ಉಡುಪಿ : ವಿಶ್ವಕರ್ಮ ಒಕ್ಕೂಟ (ರಿ.) ಮತ್ತು “ಅತ್ಮೀಯ ಬೋಧಕ” ಮಾಸಪತ್ರಿಕೆ ಕುಂದೂರು ಇವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮುದಾಯದ 25 ವರ್ಷದಿಂದ 45 ವರ್ಷದೊಳಗಿನ ಬರಹಗಾರರಿಗಾಗಿ “ಸಣ್ಣ ಕಥೆ-ಕವನ ಸ್ಪರ್ಧೆ-2025” ಏರ್ಪಡಿಸಿದ್ದು, ವಿಶ್ವಕರ್ಮ ಸಮುದಾಯದ ಬರಹಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ನಿಯಮಗಳು :
ಒಬ್ಬರಿಗೆ ಒಂದು ಕಥೆ ಮತ್ತು ಕವನ ಮಾತ್ರ ಸಲ್ಲಿಸಲು ಅವಕಾಶ, ಕಥೆ ಅಥವಾ ಕವನ ಸ್ವರಚಿತವಾಗಿರತಕ್ಕದ್ದು, ತಮ್ಮ ಸ್ವ ಹಸ್ತಾಕ್ಷರದಲ್ಲೇ ಬರೆದಿರತಕ್ಕದ್ದು (ಗಣಕಯಂತ್ರ / Computer) ದಲ್ಲಿ ಬೆರಳಚ್ಚು ಮಾಡಿದ ಲೇಖನವನ್ನು ಪುರಸ್ಕರಿಸುವುದಿಲ್ಲ, ಕಥೆ ಎ4 ವಿನ್ಯಾಸದ ಹಾಳೆಯಲ್ಲಿ ಮೂರು ಪುಟಕ್ಕೆ ಮೀರಿರಬಾರದು, ಕವನ 1 ಪುಟಕ್ಕೆ ಮೀರಿರಬಾರದು, ಕಥೆ-ಕವನ ಬರೆದ ಹಾಳೆಯಲ್ಲಿ ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸದೆ ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಿರಬೇಕು, ವಯಸ್ಸಿನ ಬಗ್ಗೆ ಆಧಾರ್/ಮತದಾರರ ಗುರುತಿನ ಚೀಟಿ ಅಥವಾ ಸರಕಾರದ ಯಾವುದೇ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು, ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು, ಸ್ಪರ್ಧೆಯ ವಿಜೇತರ ಹೆಸರನ್ನು ಬಹುಮಾನ ವಿತರಣೆಗೆ ನಿಗದಿಪಡಿಸಿದ ಕಾರ್ಯಕ್ರಮದ ದಿನ ಮತ್ತು ಸ್ಥಳದಲ್ಲಿ ಸ್ಪರ್ಧಾಳುಗಳ ಸಮಕ್ಷಮ ಘೋಷಿಸಲಾಗುವುದು ಆ ದಿನ ಎಲ್ಲಾ ಸ್ಪರ್ಧಿಗಳು ಭಾಗವಹಿಸಬೇಕು, ಕಥೆ-ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ-ತಲಾ ರೂ. 2000/-, ದ್ವಿತೀಯ-ತಲಾ ರೂ. 1,500/-ತೃತೀಯ ತಲಾ ರೂ. 1000/- ಮತ್ತು ಸಮಾಧಾನಕರ ತಲಾ ರೂ. 500/- ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ನೀಡಲಾಗುತ್ತದೆ, ಕಥೆ-ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ, ಕಥೆ-ಕವನ ಕಳುಹಿಸಲು ಕೊನೆಯ ದಿನಾಂಕ 30 ಜೂನ್ 2025,
ಕಥೆ-ಕವನ ಕಳುಹಿಸಬೇಕಾದ ಅಂಚೆ ವಿಳಾಸ : ಶ್ರೀ ಮಧು ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಒಕ್ಕೂಟ (ರಿ), ಅಂಬಿಕಾ ಟ್ರಾವೆಲ್ಸ್, ರಾಷ್ಟ್ರೀಯ ಹೆದ್ದಾರಿ 66ರ ಬಳಿ, ಬಪ್ಪನಾಡು ಮುಲ್ಕಿ, ದ.ಕ ಜಿಲ್ಲೆ-574154 | ಮೊ : 9845156555
ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಕೆ. ಮುರಳೀಧರ – 9448348200, 9353763251 ಹಾಗೂ ಸಾಹಿತ್ಯ ಕ್ಷೇತ್ರದ ಪ್ರತಿನಿಧಿಯಾದ ಡಾ. ಪ್ರತಿಮಾ ಜಯಪ್ರಕಾಶ್ – 9845291301 ಇವರನ್ನು ಸಂಪರ್ಕಿಸಬಹುದು.