ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇವರ ಸಹಯೋಗದೊಂದಿಗೆ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಇವರ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಇದರ ವತಿಯಿಂದ ಯಶಸ್ವಿ 113ನೇ ಕಾರ್ಯಕ್ರಮ ‘ಶತ ಸಂಭ್ರಮ’ ಮತ್ತು ಪೊಟ್ಟಿಪ್ಪಲ ಆಶುಕವಿ ಶ್ರೀ ಕೀರ್ತಿಶೇಷ ನಾರಾಯಣ ಭಟ್ ರವರಿಗೆ ‘ನುಡಿ ನಮನ’ ಕಾರ್ಯಕ್ರಮವನ್ನು ದಿನಾಂಕ 08 ಜೂನ್ 2025ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಗೀತಗಾಯನ, ಸಾಧಕರಿಗೆ ಸನ್ಮಾನ, ಕುಣಿತ ಭಜನೆ ಮತ್ತು ಭಜನೆ ಹಾಗೂ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಲಿದೆ.
ಪುತ್ತೂರು ತಾಲೂಕು ಕ.ಸಾ.ಪ.ದ ಅಧ್ಯಕ್ಷರಾದ ಉಮೇಶ್ ನಾಯಕ್ ಇವರು ‘ಶತ ಸಂಭ್ರಮ’ದ ಉದ್ಘಾಟನೆ ಮಾಡಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಉದ್ಯಮಿ ಪ್ರಸಾದ್ ಪೆರ್ಲ ಇವರು ನುಡಿ ನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪೊಟ್ಟಿಪ್ಪಲ ನಾರಾಯಣ್ ಭಟ್, ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ಗಂಗಾಧರ ಗಾಂಧಿ, ರಾಣಿ ಪುಷ್ಪಲತಾದೇವಿ ಇವರನ್ನು ಸನ್ಮಾನಿಸಲಾಗುವುದು. ಸಾಹಿತಿ ಡಾ. ಲಕ್ಷ್ಮಣ ಮೂರ್ತಿ ಇವರ ರಚನೆಯ ‘ರಾಣಿ ಅಬ್ಬಕ್ಕದೇವಿಯ ಜತೆ ಪಯಣ’ ಆರನೇ ಮುದ್ರಣ ಬಿಡುಗಡೆಗೊಳ್ಳಲಿದೆ. ಸಾಹಿತಿ ಡಾ. ಸುರೇಶ್ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಪೊಟ್ಟಿಪ್ಪಲ ಕೀರ್ತಿಶೇಷ ಆಶುಕವಿ ಶ್ರೀ ನಾರಾಯಣ ಭಟ್ ಇವರ ಕುರಿತಾದ ಚುಟುಕು, ಹನಿಗವನ ವಾಚನ ಹಾಗೂ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯವರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಪ್ರಸ್ತುತಗೊಳ್ಳಲಿದೆ.