Subscribe to Updates

    Get the latest creative news from FooBar about art, design and business.

    What's Hot

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ತುಳುಪರ್ಬ ಸಂಭ್ರಮೊ ವಿಚಾರಗೋಷ್ಠಿ ಬೊಕ್ಕ ಕವಿ ಗೋಷ್ಠಿ | 5 ಡಿಸೆಂಬರ್ 2025

    November 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸರಯೂ ಸಪ್ತಾಹದಲ್ಲಿ ‘ರಾಜಾ ಸೌದಾಸ’ ಯಕ್ಷಗಾನ ಬಯಲಾಟ
    Yakshagana

    ಸರಯೂ ಸಪ್ತಾಹದಲ್ಲಿ ‘ರಾಜಾ ಸೌದಾಸ’ ಯಕ್ಷಗಾನ ಬಯಲಾಟ

    May 31, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮದ ಐದನೇ ದಿನದ ಕಾರ್ಯಕ್ರಮವು ದಿನಾಂಕ 29-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ “ಯಕ್ಷಗಾನವು ಒಂದು ಆರಾಧನಾ ಕಲೆ. ಕಟೀಲು ತಾಯಿ ಯಕ್ಷ ಕಲಾರಾಧಕಿ. ಹಾಗಾಗಿಯೋ ಏನೋ ಎಷ್ಟೋ ಮಂದಿಗೆ ಸೇವೆಯಾಟ ದೊರಕಲು ವಿಳಂಬವಾಗುತ್ತದೆ. ಅಂತಹಾ ಆರಾಧನಾ ಕಲೆಯನ್ನು ಕಲಾವಿದರು ಆರಾಧಿಸುವುದು ಮಾತ್ರವಲ್ಲ: ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ಇದನ್ನು ಯುವ ಪೀಳಿಗೆ ರೂಢಿಸಿಕೊಂಡರೆ ಈ ಕಲೆಗೆ ನಿರಂತರ ಬೆಳವಣಿಗೆ ಇರುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಹಾಸ್ಯಗಾರರಾದ ಮಹಾಬಲೇಶ್ವರ ಭಟ್ ಭಾಗಮಂಡಲ ಇವರಿಗೆ ‘ಯಕ್ಷಸರಯೂ’ ಬಿರುದುನೀಡಿ ಸನ್ಮಾನಿಸಲಾಯಿತು. ವೇದ ಮೂರ್ತಿ ಕೆ. ನರಸಿಂಹ ತಂತ್ರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ಸೌಮ್ಯ ಪುರುಷೋತ್ತಮ್ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಗುರುಗಳಾದ ಪಿ. ವಿ. ಪರಮೇಶ್, ಎಲ್ಲೂರು ರಾಮಚಂದ್ರ ಭಟ್, ದಾಮೋದರ ಭಟ್, ಬಿ. ಪ್ರಕಾಶ್ ಪೈ, ತಿರುಮಲೇಶ್ವರ ಭಟ್, ಗಗನ್ ಜೆ. ಶೆಟ್ಟಿ, ಅಕ್ಷಯ್ ಸುವರ್ಣ, ಕಾವ್ಯ, ಲಿಖಿತಾ, ನಿಹಾಲ್, ಅದ್ವಿತ್, ಧ್ವಶಾಲ್ ಉಪಸ್ಥಿತರಿದ್ದರು.
    ಸಭಾ ಕಾರ್ಯಕ್ರಮದ ಬಳಿಕ ‘ರಾಜಾ ಸೌದಾಸ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕಥಾಬಿಂದು ಪ್ರಕಾಶನದ ‘ಸಾಹಿತ್ಯ ಸಂಭ್ರಮ 2024’
    Next Article ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ನಿಧನ

    November 27, 2025

    ಯಕ್ಷಾಂಗಣದಲ್ಲಿ ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ – ತಾಳಮದ್ದಳೆ

    November 26, 2025

    ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’

    November 25, 2025

    ಯಕ್ಷಗಾನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಇವರಿಗೆ ಪ್ರಶಸ್ತಿ ಪ್ರದಾನ

    November 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.