ಮೈಸೂರು : ಕಲಾ ಸಂವಹನ ಟ್ರಸ್ಟ್ ಇದರ ವತಿಯಿಂದ ಸಿತಾರ್ ಮಾಧುರ್ಯ – ಸಮೂಹ ಸಿತಾರ್ ವಾದನ, ರಾಗ್ ಚಿಕಿತ್ಸಾ – ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವವನ್ನು ದಿನಾಂಕ 31 ಮೇ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮೊದಲು ‘ಸಿತಾರ್ ಮಾಧುರ್ಯ’ ಡಾ. ಮೊಹಸಿನ್ ಖಾನ್ ಮತ್ತು ಶಿಷ್ಯ ವೃಂದದಿಂದ ಸಮೂಹ ಸಿತಾರ್ ವಾದನ ಪ್ರಸ್ತುತಗೊಳ್ಳಲಿದ್ದು, ಉಸ್ತಾದ್ ನಿಸಾರ್ ಅಹ್ಮದ್, ಪಂಡಿತ್ ಚಿನ್ಮಯ್ ನಾಮಣ್ಣವರ್ ಮತ್ತು ಚಾರುದತ್ ಮಹಾರಾಜ್ ಸಹಕರಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಶ್ರೀಧರ್ ಮಾಂಡ್ರೆ ತಬಲಾದಲ್ಲಿ ಹಾಗೂ ಸತೀಶ್ ಕೊಳ್ಳಿ ಇವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.