ಮಂಗಳೂರು : ನೃತ್ಯಾಂಗನ್ ಟ್ರಸ್ಟ್ ಈ ಬಾರಿ ತನ್ನ 13ನೇ ಆವೃತ್ತಿಯ ‘ಸಮರ್ಪಣ್ 2026’ ಎರಡು ದಿನಗಳ ಭಾರತೀಯ ಶಾಸ್ತ್ರೀಯ ನೃತ್ಯೋತ್ಸವನ್ನು ಮಂಗಳೂರಿನ ಡಾನ್ಬಾಸ್ಕೊ ಹಾಲ್ನಲ್ಲಿ ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಪ್ರತಿದಿನ ಸಂಜೆ ಗಂಟೆ 5-45ಕ್ಕೆ ಆಯೋಜಿಸಿದೆ.
ದಿನಾಂಕ 7 ಫೆಬ್ರವರಿ 2026ರಂದು ನಡೆಯುವ ಕಾರ್ಯಕ್ರಮಕ್ಕೆ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟುವಿನ ಕಲಾ ನಿರ್ದೇಶಕಿ, ಗುರು ಭಾರತಿ ಸುರೇಶ್ ಚಾಲನೆ ನೀಡುವರು. ಅನಂತರ, ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿಯ ಶ್ರೀವಿದ್ಯಾ ಶಶಿಧರ್ ಅವರ ಶಿಷ್ಯರಾದ ಭುವನ್ ಕುಮಾರ್ ಎಸ್, ಸ್ಪೂರ್ತಿ ಬಿ.ವಿ. ಮತ್ತು ನಿಸರ್ಗ ಎಸ್. ಭರತನಾಟ್ಯ ತ್ರಯ ಪ್ರದರ್ಶನ ನೀಡುವರು. ನಂತರ ಚೆನ್ನೈಯ ಅಶ್ವತಿ ಸುರೇಶ್ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡುವರು.

ದಿನಾಂಕ 08 ಫೆಬ್ರವರಿ 2026ರಂದು ಕಲ್ಲಡ್ಕದ ಕಲಾನಿಕೇತನ ಡಾನ್ಸ್ ಫೌಂಡೇಶನ್ ಇದರ ಕಲಾ ನಿರ್ದೇಶಕಿ, ಗುರು ವಿದ್ಯಾ ಮನೋಜ್ ಚಾಲನೆ ನೀಡುವರು. ನಂತರ ಬೆಂಗಳೂರಿನ ಗೌರಿ ಮನೋಹರಿ ಎಚ್. ಹಾಗೂ ಕಿನ್ನಿಗೋಳಿ ಮೂಲದ ಅನ್ನಪೂರ್ಣಾ ರಿತೇಶ್ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡುವರು. ಬಳಿಕ ಚೆನ್ನೈಯ ಸಾತ್ವಿಕಾ ಶಂಕರ್ ‘ಸ್ಕಂದಾನುಭವಂ’ ಎಂಬ ವಿಷಯಾಧಾರಿತ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡುವರು.



ಎರಡೂ ದಿನಗಳ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.

