Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” – ಪುಸ್ತಕ ಅನಾವರಣ – ಉಪನ್ಯಾಸ
    Literature

    “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” – ಪುಸ್ತಕ ಅನಾವರಣ – ಉಪನ್ಯಾಸ

    March 27, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    27 ಮಾರ್ಚ್ 2023, ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಗುರುವಾರ ದಿನಾಂಕ 23-03-2023ರ ಸಂಜೆ ನಡೆದ “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ್ ರಾಜೇಶ್‌ ಪದ್ಮಾರ್‌ ಉಪನ್ಯಾಸ ನೀಡಿದರು.

    “ಅಸ್ಪೃಶ್ಯತೆಯು ಮಾನವ ಕುಲಕ್ಕೆ ಅಂಟಿದ ದೊಡ್ಡ ಕಳಂಕ. ಅದನ್ನು ನಿರ್ಮೂಲನಗೊಳಿಸಲು ಹೋರಾಟ ಅಥವಾ ಸಂಘರ್ಷದಿಂದ ಅಸಾಧ್ಯ. ಅದಕ್ಕೆ ಬೇಕಾದುದು ಮುಕ್ತ ಮನಸ್ಸು. ತೆರೆದ ಮನಸ್ಸಿಂದ ಮಾತ್ರ ಸಾಮರಸ್ಯ ಮೂಡಬಹುದು. ಸಾಮರಸ್ಯಕ್ಕೆ ನಮ್ಮ ಮನೆಯೇ ವೇದಿಕೆಯಾಗಬೇಕು. ಇದು ಕೇವಲ ಮಾತಿನಿಂದ ಮಾತ್ರವಲ್ಲದೆ ಅನುಷ್ಠಾನದಲ್ಲೂ ಕಾಣಬೇಕಾಗಿದೆ. ತಾನೇ ಇತರರಿಂದ ಶ್ರೇಷ್ಠ ಎನ್ನುವ ಸಂಕುಚಿತ ಭಾವನೆಯಿಂದ ಇತರ ವರ್ಗ ಅಥವಾ ವ್ಯಕ್ತಿಗಳನ್ನು ತುಚ್ಛವಾಗಿ ಅಥವಾ ಕೀಳಾಗಿ ಕಾಣುವುದೇ ಅಸ್ಪೃಶ್ಯತೆ. ತಮ್ಮತನವನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ತೊಡೆದು ಹಾಕಬೇಕು. ದೇವಾಲಯಗಳಿಗೆ ಎಲ್ಲರಿಗೂ ಮುಕ್ತವಾಗಿ ಪ್ರವೇಶ ದೊರೆಯಬೇಕು. ಶವ ಸಂಸ್ಕಾರದಲ್ಲೂ ಅಸ್ಪೃಶ್ಯತೆಯನ್ನು ಕಾಣುವ ಕೀಳು ಚಿಂತನೆ ನೀಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಿವೃತ್ತ ಉಪನ್ಯಾಸಕ, ಸಾಹಿತಿ ಪ್ರೊ.ಪಿ.ಎನ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಮಾಜದ ಅಶಾಂತಿಗೆ ಮುಖ್ಯ ಕಾರಣವೇ ಅಸಮಾನತೆಯಾಗಿದೆ. ಮೊದಲಿದ್ದಷ್ಟು ಈಗಿಲ್ಲವಾದರೂ ಸಂಪೂರ್ಣವಾಗಿ ತೊಡೆದು ಹೋಗಿಲ್ಲ. ಇದಕ್ಕೆ ಎಲ್ಲರೂ ತನ್ನವರೆಂಬ ಉದಾರ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ ಗೌರವ ಉಪಸ್ಥಿತಿಯಲ್ಲಿ, ರಾಜೇಶ್ ಪದ್ಮಾರ್ ಅವರ “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” ಎಂಬ ಪುಸ್ತಕ ಅನಾವರಣಗೊಂಡಿತು. ಆರ್‌.ಎಸ್‌.ಎಸ್‌. ಬದಿಯಡ್ಕ ತಾಲೂಕು ಪ್ರಚಾರ ಪ್ರಮುಖ್‌ ಗಣೇಶ್ ಪಿ.ಎಂ. ಮುಂಡಾನ್ ತ್ತಡ್ಕ ಸ್ವಾಗತಿಸಿ, ಕಾಸರಗೋಡು ಗ್ರಾಮಾಂತರ ತಾಲೂಕು ಪ್ರಚಾರ ಪ್ರಮುಖ್ ಪ್ರಮೋದ್ ವಂದಿಸಿದರು. ಮಂಜೇಶ್ವರ ತಾಲೂಕು ಪ್ರಚಾರ ಪ್ರಮುಖ್ ಜಗದೀಶ್ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಕೋಡಿಬೈಲು ವೈಯಕ್ತಿಕ ಗೀತೆ ಹಾಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಹೊಸಕೋಟೆಯಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ
    Next Article ವಾಸುದೇವ ನಾಡಿಗ್ ಮತ್ತು ರತ್ನಾಕರ ಕುನಗೋಡು ಇವರಿಗೆ ಸು.ರಂ.ಎಕ್ಕುಂಡಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.