Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಕೃತಿಗೆ ‘ಸಂಗಮ ಸಿರಿ ಪ್ರಶಸ್ತಿ’
    Awards

    ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಕೃತಿಗೆ ‘ಸಂಗಮ ಸಿರಿ ಪ್ರಶಸ್ತಿ’

    October 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹುಬ್ಬಳ್ಳಿ : ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ‘ಸಂಗಮ ಸಿರಿ-23’ರ ಪ್ರಶಸ್ತಿಯು ವಚನ ರಚನೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಸರೂರ್ ಗ್ರಾಮದ ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಆಧುನಿಕ ವಚನ ಸಂಕಲನಕ್ಕೆ ನೀಡಲಾಗಿದೆ. ಪ್ರಶಸ್ತಿಯು ರೂ.10,000/- ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ನವೆಂಬರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು.

    ಈ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ ಅದ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
    ಕಳೆದ ವರ್ಷ ಸಂಶೋಧನ ಕ್ಷೇತ್ರದಲ್ಲಿ ಡಾ.ದಂಡೆ ದಂಪತಿಗೆ ಪ್ರಶಸ್ತಿ ನೀಡಲಾಗಿತ್ತು. ಆಯ್ಕೆ ಸಮಿತಿ ಸಭೆಯಲ್ಲಿ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ,ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಗಿ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಸಾಹಿತಿ ಮಹಾಂತಪ್ಪ ನಂದೂರು, ಸುಶೀಲೇಂದ್ರ ಕುಂದರಗಿ, ಜಿ.ಎಸ್. ಅಂಗಡಿ, ಡಾ. ಬಿ.ಎಸ್. ಮಾಳವಾಡ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ್ ಅಂಗಡಿ, ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ್ ಇತರರು ಪಾಲ್ಗೊಂಡಿದ್ದರು.

    ಕವಿ ಪರಿಚಯ : ಸಿದ್ದನಗೌಡ ಬಿಜ್ಜುರ್ ಅವರು ವೃತ್ತಿಯಿಂದ ಶಿಕ್ಷಕರಾಗಿ ಸದ್ಯ ಮುದ್ದೇಬಿಹಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತಿಯಾಗಿ ಗುರುತಿಸಿಕೊಂಡ ಸಿದ್ದನಗೌಡರು ವಚನ ಸಾಹಿತ್ಯದಲ್ಲಿಯೂ ಸಹಿತ ತಮ್ಮನ್ನು ತಾವು ಬರವಣಿಗೆಯಲ್ಲಿ ತೊಡಗಿಸಿಕೊಂಡು ವಿಜಯಪುರ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ.

    ಪ್ರಕಟಿತ ಪುಸ್ತಕಗಳು:
    1) ಸೃಷ್ಟಿ-ಚೆಲುವು (ಮಕ್ಕಳ ಕವನ ಸಂಕಲನ,)
    2) ಎಳೆಮನ (ಮಕ್ಕಳ ಕವಿತೆಗಳು)
    3) ಹುಚ್ಚೆಲ್ಲಪ್ಪನ್ ರಗ್ಯಂ ಪಟ್ಟಂ (ಮಕ್ಕಳ ಕವಿತೆಗಳು) 2022
    4) ಮೃದುವಚನ (ಆಧುನಿಕ ವಚನಗಳು) 2023
    5) ದೇವರಿಗೆ ಜ್ವರ ಬಂದಾಗ (ಮಕ್ಕಳ ಕಥೆಗಳು)

    ಪಡೆದ ಪ್ರಶಸ್ತಿಗಳು
    1) ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ದೇವರಹಿಪ್ಪರಗಿ ಕೊಡಮಾಡುವ “ಕಾವ್ಯಸಿರಿ ಪ್ರಶಸ್ತಿ”.
    2) ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಕೊಡಮಾಡುವ “ಕಂಚ್ಯಾಣಿ ಶರಣಪ್ಪ ದತ್ತಿ ಸಾಹಿತ್ಯ ಪ್ರಶಸ್ತಿ”

    Share. Facebook Twitter Pinterest LinkedIn Tumblr WhatsApp Email
    Previous Articleಪಂ.ಪ್ರವೀಣ ಗೋಡ್ಖಿಂಡಿ – ‘ಸಂಗೀತ ಸಾಧಕ ಪ್ರಶಸ್ತಿ’ ಪ್ರದಾನ
    Next Article ಲೇಖಕಿ ಸುರೇಖಾ ಭೀಮಗುಳಿಯವರ “ತಲ್ಲಣ” ಕಥಾ ಸಂಕಲನ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.