Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಡು ನುಡಿ ವೈಭವದ ‘ರತ್ನೋತ್ಸವ’
    Cultural

    ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಡು ನುಡಿ ವೈಭವದ ‘ರತ್ನೋತ್ಸವ’

    December 21, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 20-12-2023ರಂದು ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾಡು-ನುಡಿ-ವೈಭವದ ರತ್ನೋತ್ಸವವು ವೈಭವಪೂರ್ಣವಾಗಿ ನಡೆಯಿತು. ಸಮಾರಂಭದ ಸರ್ವಾಧ್ಯಕ್ಷ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡರು ಸರ್ವಾಧ್ಯಕ್ಷರಾಗಿ ಸಾಹಿತ್ಯದ ಒಳಗು ಹೊರಗುಗಳ ವಿವರವಾದ ವಿಶ್ಲೇಷಣೆ ಮಾಡಿದರು. ಪ್ರಧಾನ ಉಪನ್ಯಾಸ ಮಾಲಿಕೆಯಲ್ಲಿ ಡಾ. ಧನಂಜಯ ಕುಂಬಳೆಯವರ ಅಧ್ಯಕ್ಷತೆಯಲ್ಲಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಶ್ರೀ ಮುನಿರಾಜ ರೆಂಜಾಳರು ಕ್ರಮವಾಗಿ ದಾಸ ಸಾಹಿತ್ಯ ಹಾಗೂ ಇಂದಿನ ಸಾಹಿತ್ಯಗಳ ಕುರಿತಾಗಿ ಸೋದಾಹರಣ ಸಹಿತ ಮಾತನಾಡಿದರು.

    ನಂತರ ನಡೆದ ಕವಿ ಕಾವ್ಯ ಚಿತ್ರ ಗಾಯನದಲ್ಲಿ ಊರಿನ ಪ್ರಸಿದ್ಧ ಕವಿಗಳಾದ ಕರುಣಾಕರ ಬಳ್ಕೂರು, ಸಂಶೀರ್ ಬುಡೋಳಿ, ಜೋಯ್ಸ್ ಪಿಂಟೋ, ಚಂದ್ರಹಾಸ್ ಕೋಟೆಕಾರ್, ಶಾಂತಪ್ಪ ಬಾಬು, ನಾರಾಯಣ ಕುಂಬ್ರ ಮತ್ತು ವಸಂತಿ ನಿಡ್ಕೆಯವರು ಸ್ವರಚಿತ ಗೇಯ ಕವನಗಳನ್ನು ವಾಚನ ಮಾಡಿ, ಅದೇ ಕವನವನ್ನು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಗಾಯಕಿ ಸೌಮ್ಯಾ ಕಟೀಲ್ ಸಂಗೀತ ಸಹಿತವಾಗಿ ಹಾಡಿದರು. ಅದೇ ಗಾಯನದ ಜೊತೆಗೆ ಆಶು ಚಿತ್ರಕಲಾ ಪ್ರವೀಣೆ ಕು. ಆಶ್ರಿತಾ ರೈಯವರು ಚಿತ್ರ ಬರೆದು ಮನ ಸೆಳೆದರು.

    ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು “ಸರ್ವಕವಿಗಳ ಕವನದ ಬಗ್ಗೆ ಮಾತನಾಡುತ್ತಾ, ಬರೆದಾಗ ಗದ್ಯವಾದರೆ ಅದು ಕಟ್ಟುವ ಕೆಲಸವಾಗುತ್ತದೆ. ಅದೇ ಗದ್ಯವನ್ನು ಭಾವದೊಳಗೆ ಬಂಧಿಸಿದಾಗ ಕವನವಾಗಿ ಹುಟ್ಟುತ್ತದೆ. ಹಾಗೆ ಹುಟ್ಟಿದ ಕವನವು ಗಾಯಕನಿಗೆ ದೊರಕಿದಾಗ ಹಲವು ತರಕಾರಿಗಳನ್ನು ಬಳಸಿ ಮಾಡಿದ ವ್ಯಂಜನದಂತೆ ರುಚಿ ಕೊಡುವ ಖಾದ್ಯವಾಗುತ್ತದೆ” ಎಂದರು. ಬಳಿಕ ಸ್ವರಚಿತ ಕವನ ‘ನೇಸರ’ವನ್ನು ವಾಚಿಸಿ, ಅದೇ ಕವನವನ್ನು ಯುಗಳ ಗಾಯಕರು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮ ಸಂಯೋಜಕ ಹಾಗೂ ನಿರೂಪಕ ಭಾಸ್ಕರ ರೈ ಕುಕ್ಕುವಳ್ಳಿಯವರು ಆಶಯ ಕವನ ವಾಚಿಸಿದರು. ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ದಂಪತಿಗಳೂ, ಗಣ್ಯ ಸಾಹಿತಿಗಳೂ, ಶಿಕ್ಷಕ ಶಿಕ್ಷಕಿಯರೂ ಊರ ಪ್ರಮುಖರೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಹಿತ ಕಿಕ್ಕಿರಿದ ಉಪಸ್ಥಿತಿಯಿತ್ತು.

    ಅಶೋಕ್ ಪೊಳಲಿ ಇವರಿಂದ ಕೋಳಿನೃತ್ಯ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವೀರಗಾಸೆ, ಗಾಯನ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜನೆ ನೀಡಿದುವು.

    Share. Facebook Twitter Pinterest LinkedIn Tumblr WhatsApp Email
    Previous Articleಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವ | ಡಿಸೆಂಬರ್ 23
    Next Article ಕೊಣಾಜೆ ಭಜನೋತ್ಸವದಲ್ಲಿ ‘ಭಜನಾ ಸಾಧಕ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಸಂಭ್ರಮ 2025’ ಸಾಂಸ್ಕ್ರತಿಕ ಸ್ವರ್ಧೆ

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.