Subscribe to Updates

    Get the latest creative news from FooBar about art, design and business.

    What's Hot

    ಮೇಲುಕೋಟೆಯಲ್ಲಿ ರಂಗ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭ | ನವೆಂಬರ್ 14

    November 13, 2025

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಅಭಿನಂದನೆ ಮತ್ತು ವಿಚಾರ ಸಂಕಿರಣ | ನವೆಂಬರ್ 16

    November 13, 2025

    ವೀರಲೋಕದ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕನ್ನಡದ ಹಬ್ಬ | ನವೆಂಬರ್ 14ರಿಂದ 16

    November 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವೀರಲೋಕದ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕನ್ನಡದ ಹಬ್ಬ | ನವೆಂಬರ್ 14ರಿಂದ 16
    Book Release

    ವೀರಲೋಕದ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕನ್ನಡದ ಹಬ್ಬ | ನವೆಂಬರ್ 14ರಿಂದ 16

    November 13, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ವೀರಕಪುತ್ರ ಶ್ರೀನಿವಾಸ ಸಾರಥ್ಯದಲ್ಲಿ ವೀರಲೋಕ ಇದರ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕಾರ್ಯಕ್ರಮವು ದಿನಾಂಕ 14, 15 ಮತ್ತು 16 ನವೆಂಬರ್ 2025ರಂದು ಬೆಳಿಗ್ಗೆ ಗಂಟೆ 10-00ರಿಂದ ಬೆಂಗಳೂರಿನ ಜಯನಗರ ಶಾಲಿನಿ ಗ್ರೌಂಡ್ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ನಡೆಯಲಿದೆ.

    ಈ ಬಾರಿಯ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹೊಸ ತಲೆಮಾರಿನ ಲೇಖಕರುಗಳ ಜೊತೆಗೆ ಜನಪ್ರಿಯ ಲೇಖಕರ, ಸಾಹಿತಿಗಳ ಪುಸ್ತಕಗಳ ಜೊತೆಗೆ ಹಳೆಯ ತಲೆಮಾರಿನ ಅಪರೂಪದ ಕೃತಿಗಳು ಸೇರಿದಂತೆ ಲಕ್ಷಾಂತರ ಪುಸ್ತಕಗಳು ಓದುಗರನ್ನು ಸ್ವಾಗತಿಸಲು ವೇದಿಕೆಗಳು ಸಜ್ಜಾಗುತ್ತಿವೆ. 300ಕ್ಕೂ ಹೆಚ್ಚು ಜನಪ್ರಿಯ ಲೇಖಕರು, ಸಾಹಿತಿಗಳು ಈ ಮೂರು ದಿನದ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಈ ಸಂತೆಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಟದ ಸಂತೆ, ಹಾರ್ಟ್ ಅಂಡ್ ಕ್ರಾಫ್ಟ್ ಚಟುವಟಿಕೆಗಳು, ನಾಟಕ, ಯಕ್ಷಗಾನ, ಸಂಗೀತ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ನೆಚ್ಚಿನ ಲೇಖಕನ ಜೊತೆಗೆ ಮೆಚ್ಚಿದ ಓದುಗನ ಮುಖಾಮುಖಿಯ ಅಪರೂಪದ ‘ಓಲೇ : ಓದುಗ – ಲೇಖಕ’ನಲ್ಲಿ ನೂರಕ್ಕೂ ಹೆಚ್ಚು ಓದುಗರು ತಮ್ಮ ನೆಚ್ಚಿನ ಲೇಖಕರ ಜೊತೆಯಲ್ಲಿ ಸಾಹಿತ್ಯದ ಮುಕ್ತ ಚರ್ಚೆಯನ್ನು ನಡೆಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಪ್ರವೇಶ ಉಚಿತವಾಗಿರುತ್ತದೆ. ಇದೇ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಹೊಸ ಕೃತಿಗಳು ‘ವೀರಲೋಕ ಪ್ರತಿಷ್ಠಾನ’ ದ ವತಿಯಿಂದ ಲೋಕಾರ್ಪಣೆಗೊಳ್ಳುತ್ತಿದೆ. ಇದರಲ್ಲಿ ನಾಡಿನ ಹಿರಿಯ ಸಾಹಿತಿಗಳ ಜೊತೆಗೆ ಹೊಸ ಚಿಂತನೆಯ ಯುವ ಸಾಹಿತಿಗಳ ಪುಸ್ತಕಗಳು ಸಹ ಒಳಗೊಂಡಿದೆ. ಪ್ರತಿ ಕನ್ನಡದ ಮನಸ್ಸು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಇದೊಂದು ಅಪರೂಪದ ಸಾಂಸ್ಕೃತಿಕ ಹಾಗೂ ಕನ್ನಡದ ಕಟ್ಟುವಿಕೆಯ ಕಾರ್ಯವಾಗಿದೆ.

    baikady Bengaluru Book release drama exhibition kannada Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleತಿಂಗಳ ನಾಟಕ ಸಂಭ್ರಮದಲ್ಲಿ ‘ಪಂಚವಟಿ’ ಯಕ್ಷಗಾನ ಪ್ರಸಂಗ | ನವೆಂಬರ್ 15
    Next Article ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಅಭಿನಂದನೆ ಮತ್ತು ವಿಚಾರ ಸಂಕಿರಣ | ನವೆಂಬರ್ 16
    roovari

    Add Comment Cancel Reply


    Related Posts

    ಮೇಲುಕೋಟೆಯಲ್ಲಿ ರಂಗ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭ | ನವೆಂಬರ್ 14

    November 13, 2025

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಅಭಿನಂದನೆ ಮತ್ತು ವಿಚಾರ ಸಂಕಿರಣ | ನವೆಂಬರ್ 16

    November 13, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ಪಂಚವಟಿ’ ಯಕ್ಷಗಾನ ಪ್ರಸಂಗ | ನವೆಂಬರ್ 15

    November 13, 2025

    ಸುರತ್ಕಲ್ ನಲ್ಲಿ ರಂಗು ರಂಗಿನ ರಂಗೋತ್ಸವ ಮತ್ತು ‘ರಂಗಚಾವಡಿ’ ಪ್ರಶಸ್ತಿ ಪ್ರದಾನ

    November 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.