Subscribe to Updates

    Get the latest creative news from FooBar about art, design and business.

    What's Hot

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತ ಪರಿಷತ್ ವತಿಯಿಂದ ‘ಸಂಗೀತ ತ್ರಿಮೂರ್ತಿ ಹಾಗೂ ದಾಸ ವರೇಣ್ಯರ ಆರಾಧನೋತ್ಸವ’ ಕಾರ್ಯಕ್ರಮ
    Music

    ಸಂಗೀತ ಪರಿಷತ್ ವತಿಯಿಂದ ‘ಸಂಗೀತ ತ್ರಿಮೂರ್ತಿ ಹಾಗೂ ದಾಸ ವರೇಣ್ಯರ ಆರಾಧನೋತ್ಸವ’ ಕಾರ್ಯಕ್ರಮ

    January 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ.) ಆಶ್ರಯದಲ್ಲಿ, ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣಮಠದ ಸಹಯೋಗದಲ್ಲಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಂಗೀತ ತ್ರಿಮೂರ್ತಿ ಹಾಗೂ ದಾಸ ವರೇಣ್ಯರ ಆರಾಧನೋತ್ಸವ ಕಾರ್ಯಕ್ರಮವು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 21-01-2024ರಂದು ನಡೆಯಿತು. ಸ್ವಾಮಿ ಚಿದಂಬರಾನಂದ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಯಚ್. ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ನಿರೂಪಿಸಿದರು.

    ನಂತರ ಬೆಂಗಳೂರಿನ ನಿರಂಜನ್ ದಿಂಡೋಡಿಯವರು ಸುಶ್ರಾವ್ಯವಾಗಿ ಪರಿಶುದ್ಧವಾದ ವಿದ್ವತ್ ಪೂರ್ಣ ಕಛೇರಿಯನ್ನು ನೀಡಿದರು. ಪಿಟೀಲು ವೈಭವ ರಮಣಿ, ಮೃದಂಗದಲ್ಲಿ ನಿಕ್ಷತ್ ಮತ್ತು ಮೋರ್ಸಿಂಗ್ ರಾಜಶೇಖರ್ ಇವರುಗಳು ಪಕ್ಕವಾದ್ಯದಲ್ಲಿ ಸಹಕರಿಸಿದರು. ಮಧ್ಯಾಹ್ನದ ಮೊದಲ ಕಛೇರಿಯು ಮಂಗಳೂರಿನ ಸುದೀಕ್ಷ ಅವರ ಹಾಡುಗಾರಿಕೆ, ಮಹತಿಯವರ ಪಿಟೀಲು ಹಾಗೂ ಅವಿನಾಶ್ ಅವರ ಮೃದಂಗ ಸಹಕಾರದೊಂದಿಗೆ ನಡೆಯಿತು. ಆಮೇಲೆ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ವಿದುಷಿ ವೀಣಾ ಶಾಸ್ತ್ರಿ, ವಿದ್ವಾನ್ ಗೋಪಾಲ್ ಹಾಗೂ ಅವರ ಶಿಷ್ಯ ವೃಂದದವರಿಂದ ತ್ಯಾಗರಾಜರ ಪಂಚರತ್ನ ಗೋಷ್ಠಿಗಾಯನ ನಡೆಯಿತು.

    ಸಂಜೆ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಮೈಸೂರಿನ ಹರೀಶ್ ಪಾಂಡವ್ ಅವರು ಸ್ಯಾಕ್ಸೋಫೋನ್ ಕಛೇರಿಯನ್ನು ನೀಡಿದರು. ಪ್ರಬುದ್ಧವಾದ ಗಾಯಕೀ ಶೈಲಿಯ ಅವರ ವಾದನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತ ಪರಿಷತ್ತಿನ ಜೊತೆ ಕಾರ್ಯದರ್ಶಿ ಅಶ್ವಿನಿ ಮತ್ತು ಸದಸ್ಯೆ ಸೀತಾಲಕ್ಷ್ಮಿ ಅವರು ಕಲಾವಿದರನ್ನು ಪರಿಚಯಿಸಿ, ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಕೊನೆಯಲ್ಲಿ ರಾಮಕೃಷ್ಣಮಠದ ಸ್ವಾಮಿ ಜಿತಕಾಮಾನಂದಜಿಯರು ಮಂಗಳಾರತಿ ಬೆಳಗುವ ಮೂಲಕ ಆರಾಧನೋತ್ಸವ ಸಂಪನ್ನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಹಾದಿಗಲ್ಲು 12ನೇ ಮುದ್ರಣದ ಅನಾವರಣದ ಸಂದರ್ಭದಲ್ಲಿ ಚಿತ್ರಕಲಾ ಶಿಬಿರ
    Next Article ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ
    roovari

    Add Comment Cancel Reply


    Related Posts

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    ಮೈಸೂರಿನಲ್ಲಿ ಸಿತಾರ್ ವಾದನ, ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವ | ಮೇ 31

    May 30, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.