Subscribe to Updates

    Get the latest creative news from FooBar about art, design and business.

    What's Hot

    ‘ಕರ್ನಾಟಕದ ಶತಾಯುಷಿಗಳು’ ಕೃತಿ ಲೋಕಾರ್ಪಣೆ ಸಮಾರಂಭ | ಜೂನ್ 25

    June 24, 2025

    ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ

    June 24, 2025

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ
    Kannada

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗದಗ : ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ಶಿವಾನುಭವ ಕಾರ್ಯಕ್ರಮವು ದಿನಾಂಕ 16 ಜೂನ್ 2025 ರಂದು ಗದಗದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು “ಸಂಗೀತವು ಮಾನವ ಸಮಾಜದ ಸಂಸ್ಕೃತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ. ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಕವಿ ಪುಟ್ಟರಾಜರು ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ಪುಟ್ಟರಾಜರು ತ್ರಿಭಾಷಾ ಕವಿಗಳಾಗಿದ್ದರು. ಅಂಧ ಅನಾಥ ಮಕ್ಕಳಿಗೆ ಸಂಗೀತ ವಿದ್ಯೆ ನೀಡುವ ಮೂಲಕ ಅವರ ಬಾಳಿಗೆ ದಾರಿದೀಪವಾದರು.
    ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಂಗೀತ ಬೇಕೇ ಬೇಕು. ಸಂಗೀತವಿಲ್ಲದೆ ಪ್ರಾರಂಭವಾಗುವುದೆ ಇಲ್ಲ. ಶರಣರ ವಚನಗಳನ್ನು ಮೊದಮೊದಲು ಹಾಡಲು ಬರುವುದಿಲ್ಲ ಎನ್ನುತ್ತಿದ್ದರು. ಈಗ ಶರಣರ ವಚನಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತವೆ. ಬಸವಣ್ಣನವರು ‘ನಾದ ಪ್ರಿಯ ಶಿವನೆಂಬರು ನಾದಪ್ರಿಯನಲ್ಲ. ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ’ ಎಂದರು. ಮೀರಾಬಾಯಿ ಸಂಗೀತವನ್ನು ಭಕ್ತಿಯಿಂದ ಹಾಡಿದಾಗ ಶಿವನನ್ನು ಕಂಡಳು. ಭೌತ ಪ್ರಪಂಚವನ್ನ ನೋಡುವುದು ವಿಜ್ಞಾನ. ಅಂತರಂಗವನ್ನು ಅರಿಯುವುದು ಆಧ್ಯಾತ್ಮ. ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ. ಸಂಗೀತವನ್ನು ಕಡ್ಡಾಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಬೋಧಿಸಬೇಕು” ಎಂದರು.
    ಉಪನ್ಯಾಸಕರಾಗಿ ಆಗಮಿಸಿದ ಲಕ್ಷ್ಮೇಶ್ವರದ ಚಿಂತಕರು, ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ್ ನವಲೆಯರು ಮಾತನಾಡಿ “ಸಿ. ಎನ್. ಶಾಸ್ತ್ರೀಯವರು 1932ರಲ್ಲಿ ರೇಡಿಯೋದಲ್ಲಿ ಮೊದಲು ವಚನಗಳನ್ನು ಹಾಡಿದರು. ನಂತರ ಮಲ್ಲಿಕಾರ್ಜುನ ಮನ್ಸೂರ್‌ರವರ ‘ಅಕ್ಕಾ ಕೇಳವ್ವ ನಾನೊಂದು ಕನಸು ಕಂಡೆ’ ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ಸಂಗೀತಕ್ಕೆ ಒಲಿಯದ ಮನವಿಲ್ಲ. ಬ್ರಹ್ಮಾಂಡ ಸೃಷ್ಟಿಯಲ್ಲಿ ಓಂಕಾರ ನಾದ ಹೊಮ್ಮಿತು. ಸೃಷ್ಟಿಯಲ್ಲಿನ ಕಲ್ಲು, ಮಣ್ಣು, ಗಿಡ, ಎಲೆ, ಬಳ್ಳಿ, ಗಾಳಿ, ನೀರು, ಹಾರುವ ಹಕ್ಕಿ, ಎಲ್ಲದರಲ್ಲಿಯೂ ಸಂಗೀತವಿದೆ” ಎಂದರು.
    ಸಾಹಿತಿಗಳಾದ ಅಂದಾನಪ್ಪ ವಿಭೂತಿ ಅತಿಥಿಗಳಾಗಿ ಆಗಮಿಸಿದ್ದರು. ಬಸವರಾಜ ಸಿಂಧಗಿಮಠ, ವೈಷ್ಣವಿ ಗೂಳಿ, ಭೀಮಸಿಂಗ ರಾಠೋಡ, ಶ್ರೀಕಾಂತ್ ಚಿಮ್ಮಲ ಮತ್ತು ಭೀಮಪ್ಪ ಹಳ್ಳೇಗೋಳ ಭಾಗವಹಿಸಿ ವಚನಗಳಿಗೆ ನಾದರೂಪ ಕೊಟ್ಟರು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು.
    ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ತೆಹರಿನ್ ಎಸ್. ಖವಾಸ, ವಚನ ಚಿಂತನವನ್ನು ಕುಮಾರಿ ಪ್ರಣವಿ ಬಿ. ಅಣ್ಣಿಗೇರಿ ನೆರವೇರಿಸಿದರು. ದಾಸೋಹ ಸೇವೆಯನ್ನು ವಿಜಯಕುಮಾರ ಶೆಟ್ಟರ ಹಾಗೂ ರಾಜೇಶ್ವರಿ ಶೆಟ್ಟರ್ ಮತ್ತು ಡಾ. ಶಿಲ್ಪಾ ಪ್ರಕಾಶ್ ಕುಷ್ಟಗಿ ಇವರು ವಹಿಸಿದ್ದರು.
    ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ . ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
    ಐ. ಬಿ. ಬೆನಕೊಪ್ಪ ಸ್ವಾಗತಿಸಿ, ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

     

    baikady kannada Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ಶ್ರೀಮತಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ’ ಪುರಸ್ಕಾರ ಪ್ರದಾನ
    Next Article ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ
    roovari

    Add Comment Cancel Reply


    Related Posts

    ‘ಕರ್ನಾಟಕದ ಶತಾಯುಷಿಗಳು’ ಕೃತಿ ಲೋಕಾರ್ಪಣೆ ಸಮಾರಂಭ | ಜೂನ್ 25

    June 24, 2025

    ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ

    June 24, 2025

    ‘ಶ್ರೀಮತಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ’ ಪುರಸ್ಕಾರ ಪ್ರದಾನ

    June 24, 2025

    ಖಿದ್ಮಾ ರಾಜ್ಯಮಟ್ಟದ ಭಾಷಣ ಸ್ಪರ್ಧೆ | ಜೂನ್ 30

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.