Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕರ್ಪಣೆಗೊಂಡ ‘ಶಾಂತೇಶ್ವರನ ವಚನಗಳು’
    Book Release

    ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕರ್ಪಣೆಗೊಂಡ ‘ಶಾಂತೇಶ್ವರನ ವಚನಗಳು’

    May 31, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಪುತ್ತೂರಿನ ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಹಾಗೂ ಸಾಹಿತಿ ಜನಾರ್ದನ ದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 27-05-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್ ಝೇವಿಯರ್ ಡಿ’ಸೋಜ ಮಾತನಾಡಿ ‘ಕಾಲೇಜು ಹಂತದಲ್ಲಿಯೆ ನಾಯಕತ್ವದ ಛಾಪು ಮೂಡಿಸಿದ್ದ ಜನಾರ್ದನರು ಅಹಂ ಇಲ್ಲದ ವಿನಯವುಳ್ಳ ವ್ಯಕ್ತಿತ್ವ, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ’ ಎಂದು ಶುಭಹಾರೈಸಿದರು.
    ಕಾರ್ಯಕ್ರಮದಲ್ಲಿ ಕೃತಿಯನ್ನು ಪರಿಚಯಿಸಿ ಮಾತನಾಡಿದ ಡಾ. ವರದರಾಜ್ ಚಂದ್ರಗಿರಿ “ಶಾಂತೇಶ್ವರನ ವಚನಗಳು ಸಮಾಜದ ಓರೆಕೋರೆಗಳನ್ನು ತಿದ್ದುವ, ಆತ್ಮವಿಮರ್ಶೆಗೆ ಹಚ್ಚುವ ಮೂಲಕ ಮನುಜ ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಂತೆ ಸಹಜ ಜೀವನ ನಡೆಸದೆ ಪ್ರಕೃತಿಯನ್ನು ತನ್ನಂಕೆಗೆ ಇಡುವ ದುಷ್ಪ್ರವೃತ್ತಿಯ ಪರಿಣಾಮಗಳನ್ನು ತೆರೆದಿಡುತ್ತವೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೃತ ಆಯ್ಕೆಯಾದಾಗಲೇ ಅದು ಗೆದ್ದಾಗಿದೆ’ ಎಂದರು. ಅಂತಿಮವಾಗಿ ಈ ಕೃತಿಯು, ಗುರಿಯೇ ಇಲ್ಲದೆ ಬದುಕುವ ಯುವ ಜನಾಂಗ, ಪ್ರಚಾರ ಪ್ರಸಿದ್ಧಿಗಳೇ ಯಶಸ್ಸೆಂಬ ಭ್ರಮೆಯಲ್ಲಿರುವ ಹೊಸ ತಲೆಮಾರು, ಹಾಗೂ ಬದುಕಿನಲ್ಲಿ ಆತ್ಮ ಸ್ಥೈರ್ಯ ಕಳೆದುಕೊಂಡು ಸೋತ ಜನವರ್ಗವನ್ನು ಗುರಿಯಾಗಿಸಿದ್ದು ಅಂತಹವರಿಗೆ ಈ ಕೃತಿಯು ದೊರೆತರೆ ಕವಿಯ ಉದ್ದೇಶ ಸಾಕ್ಷಾತ್ಕರಿಸುತ್ತದೆ.” ಎಂದರು.


    ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್.ಆರ್ “ಶಿಕ್ಷಕರು ಚಟುವಟಿಕೆಯಿಂದ ಇದ್ದು ಓದುವ ಹವ್ಯಾಸ ಹಾಗು ಸಾಹಿತ್ಯದ ಮೇಲಿನ ಅಭಿರುಚಿಯನ್ನು ಹೊಂದಿದಾಗ ವಿದ್ಯಾರ್ಥಿಗಳಿಗದು ಸ್ಪೂರ್ತಿದಾಯಕ ಈ ನಿಟ್ಟಿನಲ್ಲಿ ಇನ್ನಷ್ಟು ಚಿಂತನಶೀಲ ಕೃತಿಗಳು ಇವರಿಂದ ಮೂಡಿ ಬರಲಿ.” ಎಂದರು.
    ಕವಿ ಪರಿಚಯಗೈದ ಬೆಟ್ಟಂಪಾಡಿ ಕಾಲೀಜಿನ ಗ್ರಂಥಪಾಲಕರಾದ ರಾಮ ಕೆ. ಮಾತನಾಡಿ “ಬಾಲ್ಯದಲ್ಲಿಯೇ ಓದಿನ ಆಸಕ್ತಿ ಹೊಂದಿದ್ದ ಇವರ ಬರಹಗಳು ಪ್ರೌಢಶಾಲಾ ಹಂತದಲ್ಲಿಯೆ ತುಷಾರ, ಮಂಗಳ ಮೊದಲಾದ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.” ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಮಾತನಾಡಿ “ತಾನು ಮಾಡಿದೆ ಎನ್ನುವ ಬದಲು ಕೃತಿಯೇ ಮಾತನಾಡಿದಾಗ ಅದರ ಉದ್ದೇಶ ಈಡೇರಿದಂತೆ ಅದು ವಚನಗಳಲ್ಲಿ ವ್ಯಕ್ತವಾಗಿದ್ದು, ಇದೊಂದು ಉತ್ಕೃಷ್ಟ ಕೃತಿ ಎನ್ನುವುದಕ್ಕೆ ಎರಡು ಮಾತಿಲ್ಲ. ಸಾಹಿತ್ಯ ಚಟುವಟಿಕೆಗಳಿಗೆ ಪರಿಷತ್ತು ವಿಶೇಷ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ವೆಬ್ಸೈಟ್ ಅನ್ನು ಪುತ್ತೂರು ಘಟಕ ಆರಂಭಿಸಿದೆ.” ಎಂದರು.

    ಸಮಾರಂಭದಲ್ಲಿ ಶಿಕ್ಷಕರು ಹಾಗು ವಿದ್ಯಾರ್ಥಿಗಳ ಕವಿಗೋಷ್ಠಿಯು ವಿಶೇಷ ಗಮನ ಸೆಳೆಯಿತು. ನಾರಾಯಣ ಭಟ್ ಪಿ. ಎಸ್. ಇವರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಶುಭಕೋರಿದರು. ಇಪ್ಪತ್ತು ಕವಿಗಳು ಹಾಗು ಜನಾರ್ದನ ದುರ್ಗ ಅವರ ವಿದ್ಯಾರ್ಥಿಗಳು ಕವನ ವಾಚಿಸಿದರು. ಶಂಕರ್ ಮಹಾದೇವನ್ ಅಕಾಡೆಮಿಯ ತರಬೇತುದಾರರಾದ ಶ್ರೀಮತಿ ನಂದಿನಿ ವಿನಾಯಕ್ ಇವರ ಗಾಯನ ವಿಶೇಷ ಆಕರ್ಷಣೆಯಾಗಿತ್ತು. ಕವನ ವಾಚಿಸಿದ ಕವಿಗಳಿಗೆ ಪ್ರಮಾಣಪತ್ರ ಹಾಗು ‘ಶಾಂತೇಶ್ವರನ ವಚನಗಳು’ ಪುಸ್ತಕವನ್ನಿತ್ತು ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವಿ. ಬಿ. ಅರ್ತಿಕಜೆ, ನಾರಾಯಣ ರೈ ಕುಕ್ಕುವಳ್ಳಿ, ‘ಪೂವರಿ’ಯ ಸಂಪಾದಕರಾದ ವಿಜಯಕುಮಾರ್ ಹೆಬ್ಬಾರ ಬೈಲು, ನಿವೃತ್ತ ದೈಹಿಕ ಶಿಕ್ಷಕರಾದ ದಯಾನಂದ ರೈ ಕೊರ್ಮಂಡ, ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಂಘದ ಅಧ್ಯಕ್ಷರಾದ ಅಶೋಕ್ ನಾಯ್ಕ ಕೆದಿಲ, ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ, ಪ್ರಗತಿಪರ ಕೃಷಿಕ ವಿವೇಕ್ ಆಳ್ವ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಾದ ನಾಗೇಶ್ ಪಾಟಾಲಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧಾಕರ ರೈ, ದಕ್ಷಿಣ ಕನ್ನಡ ಜಿಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ದಿಲೀಪ್ ಕುಮಾರ್, ಸ. ನೌ. ಸಂಘದ ಪದಾಧಿಕಾರಿಗಳಾದ ತನುಜ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಕೆ. ಕೆ. ಸರ್, ಹಾರಾಡಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಆಧ್ಯಕ್ಷರಾದ ಸುಲೋಚನಿ, ನವೋದಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಹಾಗು ಮೊದಲಾದ ಹಿರಿಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
    ಗಿರೀಶ್ ದರ್ಬೆತ್ತಡ್ಕ ಹಾಗು ಶಾರದಾ ತುಳುನಾಡು ನಿರೂಪಿಸಿ, ಜನಾರ್ದನ ದುರ್ಗ ಸ್ವಾಗತಿಸಿ ಪ್ರಸ್ತಾವಣೆಗೈದು ಮುಖಪುಟ ವಿನ್ಯಾಸಕ ಜಗನ್ನಾಥ್ ಅರಿಯಡ್ಕ ಅವರು ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ | ಮೇ 31
    Next Article ಜನಮನ ರಂಜಿಸಿದ ವಿಪ್ರ ಸಮಾಗಮ ವೇದಿಕೆಯ ‘ಕರ್ನಾಟಕ ಶಾಸ್ತ್ರೀಯ ಕಲೋತ್ಸವ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.