Subscribe to Updates

    Get the latest creative news from FooBar about art, design and business.

    What's Hot

    ವಿಭಾ ಸಾಹಿತ್ಯ ಪ್ರಶಸ್ತಿಗೆ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಕೃತಿ ಆಯ್ಕೆ

    October 3, 2025

    ಪುತ್ತೂರಿನ ಶ್ರೀ ಸ್ವಾಮಿ ಕಲಾಮಂದಿರದ ದರ್ಶನ ಸಭಾಭವನದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಅಕ್ಟೋಬರ್ 05

    October 2, 2025

    ಡಾ. ಉದಯ ಕುಮಾರ ಇರ್ವತ್ತೂರು ಇವರು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅಕ್ಟೋಬರ್ 04

    October 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಬುರಗಿಯಲ್ಲಿ ‘ರಂಗ ದಸರಾ’ ಮೂರು ದಿನಗಳ ನಾಟಕೋತ್ಸವ | ಸೆಪ್ಟೆಂಬರ್ 27, 28 ಮತ್ತು 29
    Drama

    ಕಲಬುರಗಿಯಲ್ಲಿ ‘ರಂಗ ದಸರಾ’ ಮೂರು ದಿನಗಳ ನಾಟಕೋತ್ಸವ | ಸೆಪ್ಟೆಂಬರ್ 27, 28 ಮತ್ತು 29

    September 26, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಲಬುರಗಿ : ಕರ್ನಾಟಕ ರಂಗಾಯಣ ಕಲಬುರಗಿ ಇದರ ವತಿಯಿಂದ ‘ರಂಗ ದಸರಾ’ ಮೂರು ದಿನಗಳ ನಾಟಕೋತ್ಸವವನ್ನು ದಿನಾಂಕ 27, 28 ಮತ್ತು 29 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 27 ಸೆಪ್ಟೆಂಬರ್ 2025ರಂದು ಈ ನಾಟಕೋತ್ಸವವನ್ನು ಮಾನ್ಯ ಜಿಲ್ಲಾಧಿಕಾರಿ ಕು. ಬಿ. ಫೌಜಿಯಾ ತರನ್ನುಮ್ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಂಗಾಯಣ ಕಲಬುರಗಿ ಇದರ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಹನುಮಯ್ಯ ಕಲಾ ತಂಡ ಇವರಿಂದ ರಂಗಗೀತೆಗಳು ಮತ್ತು ಕಲಬುರಗಿಯ ವಿಶ್ವರಂಗ (ರಿ.) ತಂಡದವರಿಂದ ಡಾ. ವಿಶ್ವರಾಜ ಪಟೇಲ್ ಇವರ ನಿರ್ದೇಶನದಲ್ಲಿ ‘ಭರ್ಜರಿ ಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.

    ದಿನಾಂಕ 28 ಸೆಪ್ಟೆಂಬರ್ 2025ರಂದು ಮರಿಯಮ್ಮನಹಳ್ಳಿ ರಂಗ ಬಿಂಬ (ರಿ.) ತಂಡದವರಿಂದ ಬಿ.ಎಂ.ಎಸ್. ಪ್ರಭು ಇವರ ನಿರ್ದೇಶನದಲ್ಲಿ ‘ಸಂಗ್ಯಾ ಬಾಳ್ಯ’ ನಾಟಕ ಪ್ರಸ್ತುತಗೊಳ್ಳಲಿದೆ.

    ದಿನಾಂಕ 29 ಸೆಪ್ಟೆಂಬರ್ 2025ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಂಗಾಯಣ ಕಲಬುರಗಿ ಇದರ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಇವರು ವಹಿಸಲಿದ್ದು, ಸನ್ಮಾನ್ಯ ಎಂ.ವೈ. ಪಾಟೀಲ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಬುರಗಿ ಜಿಲ್ಲೆಯ ಅಫಜಲಪುರದ ಶ್ರೀ ಸಿದ್ಧರಾಮೇಶ್ವರ ಹವ್ಯಾಸಿ ಬೈಲಾಟ ಮಂಡಳಿ ಪ್ರಸ್ತುತಪಡಿಸುವ ‘ಭೀಮವಿಲಾಸ ಅರ್ಥಾತ್ ಕೀಚಕ ವಧೆ’ ಬಯಲಾಟ ಪ್ರದರ್ಶನಗೊಳ್ಳಲಿದೆ.

    baikady drama Music roovari
    Share. Facebook Twitter Pinterest LinkedIn Tumblr WhatsApp Email
    Previous Articleಆಳ್ವಾಸ್ ಕಾಲೇಜಿನಲ್ಲಿ ಭೈರಪ್ಪರಿಗೆ ನುಡಿನಮನ
    Next Article ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ‘ಆದಿಕವಿ’ ಮತ್ತು ‘ವಾಗ್ದೇವಿ’ ಪುರಸ್ಕಾರ ಪ್ರಕಟ
    roovari

    Add Comment Cancel Reply


    Related Posts

    ವಿಭಾ ಸಾಹಿತ್ಯ ಪ್ರಶಸ್ತಿಗೆ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಕೃತಿ ಆಯ್ಕೆ

    October 3, 2025

    ಪುತ್ತೂರಿನ ಶ್ರೀ ಸ್ವಾಮಿ ಕಲಾಮಂದಿರದ ದರ್ಶನ ಸಭಾಭವನದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಅಕ್ಟೋಬರ್ 05

    October 2, 2025

    ಡಾ. ಉದಯ ಕುಮಾರ ಇರ್ವತ್ತೂರು ಇವರು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅಕ್ಟೋಬರ್ 04

    October 2, 2025

    ‘ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಫೆಲೋಶಿಪ್’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    October 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.