ಮಂಗಳೂರು : ಕಳೆದ 42 ವರ್ಷಗಳಿಂದ ತನ್ನ ಸದಸ್ಯರ ಮಕ್ಕಳ ಪ್ರತಿಭೆಯ ಅನಾವರಣ ಮತ್ತು ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಿರುವ ಮಂಗಳೂರಿನ ಪ್ರಸಿದ್ಧ ಸಂಸ್ಥೆ ರಾಗ ತರಂಗ (ರಿ ) ಶೈಕ್ಷಣಿಕ, ಕ್ರೀಡಾ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ” ಪ್ರತಿಭಾ ಪುರಸ್ಕಾರ -2025″ ನ್ನು ತಾ. 05/10/2025 ರಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಸಿತ್ತು.
ತನ್ನ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ವಿದ್ಯಾರ್ಥಿ ದೆಸೆಯಲ್ಲೇ ಬ್ರಿಟನ್ ಮೂಲದ ರೋಲ್ಸ್ ರಾಯ್ ಜೆಟ್ ಎಂಜಿನ್ ತಯಾರಿಕಾ ಕಂಪನಿಯಲ್ಲಿ ಅತ್ತ್ಯುತ್ತಮ ವೇತನದ ಉನ್ನತ ಉದ್ಯೋಗ ಗಳಿಸಿ ಪ್ರಸಿದ್ದಿಯಾದ ಸಹ್ಯಾದ್ರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಋತುಪರ್ಣ ಕೆ ಎಸ್ ಸಮಾರಂಭದ ಆಹ್ವಾನಿತ ಅತಿಥಿಯಾಗಿದ್ದಳು. ಸುಮಾರು 34 ವಿದ್ಯಾರ್ಥಿಗಳನ್ನು ಅವರ ವಿವಿಧ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೆಯೇ ಪತ್ರಿಕಾ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು, ಕ್ರೀಡಾ ಕ್ಷೇತ್ರದ ಕರಾಟೆಪಟು ಶ್ರೀ ಎ ಕೃಷ್ಣ ಶೆಟ್ಟಿ ತಾರೆಮಾರ್, ಯೋಗ ಶಿಕ್ಷಕಿ ಮತ್ತು ತೀರ್ಪುಗಾರರಾಗಿ ಪ್ರಸಿದ್ದಿ ಪಡೆದ ಶ್ರೀಮತಿ ಸಂಜನಾ ಭಟ್, ತಬ್ಲಾವಾದನ ಸೀನಿಯರ್ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 2ನೆಯ Rank ವಿಜೇತ MRPL ನ ಉದ್ಯೋಗಿ ಶ್ರೀ ಉದಯ ಕುಮಾರ್, ವೈಟ್ ಲಿಫ್ಟರ್ ಮತ್ತು ಅಥ್ಲೀಟ್ ಶ್ರೀ ಎಂ ವಿನೋದ್ ಕುಮಾರ್ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಗ ತರಂಗದ ಅಧ್ಯಕ್ಷರಾದ ಶ್ರೀ ಶಶಿಧರ್ ಕೆ ಎನ್ ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀ ಚಂದ್ರ ಶೇಖರ್ ದೈತೋಟ, ಶ್ರೀಮತಿ ಸುಮನಾ ಘಾಟೆ, ಶ್ರೀ ಎ ಕೃಷ್ಣ ಶೆಟ್ಟಿ ತಾರೆಮಾರ್, ಕಾರ್ಯದರ್ಶಿ ಶ್ರೀ ಪಿ ಚಂದ್ರಶೇಖರ್ ರಾವ್, ಕೋಶಾಧಿಕಾರಿ ಶ್ರೀಮತಿ ಸೌಮ್ಯಾ ಪಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಸಂಜನಾ ಭಟ್ ಮತ್ತು ಶಿಲ್ಪಾ ರಾಮಚಂದ್ರ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ರಾಗ ತರಂಗದ ಸದಸ್ಯರಾದ ಶ್ರೀಮತಿ ರೂಪಾ ವಾಸುದೇವ್ ಮತ್ತು ಶ್ರೀಮತಿ ಹೇಮಲತಾ ಸಂಜೀವ್ ಹಾಗೂ ಪ್ರತಿಭಾವಂತ ಮಕ್ಕಳಾದ ಕುಮಾರಿ ಅನನ್ಯಾ ನಾರಾಯಣ್ ಅವರಿಂದ ಭಾವಗೀತೆ ಗಾಯನ,ವಿದುಷಿ ಕುಮಾರಿ ಅಮೃತಾ ವಾಸುದೇವ್ ಮತ್ತು ಕುಮಾರಿ ಆದ್ಯಾ ಯು ಅವರಿಂದ ಸೀತಾರ್ /ತಬಲಾ ವಾದನ ಮತ್ತು ಕುಮಾರಿ ವೈಷ್ಣ ಶೆಟ್ಟಿ ಮತ್ತು ಕುಮಾರಿ ಅಕ್ಷತಾ ವಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಶ್ರೀ ಚಂದ್ರ ಶೇಖರ್ ದೈತೋಟ ವಂದನಾರ್ಪಣೆಗೈದರು.