Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಅಂಕೋಲಾದ ಹಾಡು ಹಕ್ಕಿ ಸುಕ್ರಿ ಬೊಮ್ಮಗೌಡ
    Article

    ವಿಶೇಷ ಲೇಖನ – ಅಂಕೋಲಾದ ಹಾಡು ಹಕ್ಕಿ ಸುಕ್ರಿ ಬೊಮ್ಮಗೌಡ

    February 13, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪರಿಸರ ಪ್ರೇಮಿ, ಮಧ್ಯಪಾನ ವಿರೋಧಿ ಹೋರಾಟಗಾರ್ತಿ, ಗಾಯಕಿ ಮತ್ತು ‘ಜನಪದ ಕೋಗಿಲೆ’ ಎಂದೇ ಪ್ರಸಿದ್ಧರಾದ ಸುಕ್ರಿ ಬೊಮ್ಮಗೌಡ ಹಾಲಕ್ಕಿ ಜನಾಂಗದವರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬಡಗೇರಿ ಗ್ರಾಮದವರಾದ ಸುಕ್ರಿಯವರು ಸುಕ್ರಜ್ಜಿ ಎಂದೇ ಪ್ರಸಿದ್ಧರು. ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವುದಕ್ಕೆ ಪ್ರಸಿದ್ಧರಾದ ಇವರು, ಸುಮಾರು 5000 ಪದ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ಬರವಣಿಗೆಯ ಪರಿಕರಗಳ ಸಹಾಯವಿಲ್ಲದೆ ಹಾಡುತ್ತಾರೆ. ಇವುಗಳಲ್ಲಿ 100 ವರ್ಷಗಳಿಗಿಂತ ಹಿಂದಿನ ಹಾಡುಗಳೂ ಇವೆ. ‘ಹಾಲಕ್ಕಿ ಪದಗಳ ಕೋಗಿಲೆ’ ಎಂದೇ ಎಲ್ಲರಿಂದ ಕರೆಸಿಕೊಳ್ಳುವ ಇವರು, ಆ ಕ್ಷಣದಲ್ಲಿಯೇ ತಮ್ಮದೇ ಆದ ಶೈಲಿಯಲ್ಲಿ ಜನಪದ ಹಾಡುಗಳನ್ನು ಹಾಡುವ ಪ್ರತಿಭಾವಂತೆ. ಕರ್ನಾಟಕ ಜಾನಪದ ಅಕಾಡೆಮಿ ಸುಕ್ರಜ್ಜಿಯ ಹಾಡುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅಲ್ಲದೆ ಕಾರವಾರದ ‘ಅಖಿಲ ಭಾರತ ರೇಡಿಯೋ’ ಸುಕ್ರಜ್ಜಿಯ ಹಾಡುಗಳನ್ನು ಧ್ವನಿ ಮುದ್ರಣ ಮಾಡಿ ಸಂಗ್ರಹಿಸಿದೆ. 1937 ಜನಿಸಿದ ಸುಕ್ರಿಯವರ ವಿವಾಹ ತನ್ನ ಹದಿನಾರನೇ ವಯಸ್ಸಿನಲ್ಲಿ ಹಿರಿಯ ವಯಸ್ಸಿನ ವರನೊಂದಿಗೆ ನಡೆಯಿತು. ಇವರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡ ನಂತರ ಮತ್ತೊಂದು ಮಗುವನ್ನು ದತ್ತು ಸ್ವೀಕಾರ ಮಾಡಿದರು. ಅತೀವ ಮದ್ಯಪಾನದ ವ್ಯಸನದಿಂದಲೇ ಸುಕ್ರಿಯವರ ಪತಿ ಇಹವನ್ನು ತ್ಯಜಿಸಿದರು. ದತ್ತು ಪುತ್ರನೂ ಮದ್ಯವ್ಯಸನಿಯಾಗಿ ಪರಲೋಕ ಸೇರಿದಾಗ ಅತ್ಯಂತ ನೊಂದುಕೊಂಡ ಸುಕ್ರಿಯವರು ಮತ್ತೆ ದ್ವಿತಿಗಳದೇ 1990ರಲ್ಲಿ ಮಧ್ಯ ವಿರೋಧಿ ಆಂದೋಲನವನ್ನು ಅಂಕೋಲದ ಭಾಗದಲ್ಲಿ ಆರಂಭಿಸಿದರು. ಇದರಿಂದಾಗಿ ಹಳ್ಳಿಯಲ್ಲಿರುವ ಸರಾಯಿ ಅಂಗಡಿಗಳನ್ನು ಮುಚ್ಚಬೇಕಾಗಿ ಬಂದಿತು. ಇದಕ್ಕಾಗಿ ಜನ ಸಂಘಟನೆ ಮಾಡಿದ ಸುಕ್ರಿಯವರು ಹಾಡುಗಳ ಮೂಲಕವೇ ಆರಂಭಿಸಿದ ಹೋರಾಟ ಜನಾಂದೋಲನ ರೂಪ ಪಡೆಯಿತು. ಹೀಗೆ ಸಂಪೂರ್ಣ ಅಲ್ಲದಿದ್ದರೂ ಕೆಲವು ಕುಟುಂಬಗಳನ್ನಾದರೂ ಕುಡಿತದಿಂದ ರಕ್ಷಣೆ ಮಾಡುವುದು ಸುಕ್ರಜ್ಜಿಗೆ ಸಾಧ್ಯವಾಯಿತು. ಮಾತ್ರವಲ್ಲದೆ ಬಡಗೇರಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿದ ಒಬ್ಬ ಧೀಮಂತ ಮಹಿಳೆ ಸುಕ್ರಜ್ಜಿ.
    ಸುಕ್ರಿ ಬೊಮ್ಮಗೌಡ ಇವರ ಜನಪದ ಗಾಯನ ಕಲಾ ಪ್ರತಿಭೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ಜಾನಪದ ಶ್ರೀ ಪ್ರಶಸ್ತಿ, ಸಹ್ಯಾದ್ರಿ ಕನ್ನಡ ಸಂಘದ ಅಡಿಗ ಪ್ರಶಸ್ತಿ, ಮಾಧವ ಪ್ರಶಸ್ತಿ , ನಾಡೋಜ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ.
    ಇವರ ಸಾಧನೆಯನ್ನು ಗುರುತಿಸಿ 2017ರಲ್ಲಿ ಕೇಂದ್ರ ಸರಕಾರ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
    ಬಾಲ್ಯದಲ್ಲಿ ಪರಿಸರದೊಂದಿಗೆ ಬೆರೆತು, ಬೆಳೆದು, ನಿರಕ್ಷರಕುಕ್ಷಿಯಾಗಿದ್ದರೂ, ಹಲವಾರು ಸಮಸ್ಯೆಗಳಿಗೆ ಔಷಧಿ ನೀಡುತ್ತಾ, ಜನಪರ ಕೆಲಸಗಳನ್ನು ಮಾಡುತ್ತಾ ,ಹಾಲಕ್ಕಿ ಜನಾಂಗದ ಜನಪದ ಕೋಗಿಲೆ ಎಂದೇ ಖ್ಯಾತಿ ಪಡೆದ ಅಂಕೋಲಾದ ಹಾಡು ಹಕ್ಕಿ, ಹಾಡು ನಿಲ್ಲಿಸಿ ಮೌನವಾಗಿದೆ. ಅದಮ್ಯ ಚೇತನಕ್ಕೆ ಅಂತಿಮ ನಮನ.

    -ಅಕ್ಷರೀ

    article folk kannada Music
    Share. Facebook Twitter Pinterest LinkedIn Tumblr WhatsApp Email
    Previous Articleನಾಟ್ಯಾಂಜಲಿಯ ನಲ್ವತ್ತರ ನಲಿವಿನಲಿ ‘ಚಾರುವಸಂತ’
    Next Article ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವರಿಗೆ ‘ಸೌಹಾರ್ದ ಸಿರಿ’ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರ ಹಾಡಿ ವಿಶ್ವದಾಖಲೆ ನಿರ್ಮಿಸಿದ ಯಶವಂತ್ ಎಂ.ಜಿ.

    June 5, 2025

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 128’ | ಜೂನ್ 07

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.