Subscribe to Updates

    Get the latest creative news from FooBar about art, design and business.

    What's Hot

    ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ 81ನೆಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 20, 2025

    ಶ್ರೀ ಬೆಣ್ಣೆಗಣಪತಿ ಸಭಾಭವನ ‘ಯಕ್ಷಶ್ರಾವ್ಯ’ ತಾಳಮದ್ದಲೆ ಕಾರ್ಯಕ್ರಮ | ಅಕ್ಟೋಬರ್ 25

    October 20, 2025

    ವಿದ್ಯಾರ್ಥಿ ಕವಿಗೋಷ್ಠಿಗೆ ಆಹ್ವಾನ | ಅಕ್ಟೋಬರ್ 23

    October 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗಿರಿಜಾ ಹೆಗಡೆಯವರಿಗೆ ‘ಶಿಕ್ಷಕ ರತ್ನ’ ಪ್ರಶಸ್ತಿ
    Awards

    ಗಿರಿಜಾ ಹೆಗಡೆಯವರಿಗೆ ‘ಶಿಕ್ಷಕ ರತ್ನ’ ಪ್ರಶಸ್ತಿ

    December 20, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಶ್ರೀಮತಿ ಗಿರಿಜಾ ಹೆಗಡೆ ಇವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಎಂ.ಎ.(ಅರ್ಥಶಾಸ್ತ್ರ), ಎಂ.ಫಿಲ್ (ಉತ್ತರ ಕನ್ನಡ ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ. (ಹೆಚ್.ಆರ್.), ಬಿ.ಎಡ್. ಸ್ಲೆಟ್ ಪರೀಕ್ಷೆ ಪಾಸಾಗಿದ್ದು, ನಿಮ್ಹಾನ್ಸ್ ಕೊಡಮಾಡುವ ಒಂದು ವಾರದ ಜೀವನ ಕೌಶಲ್ಯ ತರಬೇತಿ ಪಡೆದಿದ್ದಾರೆ.

    ಕಥೆ, ಕವನ ರಚನೆ ಇವರ ಹವ್ಯಾಸವಾಗಿದ್ದು, ಇವರು ಪ್ರಕಟಿಸಿದ ಕೃತಿಗಳಾದ ‘ಅನಾವರಣ’ ಕವನ ಸಂಕಲನವು ಕಾರ್ನಾಡ್ ಸದಾಶಿವರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ. ‘ಅಗಸೆಬಾಗಿಲು’ ಕವನ ಸಂಕಲನ ಮತ್ತು ‘ನತ್ತು’ ಕಥಾ ಸಂಕಲನದ ಕಥೆಗೆ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಬಂದಿದೆ. ಹೀಗೆ ಕಥಾ ಮತ್ತು ಕವನ ಸಂಕಲನ ಪ್ರಶಸ್ತಿಗಳ ಜೊತೆಗೆ ಇವರ ಹಲವಾರು ಕಥೆ-ಕವನಗಳು ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಕವನಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಉಡುಪಿಯ ಪೂರ್ಣಪ್ರಜ್ಞಾ ಮತ್ತು ತ್ರಿಶಾ ಕಾಲೇಜಿನಲ್ಲಿ ಸೇವೆ ಸಲ್ಲಿಸುವಾಗ ವಿದ್ಯಾರ್ಥಿಗಳು ಸಿ.ಎ. ಪರೀಕ್ಷೆ ಪಾಸಾಗಲು ವಿಶೇಷವಾಗಿ ಶ್ರಮಿಸಿದ್ದು, ಇಂದು ಇವರ ಹಲವಾರು ವಿದ್ಯಾರ್ಥಿಗಳು ಸಿ.ಎ. ಪಾಸಾಗಿದ್ದಾರೆ. ಈಗಾಗಲೇ ದೇಶ ವಿದೇಶದ 10,000ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆದು ಬದುಕನ್ನು ಸಾರ್ಥಕ್ಯಗೊಳಿಸಿದ್ದಾರೆ. ಉತ್ತಮ ಫಲಿತಾಂಶದ ಜೊತೆ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿ ಸಾಮಾಜಿಕ ಸೇವಾ ಘಟಕಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ. ಯೋಗದ ಮಹತ್ವ, ಅರ್ಹ ಸಮಾಜ ಸೇವಕರ ಸನ್ಮಾನ, ಸ್ವಚ್ಛತಾ ಅಭಿಯಾನ, ಬೇಟಿ ಬಚಾವೊ ಬೇಟಿ ಪಡಾವೋ, ವಿಶೇಷ ಚೇತನ ಮಕ್ಕಳ ಕಾಳಜಿಯ ಕುರಿತ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಮತ್ತು ಮಣಿಪಾಲ ಆಕಾಶವಾಣಿಯಲ್ಲಿ ಇವರ ಕಥೆ, ಕವನ ಬಿತ್ತರಗೊಂಡಿದೆ. ಸ್ಥಳೀಯ ಟಿವಿ ಚಾನಲ್ ಗಳಲ್ಲಿ ಇವರ ಸಂದರ್ಶನ ಮೂಡಿಬಂದಿದೆ. ಅರ್ಥಶಾಸ್ತ್ರದ ಉಡುಪಿ ಜಿಲ್ಲಾ ಪರೀಕ್ಷಾ ಮಿತ್ರ ಕೈಪಿಡಿಯ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳನ್ನೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಬರೆದು ಪ್ರಕಟಿಸಿರುತ್ತಾರೆ. ಬಹುಮುಖ ವ್ಯಕ್ತಿತ್ವದ ಇವರ ಕಾರ್ಯ ಪ್ರಶಂಸಿಸಿ 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ಶಿಕ್ಷಕ ರತ್ನ’ ಪ್ರಶಸ್ತಿಯನ್ನು ದಿನಾಂಕ 28 ಡಿಸೆಂಬರ್ 2024ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಕೊಡಮಾಡಲಾಗುತ್ತಿದೆ. ಪ್ರಸ್ತುತ ಉಡುಪಿಯಲ್ಲಿ ಪತಿ ಮತ್ತು ಮಗನೊಂದಿಗೆ ನೆಲೆಸಿದ್ದು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಪಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೆ.ವಿ.ನಾರಾಯಣ್ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
    Next Article ಸಾಲಿಗ್ರಾಮದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ’ದ ಉದ್ಘಾಟನೆ
    roovari

    Add Comment Cancel Reply


    Related Posts

    ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ 81ನೆಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 20, 2025

    ಸ್ವರಚಿತ ಬರಹ ಆಹ್ವಾನ | ನವೆಂಬ‌ರ್ 10

    October 20, 2025

    ಚಂದ್ರಶೇಖರ ವೈ. ಶಿಲ್ಪಿ ಇವರಿಗೆ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ | ಡಿಸೆಂಬರ್ 09

    October 20, 2025

    ಮುಲ್ಕಿಯಲ್ಲಿ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ

    October 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.