Subscribe to Updates

    Get the latest creative news from FooBar about art, design and business.

    What's Hot

    ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ನಾಟ್ಯ ತರಬೇತಿ ಉದ್ಘಾಟನೆ

    July 4, 2025

    ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರೊಂದಿಗೆ ಮಾತುಕತೆ | ಜುಲೈ 05

    July 4, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಫ.ಗು.ಹಳಕಟ್ಟಿಯವರ 145ನೆಯ ಜನ್ಮದಿನೋತ್ಸವ ಆಚರಣೆ

    July 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಶ್ರೀ ವಿನಾಯಕ ಯಕ್ಷಕಲೋತ್ಸವ 2023’ – ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ
    Awards

    ‘ಶ್ರೀ ವಿನಾಯಕ ಯಕ್ಷಕಲೋತ್ಸವ 2023’ – ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

    November 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಲ್ಕಿ : ಮೂಲ್ಕಿ ಬಳಿಯ ಕೆರೆಕಾಡಿನ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಇದರ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2023’ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ದಿನಾಂಕ 11-11-2023ರಂದು ಪದ್ಮಾವತಿ ಲಾನ್ ಎಸ್. ಕೋಡಿಯಲ್ಲಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ವೈ.ಭರತ್‌ ಶೆಟ್ಟಿ ಇವರು ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಂಸ್ಥೆಗಳು ಉತ್ತಮ ಸಾಧನೆ ಮಾಡಿವೆ. ಯಕ್ಷಗಾನ ಕಲೆಗೆ ವಿಶ್ವಮನ್ನಣೆ ಇದ್ದು, ದಾನಿಗಳ ಪ್ರೋತ್ಸಾಹ, ಸಹಕಾರ ನಿರಂತವಾಗಿರಬೇಕು” ಎಂದು ಹೇಳಿದರು.

    ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀ ಶೈಲೇಂದ್ರ ವೈ. ಸುವರ್ಣ, ಮೆಸ್ಕಾಂನ ಸಹಾಯಕ ಎಂಜಿನಿಯ‌ರ್ ಶ್ರೀ ಚಂದ್ರಶೇಖರ ಪೂಜಾರಿ, ಶ್ರೀಮತಿ ಮಾಲತಿ ವಿ.ಅಮೀನ್ ಅವರನ್ನು ಸನ್ಮಾನಿಸಲಾಯಿತು. ಫೌಂಡೇಷನ್ ಅಧ್ಯಕ್ಷ ಜಯಂತ್ ಅಮೀನ್, ನಮೀತಾ ಶ್ಯಾಮ್, ಕೆ.ಭುವನಾಭಿರಾಮ ಉಡುಪ, ಉದ್ಯಮಿಗಳಾದ ಗುರುರಾಜ್‌ ಎಸ್‌.ಪೂಜಾರಿ, ಪ್ರಶಾಂತ್‌ ಪೂಜಾರಿ, ಮಹೇಂದ್ರ, ಧನಂಜಯ ಅಮೀನ್ ಮಟ್ಟು, ಚಿತ್ರಾ ಭಾಸ್ಕರ ಅಮೀನ್, ಸುಪ್ರೀತಾ ಶೆಟ್ಟಿ, ವಾಣಿ, ಅಭಿಜಿತ್ ಕೆರೆಕಾಡು, ಅಜಿತ್ ಕೆರೆಕಾಡು, ಉಷಾ ನರೇಂದ್ರ, ಅರ್ಪಿತಾ ಶೆಟ್ಟಿ ಉಪಸ್ಥಿತರಿದ್ದರು.

    ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಅಜಿತ್ ಕೆರೆಕಾಡು ನಿರ್ದೇಶನದಲ್ಲಿ ಪೂರ್ವರಂಗ, ‘ನಂದ ಮುಕುಂದ’ (ಯಕ್ಷ ಪರಂಪರಾ ವೈಭವ), ಕರುಣಾಳು ರಾಘವ (ಯಕ್ಷ ದೃಶ್ಯ-ಕಾವ್ಯ ವೈಭವ), ಸಂಭವಾಮಿ ಯುಗೇ ಯುಗೇ (ಯಕ್ಷ ನೃತ್ಯ ರೂಪಕ) ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ವಾಸುದೇವಃ ಸರ್ವಂ’ ಯಕ್ಷಗಾನ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ
    Next Article ಪೆರ್ಲದಲ್ಲಿ ಮಕ್ಕಳ ನಾಟಕೋತ್ಸವ ರಂಗಾಭಿನಯ ತರಬೇತಿಗೆ ಚಾಲನೆ
    roovari

    Add Comment Cancel Reply


    Related Posts

    ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ನಾಟ್ಯ ತರಬೇತಿ ಉದ್ಘಾಟನೆ

    July 4, 2025

    ‘ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ’ಗೆ ಡಾ. ಎ. ಡಿ. ಕೊಟ್ನಾಳ ಆಯ್ಕೆ

    July 3, 2025

    ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    July 3, 2025

    ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮದ ಸರ್ವಾಧ್ಯಕ್ಷರಾಗಿ ಡಾ. ಸುಷ್ಮಾ ಶಂಕರ್ ಬೆಂಗಳೂರು ಆಯ್ಕೆ

    July 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.