Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭ

    November 3, 2025

    ವಿಪ್ರವೇದಿಕೆಯಿಂದ ದಶಮಾನೋತ್ಸವ ಸರಣಿಯ ‘ಗೀತ-ನೃತ್ಯ ಸಂಭ್ರಮ’

    November 3, 2025

    ‘ಪುಟಾಣಿ ಕಿನ್ನರಿ ಕವಿತಾ’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

    November 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿರಿಯ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನಿಲ್ಲ
    Yakshagana

    ಹಿರಿಯ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನಿಲ್ಲ

    November 3, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಟ್ಲ : ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ದಿನಾಂಕ 01 ನವೆಂಬರ್ 2025ರ ಶನಿವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ. ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು ಪ್ರಸ್ತುತ ಪುತ್ತೂರು ಸಮೀಪ ಮುರದಲ್ಲಿ ವಾಸಿಸುತ್ತಿದ್ದರು.

    ವಿಟ್ಲ ಶಂಭು ಶರ್ಮರು ಉತ್ತಮ ಅರ್ಥಧಾರಿ, ಪ್ರಸಂಗದ ನಡೆ, ಪದ್ಯಗಳ ಮರ್ಮ ಅರಿತು ಅರ್ಥ ಹೇಳಬಲ್ಲ ಬೆರಳೆಣಿಕೆಯ ಕಲಾವಿದರಲ್ಲಿ ಓರ್ವರಾಗಿದ್ದರು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೊಂದು ಪಾತ್ರ ಸೃಷ್ಟಿಸಬಲ್ಲ ಸಮರ್ಥ ಹಿರಿಯ ಅನುಭವೀ ಅರ್ಥಧಾರಿಗಳೂ ಆಗಿದ್ದರು. ವಿಟ್ಲ ಶಂಭು ಶರ್ಮರು ಕುಂಬ್ಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಕೃಷ್ಣ ಭಟ್ – ಹೇಮಾವತಿ ದಂಪತಿ ಪುತ್ರರಾಗಿ 13-10-1951ರಂದು ಜನಿಸಿದರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಶರ್ಮರು ತಾಳಮದ್ದಳೆ ಅರ್ಥಧಾರಿಗಳಾಗಿ ಮಿಂಚಿದರು. ಶರ್ಮರ ಅರ್ಥಗಾರಿಕೆಯು ಬಲು ಸೊಗಸಾದುದು. ಯಾವುದೇ ಪಾತ್ರವನ್ನು ನಿರ್ವಹಿಸುವಾಗ ಪೀಠಿಕೆಯಲ್ಲಿ ಆ ಪಾತ್ರದ ಗುಣ- ಸ್ವಭಾವವನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿಸುವ ವೈಖರಿ, ವಿನಾ ಕಾರಣ ಉದ್ದಕ್ಕೆ ಬೆಳೆಸದ, ಹೇಳಬೇಕಾದುದನ್ನು ಹೇಳಿಯೇ ಮುಗಿಸುವ ವಿಧಾನ ಶರ್ಮರದ್ದು ಮುಂದೆ ಜೀವನೋಪಾಯಕ್ಕಾಗಿ ಉಪನ್ಯಾಸಕರಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದ ಕಾರಣ ಶಂಭು ಶರ್ಮರಿಗೆ ಸ್ವಲ್ಪ ಮಟ್ಟಿಗೆ ಯಕ್ಷಗಾನದ ನಂಟು ಕಡಿಮೆಯಾಯಿತು. ತುರ್ತುಪರಿಸ್ಥಿತಿ ವಿರುದ್ಧದ ಪ್ರತಿಭಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು. ತುರ್ತುಪರಿಸ್ಥಿತಿಯ ನಂತರ ಮಂಗಳೂರಿನ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಪುನಃ ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು, ಫಿಶರೀಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶಾರದಾ ವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬಗ್ಗೆ ರಸಪ್ರಶ್ನೆ
    Next Article ‘ಪುಟಾಣಿ ಕಿನ್ನರಿ ಕವಿತಾ’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭ

    November 3, 2025

    ವಿಪ್ರವೇದಿಕೆಯಿಂದ ದಶಮಾನೋತ್ಸವ ಸರಣಿಯ ‘ಗೀತ-ನೃತ್ಯ ಸಂಭ್ರಮ’

    November 3, 2025

    ‘ಪುಟಾಣಿ ಕಿನ್ನರಿ ಕವಿತಾ’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

    November 3, 2025

    ಶಾರದಾ ವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬಗ್ಗೆ ರಸಪ್ರಶ್ನೆ

    November 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.