Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭ

    June 9, 2025

    ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    ಬಡಿಯಡ್ಕದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಪ್ಪಿನಂಗಡಿಯಲ್ಲಿ ಪುಸ್ತಕ ಹಬ್ಬ, ಪುಸ್ತಕದ ದಾನಿಗಳ ಸಮಾವೇಶ ಮತ್ತು ಗ್ರಾಮ ಸಾಹಿತ್ಯ ಸಂಭ್ರಮ | ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1ರಂದು
    Literature

    ಉಪ್ಪಿನಂಗಡಿಯಲ್ಲಿ ಪುಸ್ತಕ ಹಬ್ಬ, ಪುಸ್ತಕದ ದಾನಿಗಳ ಸಮಾವೇಶ ಮತ್ತು ಗ್ರಾಮ ಸಾಹಿತ್ಯ ಸಂಭ್ರಮ | ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1ರಂದು

    September 28, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ನೇತೃತ್ವದಲ್ಲಿ ಪುಸ್ತಕ ಹಬ್ಬ, ಪುಸ್ತಕದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 29-09-2023, 30-09-2023 ಮತ್ತು 01-10-2023ರವರೆಗೆ ಮೂರು ದಿನ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಗ್ರಾಮ ಪಂಚಾಯತ್ ಉಪ್ಪಿನಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸತ್ಯಶಾಂತ ಪ್ರತಿಷ್ಠಾನ ನೆಕ್ಕಿಲಾಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಈ ಸಂಘಟನೆಗಳ ಸಹಕಾರದಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ನಡೆಯುತ್ತದೆ.   

    ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪುಸ್ತಕ ಮೇಳ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ್‌ ಕುಮಾರ್‌ ಪ್ರಥಮ ಪುಸ್ತಕ ದಾನ ಮಾಡಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್‌ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ನಿಕಟಪೂರ್ವ ಅಧ್ಯಕ್ಷೆ ಉಷಾ ಮುಳಿಯ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಉಚಿತ ಪುಸ್ತಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹಾಗೂ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಹಾಯ ವಾಗುತ್ತದೆ ಎಂಬ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬರುವ ಸರ್ವರಿಗೂ ಉಚಿತ ಪುಸ್ತಕವನ್ನು ಜ್ಞಾನ ಗಂಗಾ ಪುಸ್ತಕ ಮಳಿಗೆಯ ವತಿಯಿಂದ ಉಡುಗೊರೆಯಾಗಿ ನೀಡಲಿದ್ದಾರೆ. ಪುಸ್ತಕದಾನಿಗಳ ಸಮಾವೇಶ ಪ್ರಸ್ತಕ ಪ್ರೇಮಿಗಳ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ದಾನ ರೂಪದಲ್ಲಿ ನೀಡುವವರಿಗೆ ‘ಪುಸ್ತಕ ಮಹಾದಾನಿ’ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಪುಸ್ತಕದಾನ ಮಾಡುವ ದಾನಿಗಳು ಶಂಕರಿ ಶರ್ಮ (9449856033) ಹಾಗೂ ಶಾಂತಾ ಪ್ರತ್ತೂರು (8277591731) ಅವರನ್ನು ಸಂಪರ್ಕಿಸಬಹುದು.

    ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್, ಚಲನಚಿತ ನಿರ್ದೇಶಕ ಎಂ.ಕೆ.ಮಠ, ಹಿರಿಯ ಸಾಹಿತಿಗಳಾದ ಗೋಪಾಲಕೃಷ್ಣ ಕುಂಟಿನಿ, ಜಲೀಲ್ ಮುಕ್ರಿ, ಹವ್ಯಾಸಿ ಯಕ್ಷಗಾನ ಕಲಾವಿದ ತಲೆಂಗಳ ಕೃಷ್ಣ ಭಟ್, ಹಿರಿಯ ಛಾಯಾಚಿತ್ರಗ್ರಾಹಕ ಬಾಲಕೃಷ್ಣ ರೈ, ಕಿರು ಚಲನಚಿತ್ರ ನಿರ್ಮಾಪಕ ಅಚಲ್ ಉಬರಡ್ಕ, ದಿ. ಕಜೆ ಈಶ್ವರ ಭಟ್ ಪ್ರಾರಂಭಿಸಿದ ‘ಕನ್ನಡ ಸಂಗಮ’ ಹಾಗೂ ‘ಅಮಲು’ ಕಿರುಚಿತ್ರ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್‌ ಅಭಿನಂದಿಸಲಿದ್ದಾರೆ.

    ದಿನಾಂಕ 29-09-2023ರಂದು ಐಎಎಸ್‌-ಐಪಿಎಸ್‌ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ಕನ್ನಡಿಗರು ಸರಕಾರದ ಕಾರ್ಯಾಂಗದಲ್ಲಿ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಐಎಎಸ್- ಐಪಿಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಬಹುದೆಂಬ ಅಭಿಯಾನದ 56ನೇ ಸರಣಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ದೀಪಕ್ ಪೈ ಹಾಗೂ ರಘುರಾಮ ಉಪ್ಪಿನಂಗಡಿ ಬಳಗದವರಿಂದ ಕನ್ನಡ ಗಾನ ವೈಭವ ಕಾರ್ಯಕ್ರಮ ನಡೆಯಲಿದೆ. ದಿನಾಂಕ 30-09-2023ರಂದು ಕಥಾಗೋಷ್ಟಿ ಮತ್ತು ಕವಿಗೋಷ್ಠಿ ಹಾಗೂ ಸಂಜೆ 4 ಗಂಟೆಗೆ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಸದಸ್ಯರಿಂದ ಶ್ರೀ ಮಹಾಭಾರತ ತಾಳ ಮದ್ದಳೆ ಸರಣಿ ಕಾರ್ಯಕ್ರಮ ‘ಶರಸೇತು ಬಂಧ’ ನಡೆಯಲಿದೆ. ದಿನಾಂಕ 01-10-2023ರಂದು ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಲಿದೆ.

    ದಿನಾಂಕ 01-10-2023ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯಕ್ಕೆ ‘ಉಪ್ಪಿನಂಗಡಿ ಗ್ರಾಮದ ಕೊಡುಗೆ’ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗೋವಿಂದ ಪ್ರಸಾದ್ ಕಜೆ ನಡೆಸಿಕೊಡಲಿದ್ದಾರೆ. ಶ್ರೀರಾಮ ಶಾಲೆ ಉಪ್ಪಿನಂಗಡಿಯ ಸಂಚಾಲಕ ಯು.ಜಿ. ರಾಧಾ ಇವರಿಂದ ಸಮಾರೋಪ ಭಾಷಣ, ಮಾಜಿ ಶಾಸಕ ಸಂಜೀವ ಮಠಂದೂರು ಇವರಿಂದ ಬಹುಮಾನ ವಿತರಣೆ ಮತ್ತು ಕರುಣಾಕರ ಸುವರ್ಣ ಪುಸ್ತಕ ಮಹಾದಾನಿಗಳನ್ನು ಅಭಿನಂದಿಸಲಿದ್ದಾರೆ. ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಡಾ.ರಾಜಾರಾಮ್ ಕೆ.ಬಿ., ಪ್ರಶಾಂತ ಡಿಕೋಸ್ಟ, ಸಿದ್ದೀಕ್ ನಿರಾಜೆ, ಯುವ ಉದ್ಯಮಿ ಕರಾಯ ರಾಘವೇಂದ್ರ ನಾಯಕ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಈ ಕಾರ್ಯಕ್ರಮವು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಚ್ಚಿಲದಲ್ಲಿ ‘ರುಕ್ಮಿಣಿ ಕಲ್ಯಾಣ’ ತಾಳಮದ್ದಳೆ | ಸೆಪ್ಟೆಂಬರ್ 30ರಂದು
    Next Article ಬಾಗಲಕೋಟೆಯಲ್ಲಿ ವಿದ್ವಾನ್ ಮಂಜುನಾಥ್ ಮತ್ತು ಡಾ.ಅನಷ್ಕು ಅವರ ಕಾರ್ಯಗಾರ ಮತ್ತು ಭರತನಾಟ್ಯ ಪ್ರದರ್ಶನ | ಸೆಪ್ಟೆಂಬರ್ 30ರಿಂದ 
    roovari

    Add Comment Cancel Reply


    Related Posts

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಡಾ. ಜಯದೇವಿ ಗಾಯಕವಾಡ ಆಯ್ಕೆ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025

    ನಾಡೋಜ ಡಾ. ಸಿದ್ಧಲಿಂಗಯ್ಯನವರ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ | ಜೂನ್ 11

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.