Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ‘ಸನಾತನ ನೃತ್ಯೋತ್ಸವ’

    December 30, 2025

    ನೃತ್ಯ ವಿಮರ್ಶೆ | ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯವಾಹಿನಿ’

    December 30, 2025

    ‘ಕಲಾ ಪರ್ವ’ದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ

    December 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿದ್ಯಾರ್ಥಿವೇತನ ವಿತರಣೆ ಹಾಗೂ ‘ವಿಕಾಸ-2025’ ಕೌಶಲ್ಯ ತರಬೇತಿ
    Camp

    ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿದ್ಯಾರ್ಥಿವೇತನ ವಿತರಣೆ ಹಾಗೂ ‘ವಿಕಾಸ-2025’ ಕೌಶಲ್ಯ ತರಬೇತಿ

    December 30, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಶ್ವಕೊಂಕಣಿ ಕೇಂದ್ರ ಶಕ್ತಿನಗರ ಮಂಗಳೂರು ಸಹಯೋಗದಲ್ಲಿ ದ.ಕ. ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ.) ಮಂಗಳೂರು ಇವರ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪೂರ್ವಭಾವಿ ಕೌಶಲ್ಯ ತರಬೇತಿ ‘ವಿಕಾಸ-2025’ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ನೆರವೇರಿಸಲಾಯಿತು.

    ಸುಮಾರು ಐವತ್ತು ವಿದ್ಯಾರ್ಥಿಗಳಿಗೆ ರೂಪಾಯಿ ಐದು ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ‘ವಿದ್ಯಾಕಲ್ಪಕ’ ವಿದ್ಯಾರ್ಥಿ ವೇತನ ನಿಧಿಯಿಂದ ವಿತರಿಸಲಾಯಿತು. ಚಪ್ಟೇಗಾರ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಶ್ರೀ ರವೀಂದ್ರ ನಾಯಕ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಮಂಗಳೂರು ಇಲ್ಲಿಯ ಡಾ. ಮನೋಹರ ನಾಯಕ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ನಡೆಸಿದರು. ಅನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಔಷಧ ವಿಜ್ಞಾನ ಕ್ಷೇತ್ರದ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

    ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಸಿ.ಎ. ನಂದಗೋಪಾಲ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ಇಂದಿನ ಯುಗದಲ್ಲಿ ಶಿಕ್ಷಣದ ಮೂಲಕ ಕೌಶಲ್ಯ ತರಬೇತಿ ನೀಡುವುದು ಅಗತ್ಯವಾಗಿದ್ದು, ಇಂತಹ ತರಬೇತಿ ಶಿಬಿರವನ್ನು ಚಪ್ಟೇಗಾರ ಸಂಘದ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಪಡೆಯಬೇಕು. ಮನೋಸಾಮರ್ಥ್ಯವನ್ನು ಗಟ್ಟಿಗೊಳಿಸಿ, ಆಲದ ಮರದಂತೆ ವಿಶಾಲವಾಗಿ ಬೆಳೆದು ಎಲ್ಲರೊಂದಿಗೆ ಸೇರಿ ಆತ್ಮವಿಶ್ವಾಸದಿಂದ ಸಮಾಜದಲ್ಲಿ ಕಾರ್ಯಪ್ರವ್ರತ್ತರಾಗಬೇಕು” ಎಂದು ಸ್ಫೂರ್ತಿದಾಯಕ ಸಂದೇಶ ನೀಡಿದರು.

    ಪ್ರೇರಣಾ ಕೌಶಲ್ಯ ಸಂಬಂಧಿತ ತರಬೇತು ಕಾರ್ಯಾಗಾರವನ್ನು ಕುಡ್ಪಿ ವಿದ್ಯಾ ಶೆಣೈ ನಡೆಸಿಕೊಟ್ಟರು ಹಾಗೂ ತ್ರಿಶಾ ಕ್ಲಾಸಸ್ ಸ್ಥಾಪಕರಾದ ಶ್ರೀ ಸಿ.ಎ. ಗೋಪಾಲಕೃಷ್ಣ ಭಟ್ ಇವರು ಕಾಮರ್ಸ್ ಕ್ಷೇತ್ರದ ಶಿಕ್ಷಣ- ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಗೋಪಾಲಕೃಷ್ಣ ನಾಯಕ್ ಇವರು ಯಕ್ಷಗಾನ, ಕಲೆ, ಹವ್ಯಾಸಗಳ ಬಗ್ಗೆ ಮಾಹಿತಿ ಚರ್ಚಿಸಿದರು. ಯೋಗಗುರು ಶ್ರೀ ಕುಂಬಳೆಕಾರ ಮೋಹನ ಕುಮಾರರವರು ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಬಗ್ಗೆ ತಿಳುವಳಿಕೆ ನೀಡಿದರು. ಶ್ರೀ ಪ್ರಕಾಶ ಶೆಣೈ ಯು. ಇವರ ಸಾಧನಾ ಬಳಗ ತಂಡದವರಿಂದ ಕೊಂಕಣಿ ವಿವಿಧ ಸಾಂಸ್ಕೃತಿಕ ಆಟಗಳು, ನೃತ್ಯ, ಕಲೆ ಅಭ್ಯಾಸ ನೀಡಿದರು. ವಿಶ್ವಕೊಂಕಣಿ ಕೇಂದ್ರದ ಸಿ.ಎ.ಒ. ಶ್ರೀ ಬಿ. ದೇವದಾಸ ಪೈ, ದ.ಕ. ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಲಕ್ಷ್ಮೀ ಕಿಣಿ ಪ್ರಾರ್ಥಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ದ.ಕ. ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘದ ಶ್ರೀ ಚಿದಾನಂದ ಎಮ್. ವಂದಿಸಿದರು.

    baikady camp Cultural dance Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಸಂಪನ್ನಗೊಂಡ 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’
    Next Article ‘ಕಲಾ ಪರ್ವ’ದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ
    roovari

    Add Comment Cancel Reply


    Related Posts

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ‘ಸನಾತನ ನೃತ್ಯೋತ್ಸವ’

    December 30, 2025

    ನೃತ್ಯ ವಿಮರ್ಶೆ | ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯವಾಹಿನಿ’

    December 30, 2025

    ‘ಕಲಾ ಪರ್ವ’ದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ

    December 30, 2025

    ಉಡುಪಿಯಲ್ಲಿ ಸಂಪನ್ನಗೊಂಡ 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’

    December 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.