Subscribe to Updates

    Get the latest creative news from FooBar about art, design and business.

    What's Hot

    ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಉದ್ಘಾಟನೆ

    June 24, 2025

    ಮಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’

    June 24, 2025

    ರಾಗ ಧನ ಉಡುಪಿಯ ವಾರ್ಷಿಕ ಮಹಾಸಭೆ ಮತ್ತು ರಾಗರತ್ನಮಾಲಿಕೆ- 38

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಜಯಶ್ರೀ ಸಬರದ ಹಾಗೂ ಡಿ. ಕೆ. ರಾಜೇಂದ್ರ ಇವರಿಗೆ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ
    Awards

    ವಿಜಯಶ್ರೀ ಸಬರದ ಹಾಗೂ ಡಿ. ಕೆ. ರಾಜೇಂದ್ರ ಇವರಿಗೆ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ

    June 23, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯ‌ರ್ ಎಜುಕೇಷನ್ ವತಿಯಿಂದ ಆಶಾ ಮತ್ತು ಅಶೋಕ್ ಕುತ್ಯಾರು ಪ್ರಾಯೋಜಿತ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 21 ಜೂನ್ 2025 ರಂದು ಉಡುಪಿಯ ಟಿ.ಮೋಹನದಾಸ ಪೈ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “ಯಕ್ಷಗಾನ, ಭೂತಕೋಲ ಸೇರಿದಂತೆ ಉಡುಪಿ ಪ್ರದೇಶದ ಜಾನಪದ ಕಲಾ ಪ್ರಕಾರಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರು ಪ್ರೊ. ಕು. ಶಿ. ಹರಿದಾಸ ಭಟ್. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಪುಸ್ತಕ ಪ್ರಕಟಿಸುವುದು ಸವಾಲಿನ ಕೆಲಸ. ಆದರೂ ಹರಿದಾಸ ಭಟ್ ಅವರ ‘ಲೋಕಾಭಿರಾಮ’ ಕೃತಿಯ ಆರು ಸಂಪುಟಗಳನ್ನು ಸಮಗ್ರ ಕೃತಿಯಾಗಿ ಪ್ರಕಟಿಸಬೇಕು. ಗೋವಿಂದ ಪೈ ಸಂಶೋಧನ ಕೇಂದ್ರ ಅದಕ್ಕೆ ಮುಂದಾಗಬೇಕು. ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಕೆಲಸ ಮಾಡಿದ್ದರೂ ಹರಿದಾಸ ಭಟ್ ಅವರ ಅರ್ಹತೆಗೆ ಅನುಗುಣವಾಗಿ ಅವರನ್ನು ಗುರುತಿಸುವ ಕೆಲಸ ನಡೆದಿಲ್ಲ. ಅವರ ವ್ಯಕ್ತಿತ್ವವನ್ನು ಹೆಚ್ಚು ಹೆಚ್ಚು ಅರ್ಥೈಸಿಕೊಳ್ಳುವ ಕೆಲಸವಾಗಬೇಕು. ಸರ್ವಾಧಿಕಾರದ ವಿರುದ್ದ ನಡೆದ ಹೋರಾಟದ ಕಥನಗಳಿದ್ದ ಕೃತಿಗಳನ್ನೇ ಆಯ್ಕೆ ಮಾಡಿ ಹರಿದಾಸ ಭಟ್ ಅವರು ಅನುವಾದಿಸಿ ಕನ್ನಡದ ಓದುಗರಿಗೆ ನೀಡಿದ್ದಾರೆ. ಇಂದು ಯಾವ ಜಗತ್ತು ಶಾಂತಿಯ ಕಡೆಗೆ ಚಲಿಸಬೇಕಿತ್ತೋ ಅದು ಅಶಾಂತಿಯ ಕಡೆಗೆ ಚಲಿಸುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಸಂಘರ್ಷ ನಡೆದಿತ್ತು. ಈ ಎಲ್ಲಾ ಬೆಳವಣಿಗೆಗಳು ಹರಿದಾಸ ಭಟ್ ಅವರ ಕೃತಿಗಳನ್ನು ನೆನಪಿಸುತ್ತಿವೆ. ಜಾನಪದ ಪಳೆಯುಳಿಕೆ ಮಾತ್ರವಲ್ಲ, ಅದಕ್ಕೆ ಹೊಸ ಮುಖವೂ ಇದೆ ಎಂದು ತೋರಿಸಿಕೊಟ್ಟವರು ವಿಜಯಶ್ರೀ ಸಬರದ. ಅದೇ ರೀತಿ ಜಾನಪದ ಕ್ಷೇತ್ರಕ್ಕೆ ಡಿ. ಕೆ. ರಾಜೇಂದ್ರ ಅವರ ಕೊಡುಗೆಯೂ ಅಪಾರ. ಈ ಇಬ್ಬರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ” ಎಂದರು.
    ಡಿ. ಕೆ.ರಾಜೇಂದ್ರ ಮತ್ತು ಸಾಹಿತಿ ವಿಜಯಶ್ರೀ ಸಬರದ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ, ಎಂ. ಜಿ. ಎಂ. ಕಾಲೇಜು ಇದರ ಪ್ರಾಂಶುಪಾಲೆಯಾದ ವನಿತಾ ಮಯ್ಯ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಲೋಲಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ತುಂಗ ನಿರೂಪಿಸಿದರು.

    award baikady folk Literature roovari
    Share. Facebook Twitter Pinterest LinkedIn Tumblr WhatsApp Email
    Previous Article2025ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಸಣ್ಣ ಕಥೆಗಳ ಆಹ್ವಾನ  | ಆಗಸ್ಟ್ 20
    Next Article ಲೋಕಾರ್ಪಣೆಗೊಂಡ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ
    roovari

    Add Comment Cancel Reply


    Related Posts

    ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಉದ್ಘಾಟನೆ

    June 24, 2025

    ಮಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’

    June 24, 2025

    ರಾಗ ಧನ ಉಡುಪಿಯ ವಾರ್ಷಿಕ ಮಹಾಸಭೆ ಮತ್ತು ರಾಗರತ್ನಮಾಲಿಕೆ- 38

    June 24, 2025

    ವಿಶೇಷ ಲೇಖನ – ಶಾಸ್ತ್ರೀಯ ಶೈಲಿಯ ವಿಶೇಷ ಕಲಾವಿದ ರಥ ಶಿಲ್ಪಿ ಪರಮೇಶ್ವರಾಚಾರ್ಯ

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.