Subscribe to Updates

    Get the latest creative news from FooBar about art, design and business.

    What's Hot

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    ಗಣೇಶ ಪ್ರಸಾದಜೀಯವರ 9ನೆಯ ಕೃತಿ ‘ಕಾಂತೆ ಕವಿತೆ’ ಲೋಕಾರ್ಪಣೆ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ರಾಗಾಲಾಪ’ ವಿಶಿಷ್ಟ ಪ್ರಯೋಗ – ರವೀಂದ್ರ ಜೋಶಿ
    Camp

    ‘ರಾಗಾಲಾಪ’ ವಿಶಿಷ್ಟ ಪ್ರಯೋಗ – ರವೀಂದ್ರ ಜೋಶಿ

    December 18, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : “ರಾಗಾಲಾಪ ಎಂಬ ಕಾರ್ಯಕ್ರಮವೇ ವಿಶಿಷ್ಟವಾಗಿದೆ. ಕರ್ನಾಟಕದಲ್ಲಿಯೇ ಇಂಥ ಪ್ರಯೋಗಗಳು ನಡೆದಿಲ್ಲ. ಅಂಥದ್ರಲ್ಲಿ ಕಾಸರಗೋಡಿನ ‘ಸ್ವರ ಚಿನ್ನಾರಿ’ಯ ಈ ಪ್ರಯತ್ನ ಶ್ಲಾಘನೀಯ. ಇಂಥಹ ಕಾರ್ಯಕ್ರಮಗಳ ಮೂಲಕ ಒಬ್ಬ ಅದ್ಭುತ ಕವಿ ಹುಟ್ಟಿಕೊಳ್ಳಬಹುದು. ಒಬ್ಬ ರಾಗ ಸಂಯೋಜಕ ಸೃಷ್ಟಿ ಆಗಬಹುದು. ಹಲವು ಪ್ರತಿಭೆಗಳಿಗೆ ವೇದಿಕೆ ಆಗುವ ಸಾಧ್ಯತೆ ಇದೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರರವರ ನಿರ್ದೇಶನದಲ್ಲಿ ಇಂಥಹ ವಿಶಿಷ್ಟವಾದ ಕಾರ್ಯಕ್ರಮ ಜರಗುವುದು ಖುಷಿ ನೀಡಿದೆ” ಎಂದು ಖ್ಯಾತ ಪತ್ರಕರ್ತ, ಅಂಕಣಗಾರ ರವೀಂದ್ರ ಜೋಶಿ ಮೈಸೂರು ನುಡಿದರು.

    ಅವರು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ರಾಗಸಂಯೋಜನಾ ಶಿಬಿರ ‘ರಾಗಾಲಾಪ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಕಮ್ಮಟದ ನಿರ್ದೇಶಕ ವಿ. ಮನೋಹರರವರು ಮಾತನಾಡಿ “ನಾವು ಸ್ವರ ಸಂಯೋಜಕರಲ್ಲ, ನಿಜ ಅರ್ಥದಲ್ಲಿ ಗಾನ ಸಂಯೋಜಕರು ಅಂತ ಹೇಳಬೇಕು. ನಾವು ಪದಗಳನ್ನು ಜೋಡಿಸಿ ಗಾಯನ ಮಾಡುತ್ತೇವೆ. ಸಿನೇಮಾದಲ್ಲಿ ಇದಕ್ಕೆ ವಿರುದ್ಧ ಸಂಪ್ರದಾಯವಿದೆ. ಮೊದಲು ಸ್ವರ ಸಂಯೋಜಿಸಿ ನಂತರ ಅದಕ್ಕೆ ತಕ್ಕ ಹಾಗೆ ಶಬ್ದ ಪೋಣಿಸುವ ಪ್ರತಿಕ್ರಿಯೆ ಕೂಡಾ ಇದೆ” ಎಂದು ಹಾಡಿ ತೋರಿಸಿದರು.

    ‘ರಾಗಾಲಾಪ’ ಶಿಬಿರವನ್ನು ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ ಚಿನ್ನಾರಿಯ ಗೌರವಧ್ಯಕ್ಷರಾದ ಶ್ರೀ ಕೃಷ್ಣಯ್ಯ ಅನಂತಪುರ ವಹಿಸಿದ್ದರು.

    ರಂಗಚಿನ್ನಾರಿಯ ನಿರ್ದೇಶಕರೂ, ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ರಂಗ ಚಿನ್ನಾರಿಯು ವರ್ಷಕ್ಕೆ ಸುಮಾರು 30 ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸತತ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಗ್ಗೆ ತಿಳಿಸಿದರಲ್ಲದೆ ‘ಸ್ವರ ಚಿನ್ನಾರಿ’, ‘ನಾರಿ ಚಿನ್ನಾರಿ’ ಘಟಕಗಳ ವಿವರ ನೀಡಿದರು.

    ‘ನಾರಿ ಚಿನ್ನಾರಿ’ಯ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್, ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಸ್ವರ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಪುರುಷೋತ್ತಮ ಕೊಪ್ಪಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ ಪೆರ್ಲ ಧನ್ಯವಾದವಿತ್ತರು. ರತ್ನಾಕರ ಓಡಂಗಲು ಪ್ರಾರ್ಥಿಸಿದರು. ಸಾಹಿತಿ ಗಣೇಶ್ ನಾಯಕ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.

    ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಶಿಬಿರ ನಿರ್ದೇಶಕರಾದ ವಿ. ಮನೋಹರರವರು ಪ್ರಮಾಣ ಪತ್ರ ವಿತರಿಸಿದರು. ಶಿಬಿರಾರ್ಥಿಗಳಾದ ಶ್ರೀಮತಿ ಅನುಪಮಾ ಉಡುಪುಮೂಲೆ ಮತ್ತು ಶ್ರೀಪತಿ ಭಟ್ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

     

    Share. Facebook Twitter Pinterest LinkedIn Tumblr WhatsApp Email
    Previous Articleಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನಿಂದ ರಾಜ್ಯ ಮಟ್ಟದ ಕವಿಗೋಷ್ಠಿ
    Next Article ಕಾಸರಗೋಡು ಕನ್ನಡ ಗ್ರಾಮದಲ್ಲಿ ಸಮ್ಮೇಳನದ ವಿವಿಧ ಸ್ಪರ್ಧೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 
    roovari

    Add Comment Cancel Reply


    Related Posts

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.