಿಸಲು ಇಚ್ಚೆ ಉಳ್ಳವರು 88614 05738 ವೈಲೇಶ ಪಿ.ಎಸ್. ಕೊಡಗು ಹಾಗೂ 94483 66715 ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಬಳಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಯಪಡಿಸುತ್ತೇವೆ. ಪ್ರವೇಶ ಶುಲ್ಕ ನೂರು ರೂಪಾಯಿಗಳನ್ನು ಶೋಭಾ ಸುಬ್ಬಯ್ಯನವರಿಗೆ ತಲುಪಿಸಬೇಕಾಗಿ ಕೋರಲಾಗಿದೆ. ಇಪ್ಪತ್ತು ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹಿರಿಯ ಕವಿಗಳಾದ ಗಿರೀಶ್ ಎಸ್. ಕಿಗ್ಗಾಲು ಮತ್ತು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್ ಭಾಗವಹಿಸಲಿದ್ದಾರೆ.