Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೋಕಾರ್ಪಣೆಗೊಂಡ ‘ರಾಯರ ಕಥೆಗಳು’ ಕೃತಿ
    Book Release

    ಲೋಕಾರ್ಪಣೆಗೊಂಡ ‘ರಾಯರ ಕಥೆಗಳು’ ಕೃತಿ

    December 31, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಮಂಗಳೂರು ಸೀನಿಯರ್ ಸಿಟಿಜನ್ಸ್ ಇದರ ಸದಸ್ಯರಾದ ಕೆ. ರಾಧಾಕೃಷ್ಣ ರಾವ್ ಇವರ ಆಯ್ದ ಕಥೆಗಳನ್ನು ಶ್ರೀಮತಿ ರೋಹಿಣಿಯವರು ಸಂಪಾದಿಸಿದ್ದು, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ “ರಾಯರ ಕಥೆಗಳು” ಎಂಬ ಕಥಾಸಂಕಲನವಾಗಿ ದಿನಾಂಕ 28 ಡಿಸೆಂಬರ್ 2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಭಟ್ ಕೃತಿ ಲೋಕಾರ್ಪಣೆಗೊಳಿಸಿದರು.

    ಕೃತಿಯ ಕುರಿತಾಗಿ ಪ್ರಕಾಶಕರಾದ ಕಲ್ಲೂರು ನಾಗೇಶ ಮಾತನಾಡಿ “ರಾಧಾಕೃಷ್ಣರು ಆಳವಾದ ಜೀವನಾನುಭವ ಉಳ್ಳವರು. ಅವರ ಕಥೆಗಳನ್ನು ಗಮನಿಸಿದರೆ ಅವರು ಕೇವಲ ಕಥೆಗಾಗಿ ಕಥೆ ಬರೆಯದೆ, ಅವರು ಕಂಡುಂಡ ಅನುಭವಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಬರೆದಿದ್ದಾರೆ. ಅವರ ಕಥೆಗಳು ಹೆಚ್ಚಾಗಿ ಕುಟುಂಬ ಜೀವನದ ಆಗುಹೋಗುಗಳು, ಸಂಸಾರ ನಿರ್ವಹಣೆ, ಸಾಮಾಜಿಕ ಸಂಬಂಧಗಳು ಗಂಡು ಹೆಣ್ಣಿನ ಸಾಮರಸ್ಯ, ವೈರುಧ್ಯ, ಹೀಗೆ ಮಾನವೀಯ ಮೌಲ್ಯಗಳನ್ನು ತಿಳಿಹೇಳುವ ರೀತಿಯಲ್ಲೇ ಸಾಗುತ್ತವೆ. ವಿಜ್ಞಾನ ಪದವೀಧರರಾದರೂ ಅವರು ಸಾಹಿತ್ಯ, ಭಾಷಾ ಶಾಸ್ತ್ರ, ಶಿಕ್ಷಣ, ಸಂಗೀತ, ಕ್ರೀಡೆ ಹೀಗೆ ಬಹುಮುಖಿ ಪ್ರತಿಭಾವಂತರಾಗಿದ್ದರು. ಇವರ ಕಥೆಗಳು ಹಳೆಯದಾದರೂ ಅವುಗಳಲ್ಲಡಗಿದ ಮೌಲ್ಯಗಳು ಮಾತ್ರ ಸಾರ್ವಕಾಲಿಕವಾದುದು. ಕಥಾರೂಪದಲ್ಲಿ ಕೊಟ್ಟಿರುವ ಕೆಲವು ಘಟನೆಗಳು ಇಲ್ಲಿ ನೈಜವಾಗಿ ಘಟಿಸಿದಂತೆಯೂ ಭಾಸವಾಗುತ್ತದೆ. ಆದ್ದರಿಂದ ಕಥೆಗಳು ನಮ್ಮಲ್ಲಿ ಲವಲವಿಕೆ ಮೂಡಿಸುತ್ತವೆ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ, ಉಪನಿಷತ್ತುಗಳ ಮೌಲ್ಯಗಳನ್ನು ನೆನಪಿಸುತ್ತದೆ.” ಎಂದರು.

    ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ ಮಾತಾಡಿ “ಕೆ ರಾಧಾಕೃಷ್ಣ ರಾಯರು ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಅವರು ವೃತ್ತಿ ಬದ್ಧತೆಯಿಂದ ಕೆಲಸ ಮಾಡುವುದನ್ನು ಕಂಡಿದ್ದೆ. ಆದರೆ ಅವರೊಳಗೊಬ್ಬ ತತ್ವಜ್ಞಾನಿ ಇದ್ದರೆಂಬುದು ಅವರ ಕಥೆಗಳನ್ನು ಓದಿದಾಗಲೇ ಗೊತ್ತಾಯಿತು, ಅವರ ಕಥೆಗಳನ್ನು, ಅದು ಸಾರುವ ಸಂದೇಶಗಳನ್ನು ನಾವು ತಿಳಿಯಬೇಕು, ಅದಕ್ಕಾಗಿ ಅವರ ಕೃತಿಯನ್ನು ಓದುವುದು ಮಾತ್ರ ಅಲ್ಲ ಸಮಾಜದಲ್ಲಿ ಜನಪ್ರಿಯ ವಾಗುವಂತೆಯೂ ನೋಡುವುದು ನಮ್ಮ ಜವಾಬ್ದಾರಿ.” ಎಂದರು. ಅವರ ಕೃತಿ ಪ್ರಕಟಣೆಗೊಳ್ಳುವಂತೆ ಮುತುವರ್ಜಿ ವಹಿಸಿದ ಅವರ ಮಕ್ಕಳು, ಸೊಸೆಯಂದಿರು ಮತ್ತು ಕುಟುಂಬದ ಪ್ರೋತ್ಸಾಹವನ್ನು ಕೊಂಡಾಡಿದರು.

    ಕೃತಿ ಲೋಕಾರ್ಪಣೆಯ ಮೊದಲು ಡಾ. ಸುರಬ್ಜಿತ್ ಚಕ್ರವರ್ತಿ ಇವರಿಂದ ಆರೋಗ್ಯ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಆಧುನಿಕ ರೋಗಗಳ ಕಾರಣ, ಪರಿಹಾರ ಮತ್ತು ಅವು ಬರದಂತೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
    ‘ರಾಯರ ಕಥೆಗಳು’ ಕೃತಿಯ ಸಂಪಾದಕಿ ಶ್ರೀಮತಿ ರೋಹಿಣಿಯವರು ಉಪಸ್ಥಿತರಿದ್ದರು. ಮಂಗಳೂರು ಸೀನಿಯರ್ ಸಿಟಿಜನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶಶಿಧರ್ ಕಾರ್ಯಕ್ರಮ ನಿರ್ವಹಿಸಿ, ರಾಧಾಕೃಷ್ಣ ರಾವ್ ಅವರ ಮಗಳು ಸುಮಂಗಳಾ ಧನ್ಯವಾದ ಅರ್ಪಿಸಿ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ನೃತ್ಯ ಕಲಾವಿದರ ಸರ್ವತೋಮುಖ ಬೆಳವಣಿಗೆ ‘ಸಾಧನ ಸಂಗಮ’ದ ಕೈಂಕರ್ಯ
    Next Article ಪುತ್ತೂರು ಸುದಾನ ಮೈದಾನದಲ್ಲಿ ಪುಸ್ತಕ ಬಿಡುಗಡೆ ಮತ್ತು ಬಹುಭಾಷಾ ಕವಿಗೋಷ್ಠಿ
    roovari

    Add Comment Cancel Reply


    Related Posts

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    ಗಣೇಶ ಪ್ರಸಾದಜೀಯವರ 9ನೆಯ ಕೃತಿ ‘ಕಾಂತೆ ಕವಿತೆ’ ಲೋಕಾರ್ಪಣೆ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.