ಮಂಗಳೂರು : ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಬಾಲ ಭವನ್ ವಿದ್ಯಾಕೇಂದ್ರ ಅಶ್ವಿನಿ ನಗರ ಕಾಸರಗೋಡು, ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ವನ್ನು ದಿನಾಂಕ 27 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕನ್ನಡ ಭವನ ಮತ್ತು ಗ್ರಂಥಾಲಯ ಇದರ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಬಾಲ ಭವನ್ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೈಸರ್ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರು ಉದ್ಘಾಟನೆ ಮಾಡಲಿರುವರು. ಸಂಕೀರ್ತನ ಸಾಮ್ರಾಟ್ ಶ್ರೀ ಜಯಾನಂದ ಕುಮಾರ್ ಹೊಸದುರ್ಗ, ಹಿರಿಯ ಸಂಘಟಕ ಸಾಹಿತಿ ಪತ್ರಕರ್ತ ಪ್ರದೀಪ್ ಬೇಕಲ್, ಪತ್ರಕರ್ತ ಸಾಹಿತಿ ರಂಗಕಲಾವಿದ ಬಹುಭಾಷಾ ನಿರೂಪಕ ಜಯಮಣಿಯಂಪಾರೆ ಮತ್ತು ಕನ್ನಡ ಭವನ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಸಂಧ್ಯಾರಾಣಿ ಟೀಚರ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.