Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಮನವಮಿಯಂದು ಪುತ್ತೂರಿನಲ್ಲಿ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ
    Bharathanatya

    ರಾಮನವಮಿಯಂದು ಪುತ್ತೂರಿನಲ್ಲಿ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ

    April 6, 20232 Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    06 ಏಪ್ರಿಲ್ 2023, ಪುತ್ತೂರು: ಸನಾತನ ಸಂಪ್ರದಾಯದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದನು ಎಂಬುದು ಹಿಂದೂ ಧರ್ಮದ ನಂಬಿಕೆ. ಈ ದಿನ ಶ್ರೀರಾಮನಿಗೆ ವಿಶೇಷವಾದ ಪೂಜೆ ಮತ್ತು ವೃತಗಳು ನಡೆಯುತ್ತವೆ.

    ರಾಮನವಮಿಯಂದು ವಿಶೇಷವಾಗಿ ದ್ವಾರಕ ಪ್ರತಿಷ್ಠಾನದ ವತಿಯಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರಿಂದ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ ಕಾರ್ಯಕ್ರಮ ಮುಕ್ರಂಪಾಡಿ ಗೋಕುಲ ಬಡಾವಣೆಯ ‘ನಂದಗೋಕುಲ’ ವೇದಿಕೆಯಲ್ಲಿ ದಿನಾಂಕ 30-03-2023ರಂದು ನಡೆಯಿತು.

    ದ್ವಾರಕ ಪ್ರತಿಷ್ಠಾನದ ಶ್ರೀ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗೋಪಾಲಕೃಷ್ಣ ಭಟ್ ಇವರ ಮಾತೃಶ್ರೀ ಹಿರಿಯರಾದ ಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದಿಂದ ಅದ್ವಿತ್ ಕಲ್ಲೂರಾಯ ರಾಮನವಮಿಯ ಕುರಿತು ಮಾತನಾಡಿದರು. ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಹಿರಿಯ ವಿದ್ಯಾರ್ಥಿನಿ ಅಪೂರ್ವ ಗೌರಿ ನೃತ್ಯ ಗುರುಗಳನ್ನು ಪರಿಚಯಿಸಿದರು. ಡಾ. ಸದಾಶಿವ ಭಟ್ ಪೆರ್ಲ ಮತ್ತು ಡಾ.ಪ್ರತಿಭಾ ಕಲ್ಲೂರಾಯ ನೃತ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರನ್ನು ಗೌರವಿಸಿದರು. ಆಗಮಿಸಿದವರೆಲ್ಲರನ್ನು ಅವನೀಶ ಕೃಷ್ಣ ಸ್ವಾಗತಿಸಿದರು.

    ಬಳಿಕ ನೃತ್ಯ ರೂಪಕದಲ್ಲಿ ವಿವಿಧ ಹಸ್ತಮುದ್ರೆಯ ಮೂಲಕ ರಾಮಾಯಣದ ಪಾತ್ರದಲ್ಲಿ ಬರುವವರನ್ನು ತೋರಿಸಿದರು. ದಶರಥ ಮಹಾರಾಜ ಪತ್ನಿಯರ ಜೊತೆ ಮಾಡಿದ ಯಜ್ಞ, ಸೀತಾ ಕಲ್ಯಾಣ, ಪಟ್ಟಾಭಿಷೇಕದ ಕಥೆ, ವನವಾಸ, ಸೀತಾ ಅಪಹರಣ, ಅಶೋಕವನ, ರಾವಣ ಸಂಹಾರ, ಸೀತೆಯ ಅಗ್ನಿಪರೀಕ್ಷೆ ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ – ‘ಯಕ್ಷಯಾನ 2023’
    Next Article ಪೆರ್ಲ ಶಿವಾಂಜಲಿ ಕಲಾಕೇಂದ್ರದಲ್ಲಿ ನೃತ್ಯ ಕಾರ್ಯಾಗಾರ ಜ್ಞಾನ ವಾಹಿನಿ -2023
    roovari

    2 Comments

    1. Ashwini on April 6, 2023 5:41 pm

      Wonderful
      Pleasure to watch sampoorna ramayana and all our kids enjoyed the most 👏👏👏🙏

      Reply
    2. Suhani on April 7, 2023 5:12 pm

      Excellent work💪

      Reply

    Add Comment Cancel Reply


    Related Posts

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    2 Comments

    1. Ashwini on April 6, 2023 5:41 pm

      Wonderful
      Pleasure to watch sampoorna ramayana and all our kids enjoyed the most 👏👏👏🙏

      Reply
    2. Suhani on April 7, 2023 5:12 pm

      Excellent work💪

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.