ಬೆಂಗಳೂರು : ಸಪ್ತಕ್ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಸ್ಮರಣೆ ಸ್ವರಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 28 ಜೂನ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಬಸವನಗುಡಿ, ಶ್ರೀ ಬಿ.ಪಿ. ವಾಡಿಯ ರೋಡಿನಲ್ಲಿರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ನಲ್ಲಿ ಆಯೋಜಿಸಲಾಗಿದೆ.
ಹಿಂದೂಸ್ತಾನಿ ಸಂಗೀತದ ಮಹಾನ್ ಪೋಷಕ ಮತ್ತು ಸಮಾಜ ಸೇವಕ ದಿವಂಗತ ಅನಿಲ್ ಕುಲಕರ್ಣಿ ಇವರ ಸ್ಮರಣೆಯಲ್ಲಿ ಶ್ರಾವ್ಯ ಸುದರ್ಶನ್ ಐಯರ್ ಇವರ ಹಾಡುಗಾರಿಕೆಗೆ ಪೂರ್ಣಿಮಾ ಸಾಮಂತ್ ಇವರು ತಬಲಾ ಹಾಗೂ ಡಾ. ಗಜಾನನ್ ಸಭಾಹಿತ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಉಸ್ತಾದ್ ರಶೀದ್ ಖಾನ್ ಇವರ ಹಿರಿಯ ಶಿಷ್ಯರಿಂದ ಸಂಗೀತ ಗೌರವದಲ್ಲಿ ಪಂಡಿತ್ ಪ್ರಸಾದ್ ಖಾಪರ್ಡೆ ಇವರ ಹಾಡುಗಾರಿಕೆಗೆ ಗುರುಮೂರ್ತಿ ವೈದ್ಯ ಇವರು ತಬಲಾ ಹಾಗೂ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.