Subscribe to Updates

    Get the latest creative news from FooBar about art, design and business.

    What's Hot

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025

    ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

    June 16, 2025

    ಮನೆಮನೆ ಕನ್ನಡ ಜಾಗೃತಿ ಅಭಿಯಾನ ಉದ್ಘಾಟನೆ | ಜೂನ್ 22

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿದ್ದ ಸುಧೆ ವಾರ್ಷಿಕ ಪತ್ರಿಕೆ ಲೋಕಾರ್ಪಣೆ
    Literature

    ಸಿದ್ದ ಸುಧೆ ವಾರ್ಷಿಕ ಪತ್ರಿಕೆ ಲೋಕಾರ್ಪಣೆ

    April 12, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಸಿದ್ಧಕಟ್ಟೆಯ ಸರಕಾರಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಸಿದ್ಧ ಸುಧೆ’ಯ ಲೋಕಾರ್ಪಣೆ ಸಮಾರಂಭವು ದಿನಾಂಕ 11-04-2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

    ಕಾಲೇಜಿನ ಪ್ರಾಂಶುಪಾಲ‌ರಾದ ಡಾ. ಅಜೆಕಳ ಗಿರೀಶ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ಸಮಿತಿಯ ಅಧ್ಯಕ್ಷ, ಮಂಗಳೂರು ಕಣಚೂರು ಆಯುರ್ವೇದ ಕಾಲೇಜಿನ ವೈದ್ಯಕೀಯ ಸಲಹೆಗಾರ, ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ “ವಿದ್ಯಾಭ್ಯಾಸದ ಜೊತೆ ಜೊತೆಗೇ ಸಾಹಿತ್ಯ, ಕಲೆ ಮುಂತಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು ಕಲಿಕೆಯ ಅಭಿವೃದ್ಧಿಗೆ ಪೂರಕ. ಬರೆಹಗಳು ರಾಷ್ಟ್ರದ ಉನ್ನತಿಗೆ ಪೂರಕವಾಗಿದ್ದು ಎಷ್ಟೋ ಸಾಧನೆಗಳು ಕೇವಲ ಸಾಹಿತ್ಯದಿಂದ ಆದ ಉದಾಹರಣೆಗಳು ಸಾಕಷ್ಟಿವೆ . ಶಾಲಾ ಪತ್ರಿಕೆ ‘ಸಿದ್ಧಸುಧೆ’ಯೂ  ಆ ನಿಟ್ಟಿನತ್ತ ಅಳಿಲ ಸೇವೆಯೇ ಸರಿ.” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಪ್ರಕಾಶಚಂದ್ರ ಶಿಶಿಲ “ ‘ಜಗದೇಳಿಗೆಯಾಗುವುದು ಕನ್ನಡದಿಂದೇ’ ಕರ್ನಾಟಕ ಎಂಬ ಭೂಮಿಯನ್ನು ಮಥಿಸಿ ಕನ್ನಡವೆಂಬ ನವನೀತವನ್ನು ಪಡೆಯೋಣ ಎಂಬ ಕವಿನುಡಿಯಂತೆ ಸಾಹಿತ್ಯದ ಪಾತ್ರವು ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರವಾಗಿದೆ.” ಎಂದರು.

    ಇದೇ ಸಂದರ್ಭದಲ್ಲಿ  ‘ಸಾಹಿತ್ಯ ಮತ್ತು ರಾಷ್ಠ್ರೀಯತೆ’ ಎಂಬ ವಿಚಾರದಲ್ಲಿ ಶ್ರೀ ಈಶ್ವರಚಂದ್ರ ಅವರಿಂದ ಉಪಾನ್ಯಾಸ ನಡೆಯಿತು. ದಕ್ಷಿಣ ಕನ್ನಡ ಬರಹಗಾರರ ವೇದಿಕೆಯ ಅಧ್ಯಕ್ಷ ಅಭಾಸಾಪ ಸಮಿತಿ ಸದಸ್ಯರೂ ಆದ ಶ್ರೀ ಜಯಾನಂದ ಪೆರಾಜೆ ಮಾತನಾಡಿ “ಸಾಹಿತ್ಯದಿಂದ  ಮಾನಸಿಕ ಬೆಳವಣಿಗೆ ಹಾಗೂ ಸುಸಂಸ್ಕಾರ ಲಭಿಸುತ್ತದೆ.” ಎಂದರು.

    ಪಿಂಗಾರ ಸಾಹಿತ್ಯ ಬಳಗದ ಶ್ರೀ ರೇಮಂಡ್ ಡಿ’ಕೂನ್ಹಾ ತಾಕೊಡೆ, ಕಾಲೇಜಿನ ಅಧ್ಯಾಪಕ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Article‘ಅರಳು 2024’ – ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಾಗಾರ ಉದ್ಘಾಟನೆ
    Next Article ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗದ ದ್ವಿತೀಯ ವರ್ಷದ ಸಂಭ್ರಮ | ಏಪ್ರಿಲ್ 14
    roovari

    Add Comment Cancel Reply


    Related Posts

    ಮನೆಮನೆ ಕನ್ನಡ ಜಾಗೃತಿ ಅಭಿಯಾನ ಉದ್ಘಾಟನೆ | ಜೂನ್ 22

    June 16, 2025

    ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ‘ಮರೆಯಲಾಗದ ಬ್ಯಾರಿ ಮಹನೀಯರು’ ಕೃತಿಗಳ ಲೋಕಾರ್ಪಣೆ | ಜೂನ್ 20

    June 16, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’

    June 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.