Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರಿನಲ್ಲಿ ‘ಮುಖಗಳು’ – ಆದಿತ್ಯ ಸದಾಶಿವ ಮೂರ್ತಿಯವರ ಜಲ ವರ್ಣದ ವಿಶೇಷ ಕಲಾ ಪ್ರದರ್ಶನ – ಎಪ್ರಿಲ್ 8ರಿಂದ 20
    News

    ಪುತ್ತೂರಿನಲ್ಲಿ ‘ಮುಖಗಳು’ – ಆದಿತ್ಯ ಸದಾಶಿವ ಮೂರ್ತಿಯವರ ಜಲ ವರ್ಣದ ವಿಶೇಷ ಕಲಾ ಪ್ರದರ್ಶನ – ಎಪ್ರಿಲ್ 8ರಿಂದ 20

    April 8, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    08 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ಸಮೀಪದಲ್ಲಿರುವ ಸೌಗಂಧಿಕಾದಲ್ಲಿ ಈ ವರ್ಷದ ವಸಂತ ಕಾಲದ ಚಿತ್ರಕಲಾ ಪ್ರದರ್ಶನವು ಏಪ್ರಿಲ್ ಎಂಟರಂದು ಶನಿವಾರ ಸಂಜೆ ಅನಾವರಣಗೊಳ್ಳಲಿದೆ. ಬೆಂಗಳೂರಿನ ಯುವ ಕಲಾವಿದರಾದ ಆದಿತ್ಯ ಸದಾಶಿವ ಮೂರ್ತಿಯವರು ಜಲ ವರ್ಣದಿಂದ “ವಾಷಿಂಗ್ ಮೆಥಡ್” ತಂತ್ರಜ್ಞಾನದಲ್ಲಿ ರಚಿಸಿರುವ ಕಲಾಕೃತಿಗಳು “ಮುಖಗಳು” ಎನ್ನುವ ಶೀರ್ಷಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಲಾಕೃತಿಗಳು ಭಾರತೀಯ ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗದ ಜನಪದ ಶೈಲಿಯ ಮುಖಗಳ ಅಧ್ಯಯನದ ಬಳಿಕ ರಚಿಸಿರುವ ಕಲಾಕೃತಿಗಳಾಗಿರುತ್ತವೆ. ವಿಶ್ವ ರಂಗಭೂಮಿಯ ಸಂಭ್ರಮ ಆಚರಣೆಯ ಪ್ರಯುಕ್ತ ನಡೆಯಲಿರುವ ಈ ಕಲಾ ಪ್ರದರ್ಶನವು ಮುಖಗಳ ಭಾವನೆಗಳ ಬಣ್ಣದೊಂದಿಗೆ ನಮ್ಮ ರಂಗ ಬಾಂಧವ್ಯದ ಸೊಗಸನ್ನು ಹೆಚ್ಚಿಸುವಂಥದ್ದು.

    1996ರಲ್ಲಿ ಬೆಂಗಳೂರು ಮಹಾನಗರಿಯಲ್ಲಿ ಜನಿಸಿರುವ ಆದಿತ್ಯ ಬಾಲ್ಯದಲ್ಲಿ ತನ್ನ ತಂದೆ ಹಿರಿಯ ಕಲಾವಿದರಾದ ಎಂ. ಎಸ್.ಮೂರ್ತಿಯವರು ಸ್ಟುಡಿಯೋದಲ್ಲಿ ರಚಿಸುತ್ತಿದ್ದ ರೇಖೆಗಳನ್ನು, ತೈಲ ವರ್ಣ, ಜಲ ವರ್ಣ ಕಲಾಕೃತಿಗಳನ್ನು ಬಿತ್ತಿ ರೂಹುಗಳನ್ನು ನೋಡುತ್ತಾ ಗೆರೆಗಳನ್ನು ಎಳೆಯುತ್ತಾ ಚಿತ್ರಕಲೆ ಕಲಿಯಲಾರಂಭಿಸಿದವರು. ತದನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ “ದೃಶ್ಯ ಮತ್ತು ಸಂವಹನ” ವಿಷಯದಲ್ಲಿ ಪದವಿ ಪಡೆದು, ವಿಶೇಷವಾದ ಸಾಕ್ಷ್ಯಚಿತ್ರಗಳನ್ನು ರಚಿಸಿ ಗಮನ ಸೆಳೆದವರು. ಇವರು ರಚಿಸಿರುವ ಕೆಲವು ಸಾಕ್ಷ್ಯಚಿತ್ರಗಳು ರಾಷ್ಟ್ರೀಯ ಮಟ್ಟದ ಕಿರುಚಿತ್ರ ಪ್ರದರ್ಶನಗಳ ಉತ್ಸವದಲ್ಲಿ ಪ್ರದರ್ಶನಗೊಂಡಿರುವುದು ಕಿರಿಯ ವಯಸ್ಸಿನ ಹುಡುಗನ ದೊಡ್ಡ ಸಾಧನೆಗೆ ಸಾಕ್ಷಿ. ಇವರು ಇತ್ತೀಚೆಗೆ “ರೂಪ ಮತ್ತು ಆಕಾರಗಳು” ಎನ್ನುವ ವಿಚಾರದಲ್ಲಿ ಅಮೂರ್ತ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಸಿರುತ್ತಾರೆ. ಕಲಾ ಮಾಧ್ಯಮ ಅಭ್ಯಾಸ ಮಾಡುವವರಿಗಾಗಿ ಇವರು ಜಗತ್ಪ್ರಸಿದ್ಧ ಕಲಾವಿದರ ಕುರಿತು ಹೊರತಂದಿರುವ ಪುಸ್ತಕ “A TO Z ARTIST” ಒಂದು ಅಮೂಲ್ಯವಾದ ಕೃತಿ.

    ಏಪ್ರಿಲ್ ಎಂಟರಿಂದ ಇಪ್ಪತ್ತರವರೆಗೆ ಸೌಗಂಧಿಕಾದಲ್ಲಿ ನಡೆಯಲಿರುವ ಈ ವಿಶೇಷವಾದ ಕಲಾ ಪ್ರದರ್ಶನಕ್ಕೆ ಪೂರ್ವಾಹ್ನ ಹತ್ತರಿಂದ ಮುಸ್ಸಂಜೆ ಆರರ ತನಕ ನೀವು ಭೇಟಿ ನೀಡಬಹುದು.
    ಸಂಪರ್ಕ. 9900409380. 8861029163

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಎಪ್ರಿಲ್ 9ಕ್ಕೆ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭ
    Next Article ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ “ಯಕ್ಷಯಾನ -2023” ಆರಂಭ
    roovari

    Add Comment Cancel Reply


    Related Posts

    ದೃಶ್ಯಕಲೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    April 29, 2025

    ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ‘ಸಮರ್ಪಣಂ ಕಲೋತ್ಸವ 2025’ | ಏಪ್ರಿಲ್ 03

    March 27, 2025

    ಕಾಸರಗೋಡು ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಗೆ ಆಹ್ವಾನ

    February 10, 2025

    “Sri Krishna Leela Amrutham” Transcends audiences at Bharat Nritya Utsav 2025, Chennai

    February 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.