Subscribe to Updates

    Get the latest creative news from FooBar about art, design and business.

    What's Hot

    ಕಡಲತಡಿಯ ಮನೆ ‘ಕನಸು’ವಿನಲ್ಲಿ ‘ವರ್ಷ ವೈಭವ’ ಸಾಹಿತ್ಯ ಕಾರ್ಯಕ್ರಮ

    June 28, 2025

    ಅರೆಭಾಷೆ ಕಥೆ, ಅಜ್ಜಿ ಕಥೆ, ಲೇಖನ, ಸಾಹಿತ್ಯ, ಲಲಿತ ಪ್ರಬಂಧ, ಕೃತಿಗಳ ಆಹ್ವಾನ | ಜುಲೈ 31

    June 28, 2025

    ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಉಪನ್ಯಾಸ-1

    June 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗಾನ ಚಕ್ರವರ್ತಿ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವ ಮತ್ತು ‘ನಾದ ವೈಕುಂಠ’ದ ಕಲರವ
    Felicitation

    ಗಾನ ಚಕ್ರವರ್ತಿ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವ ಮತ್ತು ‘ನಾದ ವೈಕುಂಠ’ದ ಕಲರವ

    August 17, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟಕ ಸುಧಾಕರ ಆಚಾರ್ಯರ ಕಲಾರಾಧನೆಯ ಸಂಯೋಜನೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ದಿನಾಂಕ 15 ಆಗಸ್ಟ್ 2024ರಂದು 34ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಯಕ್ಷಗಾನ ತಾಳಮದ್ದಳೆ ‘ವೈಕುಂಠ ದರ್ಶನ’ ಮತ್ತು ‘ನಾದ ವೈಕುಂಠ’ ಕಾರ್ಯಕ್ರಮದಲ್ಲಿ ಗಾನ ಚಕ್ರವರ್ತಿ ಎಂ. ದಿನೇಶ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವವನ್ನು ಸಮರ್ಪಸಲಾಯಿತು.

    ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಅಮ್ಮಣ್ಣಾಯ ಭಾಗವತರ ಸಾರಥ್ಯದಲ್ಲಿ ಮಾನಿಷಾದ ಪ್ರಸಂಗದ ಆಯ್ದ ಭಾಗವಾಗಿ ‘ವೈಕುಂಠ ದರ್ಶನ’ ತಾಳಮದ್ದಳೆಯ ತರುವಾಯ ನಡೆದ ಅಮ್ಮಣಾಯ ಅಭಿನಂದನಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ, ಡಾ. ಸಾಯಿ ಗಣೇಶ್, ಭವ್ಯಶ್ರೀ ಕಿದಿಯೂರು, ಸುಧಾಕರ ಆಚಾರ್ಯ, ಅಮಿತಾ ಆಚಾರ್ಯ, ಆಚಾರ್ಯ ಯಾಸ್ಕ, ಮೇಧಿನಿ ಆಚಾರ್ಯ, ಡಾ. ಅಭಿನ್ ದೇವದಾಸ್ ಶ್ರೀಯಾನ್, ಸುಧಾ ದಿನೇಶ್ ಅಮ್ಮಣ್ಣಾಯ, ಕನಿಷ್ಕ್ ಕಿಶನ್ ಹೆಗ್ಡೆ, ಸಮೃದ್ಧ್ ಸೂರ್ಯ ಪ್ರಕಾಶ್ ಉಪಸ್ಥಿತರಿದ್ದರು.

    ಪ್ರೊ. ಪವನ್ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ ಆರು ತೆಂಕು, ಆರು ಬಡಗು, ಆರು ಮಹಿಳಾ ಭಾಗವತರ ಜೊತೆಗೆ ಏಳು ಚಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಾಕ್ಷಾವತಾರಿಗಳ ಸಾಂಗತ್ಯದಲ್ಲಿ ವೈಕುಂಠದ ‘ಭಾಗವತ ಸಮ್ಮೇಳನ’ದ ಕಲ್ಪನೆಯಲ್ಲಿ ‘ನಾದ ವೈಕುಂಠ’ ಯಕ್ಷಗಾನ ವೈಭವ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಪೂರ್ವರಂಗದ ಸ್ತುತಿ ಪದ್ಯಗಳು, ಅಪರೂಪದ ಶೃಂಗಾರ ಪದ್ಯಗಳು ಹಾಗೂ ಸಾಂಘಿಕ ಪ್ರಸ್ತುತಿಯಲ್ಲಿ ಅಷ್ಟಕಗಳ ನಾವಿನ್ಯ ಪ್ರಯೋಗದೊಂದಿಗೆ ಪ್ರಸ್ತುತಗೊಂಡ ‘ನಾದ ವೈಕುಂಠ’ವು ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ತುಂಬುಗೃಹದ ಪ್ರೇಕ್ಷಕರನ್ನು ಸೆರೆ ಹಿಡಿದಿಟ್ಟುಕೊಳ್ಳುವ ಮೂಲಕ ಯಕ್ಷಲೋಕದಲ್ಲಿ ಐತಿಹಾಸಿಕ ಮೈಲುಗಲ್ಲೆನಿಸಿತು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಶಂಕರ ಶರ್ಮ ಕುಳಮರ್ವರ ‘ಉತ್ತರಕಾಂಡ ಕಾವ್ಯಧಾರ’ ಗ್ರಂಥದ ಲೋಕಾರ್ಪಣಾ ಸಮಾರಂಭ
    Next Article ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶೇಣಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
    roovari

    Comments are closed.

    Related Posts

    ಶಿವರಾಮ ಜೋಗಿ ಮತ್ತು ಗೋಪಾಲ ಭಟ್ ಇವರಿಗೆ ‘ಯಕ್ಷದೇಗುಲ ಪ್ರಶಸ್ತಿ’

    June 28, 2025

    ಪಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷ ಶಿಕ್ಷಣ ಅಭಿಯಾನ

    June 28, 2025

    ಕಾರ್ಕಳ ಕಾರೋಲ್ ಗುಡ್ಡೆ ಕಲ್ಲಗುಪ್ಪೆ ಶಾಲೆಯಲ್ಲಿ ಯಕ್ಷ ಶಿಕ್ಷಣ ಆರಂಭ

    June 28, 2025

    ತೆಕ್ಕಟ್ಟೆಯಲ್ಲಿ ಯಕ್ಷ-ಗಾನ-ನಮನ

    June 27, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.