ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 46’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿನಾಂಕ 21 ಫೆಬ್ರವರಿ 2026ರಂದು ಉಡುಪಿ ಶ್ರೀ ಕೃಷ್ಣ ಮಠದ ಬಳಿಯಿರುವ ಗೀತಾ ಮಂದಿರ 6ನೇ ಮಹಡಿಯಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5-35 ಗಂಟೆಗೆ ಕುಮಾರಿ ಶ್ರೇಯ ಯು. ನಾಯಕ್ ಇವರ ವೀಣಾವಾದನಕ್ಕೆ ಧೀಮಂತ ಭಟ್ಟ ಹರಿಹರಪುರ ಮೃದಂಗ ವಾದನದಲ್ಲಿ ಹಾಗೂ ಸಂಜೆ ಗಂಟೆ 6-55ಕ್ಕೆ ಬೆಂಗಳೂರಿನ ಡಾ. ಸಂಜನ ಕೌಶಿಕ ಇವರ ಹಿಂದುಸ್ತಾನಿ ಗಾಯನಕ್ಕೆ ತಬ್ಲಾದಲ್ಲಿ ಉಡುಪಿಯ ದೀಪಕ್ ನಾಯಕ್ ಮತ್ತು ಹಾರ್ಮೋನಿಯಂನಲ್ಲಿ ಮಣಿಪಾಲದ ಶಶಿಕಿರಣ್ ಸಹಕರಿಸಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.

