Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮ | ಆಗಸ್ಟ್ 24

    August 23, 2025

    ವಿಶ್ವ ದಾಖಲೆಗೆ ಪೂರ್ಣ ವಿಶ್ವಾಸದಿಂದ ಮುಂದಡಿಯಿಟ್ಟ ವಿದುಷಿ ದೀಕ್ಷಾ ವಿ.

    August 22, 2025

    ಉಡುಪಿಯಲ್ಲಿ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ ಹಾಗೂ ಗುರುವಂದನೆ | ಆಗಸ್ಟ್ 23ರಿಂದ 31

    August 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಗಲ್ಪಾಡಿಯಲ್ಲಿ ‘ಕಾಸರಗೋಡು ಕನ್ನಡ ಹಬ್ಬ’ದ ಸರಣಿ ಕಾರ್ಯಕ್ರಮಗಳ ಸಮಾರೋಪ
    Yakshagana

    ಅಗಲ್ಪಾಡಿಯಲ್ಲಿ ‘ಕಾಸರಗೋಡು ಕನ್ನಡ ಹಬ್ಬ’ದ ಸರಣಿ ಕಾರ್ಯಕ್ರಮಗಳ ಸಮಾರೋಪ

    July 1, 2023Updated:August 19, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಗಲ್ಪಾಡಿ: ಕಾಸರಗೋಡಿನ ಪ್ರಖ್ಯಾತ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ‘ಕಾಸರಗೋಡು ಕನ್ನಡ ಹಬ್ಬ’ದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ದಿನಾಂಕ 30-06-2023 ರಂದು ಅಗಲ್ಪಾಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆಯಿತು.
    ಶ್ರೀ ಕ್ಷೇತ್ರ ಅಗಲ್ಪಾಡಿಯ ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಎ.ಜಿ.ಶರ್ಮರು ದೀಪ ಬೆಳಗಿಸಿ ಕಾಸರಗೋಡು ಕನ್ನಡ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ಸಾಹಿತಿ, ಜನಪ್ರಿಯ ವೈದ್ಯ ಡಾ. ರಮಾನಂದ ಬನಾರಿಯವರು “ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಹೊಸತನದ ಆಕರ್ಷಣೀಯ ಕಾರ್ಯಕ್ರಮಗಳು ಬೇಕು. ಹಳ್ಳಿ ಹಳ್ಳಿಗಳಲ್ಲಿ ಚಟುವಟಿಕೆಗಳು ವಿಸ್ತರಣೆಯಾಗಬೇಕು. ಕನ್ನಡದ ಪ್ರೀತಿ ಇರುವವರೆಲ್ಲ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಜನರ ಒಳಗೊಳ್ಳುವಿಕೆಯಿಂದ ಈ ಕನ್ನಡದ ಬೇರುಗಳು ಬಲವಾಗುತ್ತವೆ. ಕಾಸರಗೋಡು ಚಿನ್ನಾ ಅವರು ಕನ್ನಡದ ಜೀವಂತಿಕೆಗೆ ನೀಡಿದ ಕೊಡುಗೆ ಅನುಕರಣೀಯ” ಎಂದು ನುಡಿದರು.
    ಶ್ರೀ ಕಾಸರಗೋಡು ಚಿನ್ನಾ ಹಾಗೂ ಡಾ.ರಮಾನಂದ ಬನಾರಿಯವರನ್ನು ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕಾಸರಗೋಡು ಚಿನ್ನಾ, ಕೋಳಾರು ಸತೀಶ್ ಚಂದ್ರ ಭಂಡಾರಿ, ಚಂದ್ರಶೇಖರ ಏತಡ್ಕ, ಪತ್ರಕರ್ತ ಗಣೇಶ್ ಕಾಸರಗೋಡು, ರಂಗಾ ಶರ್ಮ ಉಪ್ಪಂಗಳ ಮುಂತಾದವರು ಉಪಸ್ಥಿತರಿದ್ದರು. ಬಾಲಕ ಶ್ರೀ ಪ್ರದ್ಯುಮ್ನ ಶರ್ಮಾ ಉಪ್ಪಂಗಳ ಪ್ರಾರ್ಥನೆ ಗೈದು, ಶ್ರೀ ರಂಗಾ ಶರ್ಮಾ ಉಪ್ಪಂಗಳ ಸ್ವಾಗತಿಸಿ ನಿರ್ವಹಿಸಿದರು. ಶ್ರೀ ಕೊಳಾರು ಸತೀಶ್ಚಂದ್ರ ಭಂಡಾರಿಯವರು ಕೃತಜ್ಞತೆ ಅರ್ಪಿಸಿದರು.
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿಯ ಕಲಾವಿದರಿಂದ ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ ನಡೆಯಿತು.ಡಾ. ರಮಾನಂದ ಬನಾರಿಯವರು ತಾಳಮದ್ದಳೆ ಕಾರ್ಯಕ್ರಮವನ್ನು ನಿರ್ದೇಶಿಸಿದ್ದರು. ಭಾಗವತಿಕೆಯಲ್ಲಿ ಕುಮಾರಿ ರಚನಾ ಚಿದ್ಗಲ್ ಇವರ ಪ್ರಸ್ತುತಿ ಅಮೋಘವಾಗಿತ್ತು. ಹಿಮ್ಮೇಳನದಲ್ಲಿ ಚಂಡೆ ವಾದಕರಾಗಿ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕುಂಜೆ , ಮದ್ದಳೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ ಸಹಕರಿಸಿದರು. ಅರ್ಥದಾರಿಗಳಾಗಿ ಡಾ.ರಮಾನಂದ ಬನಾರಿ, ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವೆಂಕಟರಾಮ ಭಟ್ಟ ಸುಳ್ಯ, ರಾಮಣ್ಣ ಮಾಸ್ಟರ್ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ ಸಹಕರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleರಾಷ್ಟ್ರೀಯ ವೈದ್ಯರ ದಿನಾಚರಣೆ | ವಿಶೇಷ ಪರಿಚಯ ಲೇಖನ – ನಾಡಿನ ಶ್ರೇಷ್ಠ ಪ್ರಸೂತಿ ತಜ್ಞೆ ಡಾ. ರತೀದೇವಿ
    Next Article ರಾಷ್ಟ್ರೀಯ ವೈದ್ಯರ ದಿನಾಚರಣೆ | ವಿಶೇಷ ಪರಿಚಯ ಲೇಖನ – ಡಾ. ಲಕ್ಷ್ಮೀ ರೇಖಾ ಅರುಣ್
    roovari

    1 Comment

    1. ಧನಂಜಯ ಪಡ್ರಾಯೀ on July 1, 2023 8:01 pm

      ಸೂಪರ್ ಮಾರಾಯೆರೆ , ಕಾಸರಗೋಡು ಗಡಿನಾಡಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ, ಸಾಂಸ್ಕೃತಿಕವಾಗಿ ಉಚ್ಛ್ರಾಯದಲ್ಲಿ ಇರಲು ಚಿನ್ನ ಅವರ ಕೊಡುಗೆ ಬಹಳ ದೊಡ್ಡದು. ಅವರಿಗೆ ಅಭಿನಂದನೆಗಳು. ಇನ್ನೂ ಕನ್ನಡಪರವಾದ ಕೈಯಿಂಕರ್ಯ ಮಾಡಲು, ದೇವಿ ರಾಜ ರಾಜೇಶ್ವರಿ ಸಂಪೂರ್ಣ ಅನುಗ್ರಹ ಮಾಡಲಿ.

      Reply

    Add Comment Cancel Reply


    Related Posts

    ಶ್ರೀ ಭಗವತೀ ಯಕ್ಷಕಲಾ ಬಳಗದಿಂದ ಯಕ್ಷಗಾನಾರ್ಪಣೆ

    August 22, 2025

    ಕೋಟೇಶ್ವರದಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ

    August 22, 2025

    ಶ್ರೀ ಎಡನೀರು ಮಠದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನ | ಆಗಸ್ಟ್ 22       

    August 21, 2025

    ಎಡನೀರಿನಲ್ಲಿ ಗಿರಿಜಾಕಲ್ಯಾಣ ಯಕ್ಷಗಾನ ಪ್ರದರ್ಶನ

    August 20, 2025

    1 Comment

    1. ಧನಂಜಯ ಪಡ್ರಾಯೀ on July 1, 2023 8:01 pm

      ಸೂಪರ್ ಮಾರಾಯೆರೆ , ಕಾಸರಗೋಡು ಗಡಿನಾಡಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ, ಸಾಂಸ್ಕೃತಿಕವಾಗಿ ಉಚ್ಛ್ರಾಯದಲ್ಲಿ ಇರಲು ಚಿನ್ನ ಅವರ ಕೊಡುಗೆ ಬಹಳ ದೊಡ್ಡದು. ಅವರಿಗೆ ಅಭಿನಂದನೆಗಳು. ಇನ್ನೂ ಕನ್ನಡಪರವಾದ ಕೈಯಿಂಕರ್ಯ ಮಾಡಲು, ದೇವಿ ರಾಜ ರಾಜೇಶ್ವರಿ ಸಂಪೂರ್ಣ ಅನುಗ್ರಹ ಮಾಡಲಿ.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.