Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತ ಪರಿಷತ್ ಮಂಗಳೂರು ‘ತ್ರಿಂಶತಿ ಸಂಭ್ರಮ’ದಲ್ಲಿ ‘ಮಹತಿ ಸ್ವರಾಂಜಲಿ’
    Music

    ಸಂಗೀತ ಪರಿಷತ್ ಮಂಗಳೂರು ‘ತ್ರಿಂಶತಿ ಸಂಭ್ರಮ’ದಲ್ಲಿ ‘ಮಹತಿ ಸ್ವರಾಂಜಲಿ’

    April 26, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂಗೀತ ಪರಿಷತ್ ಮಂಗಳೂರು, ಸಂಸ್ಥೆಯು ತನ್ನ 30 ವಸಂತಗಳನ್ನು ಕಳೆದ ಸಂತಸವನ್ನು ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮವನ್ನು ವರ್ಷವಿಡೀ ಹಮ್ಮಿಕೊಳ್ಳುವ ಉದ್ದೇಶವಿಟ್ಟುಕೊಂಡಿರುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಸರಿಸುವ ಮಹತ್ತರ ಕಾರ್ಯ ಪರಿಷತ್ ನಿರ್ವಹಿಸುತ್ತಿದೆ. ‘ತ್ರಿಂಶತಿ ಸಂಭ್ರಮ’ದ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ 23-04-2023ರಂದು ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ‘ಮಹತಿ ಸ್ವರಾಂಜಲಿ’ ಎಂಬ ಸಂಗೀತಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಶ್ರೀ ಗೋಪಾಲ್ ಮೌದ್ಗಲ್ ರವರ ನೇತೃತ್ವದಲ್ಲಿ 30 ವೀಣಾವಾದಕರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟರು. ಪ್ರತಿಷ್ಟಿತ ಮೈಸೂರು ಶೈಲಿಯ ವೀಣಾವಾದನ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಲ್ಲಿ ಕೃತಿಗಳನ್ನು ನುಡಿಸಲಾಯಿತು. ವೆಂಕಟ ಗಿರಿಯಪ್ಪನವರ ಶಾರದಾಪ್ರಿಯ ರಾಗದ ಕೃತಿ, ಸುಪೋಷಿಣಿ ರಾಗದಲ್ಲಿ ತ್ಯಾಗರಾಜರ ಕೃತಿ, ವೀಣೆ ಶೇಷಣ್ಣನವರ ಅಪರೂಪದ ಸ್ವರ ಜತಿಗಳ ಕೃತಿಗಳನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರು ರಚಿಸಿದ ಕುಮುದಪ್ರಿಯಾ ರಾಗದ ತಿಲ್ಲಾನ ಅಮೋಘವಾಗಿ ಮೂಡಿ ಬಂದಿತು. ಮೈಸೂರು ವಿನಿಕೆಯ ಸೌಂದರ್ಯಕ್ಕೆ ದರ್ಪಣ ಹಿಡಿದಂತೆ ಶಿಸ್ತುಬದ್ಧ ಶಾಸ್ತ್ರೀಯ ಸಂಗೀತದ ಪ್ರಸ್ತುತಿ ಜನಮನ ಸೂರೆಗೊಂಡಿದೆ.

    ನಂತರ ಚೆನ್ನೈನ ಶ್ರೀ ರಿತ್ವಿಕ್ ರಾಜ ಮತ್ತು ತಂಡದವರಿಂದ ಹಾಡುಗಾರಿಕೆ ಕಛೇರಿ ನಡೆಯಿತು. ತೆರದಾಯಕರಾದ ಸಮಾನಮೆವರು ಕೃತಿಗಳು ಸುಲಲಿತವಾಗಿ ಮೂಡಿಬಂದರೆ, ವರಾಳಿ, ಕೇದಾರ ಗೌಳ ರಾಗಗಳು ಜನ ಮನ್ನಣೆ ಪಡೆಯಿತು. ಕಾವೆರಾಗದ ಜಗದೋದ್ಧಾರನ ಕೃತಿ ಗಾಯಕರ ಗುರು ವಿದ್ವಾನ್ ಟಿ.ಎಂ.ಕೆ.ರವರ ತದ್ರೂಪೋ ಎಂಬಂತೆ ಭಾಸವಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕರಾವಳಿ ಲೇಖಕಿಯರ – ವಾಚಕಿಯರ ಸಂಘದಲ್ಲಿ ‘ಮೌನ ಹೊದ್ದವಳು’ ಹಾಗೂ ‘ಕಸ್ತೂರಿ ಚಿಕ್ಕಿ ಮತ್ತು ಪುನುಗು ಬೆಕ್ಕು’ ಕೃತಿಗಳು ಲೋಕಾರ್ಪಣೆ
    Next Article ಅರೆಹೊಳೆಯಲ್ಲಿ ದ್ವಿದಿನ ರಂಗ ಹಬ್ಬದ ಸಂಭ್ರಮ | ಏಪ್ರಿಲ್ 30 ಮತ್ತು ಮೇ 1
    roovari

    Add Comment Cancel Reply


    Related Posts

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    ಬಾಸುಮ ಕೊಡಗು ಇವರ ಕವನ ಸಂಕಲನ ಲೋಕಾರ್ಪಣೆ ಸಮಾರಂಭ | ಜೂನ್ 22

    June 17, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನಮಾಲಿಕೆ – 38ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ | ಜೂನ್ 22

    June 17, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications