ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ 1945 ಜೂನ್ 26ರಂದು ಜನಿಸಿದ ಜಯಶ್ರೀ ಗುತ್ತಲ ಜನಪದ ಕ್ಷೇತ್ರದ ಗಾಯಕಿ – ಸಾಧಕಿ. ತಂದೆ ತಿರುಮಲ ದೇಶಪಾಂಡೆ ತಾಯಿ ಲಕ್ಷ್ಮೀ ಬಾಯಿ. ಹವ್ಯಾಸಿ ನಾಟಕ ಕಲಾವಿದರಾದ ತಂದೆ ವಾಸುದೇವ ವಿನೋದಿನಿ ನಾಟ್ಯ ಮಂಡಳಿಯ ಸ್ಥಾಪಕ ಸದಸ್ಯರು. ತಾಯಿ ಸಂಗೀತ ಕಲಾವಿದೆ. ಹಾಗಾಗಿ ಜಯಶ್ರೀ ಅವರು ಬಾಲ್ಯದಲ್ಲಿಯೇ ಕಲೆಯ ಬಗ್ಗೆ ವಿಶೇಷ ಮಮತೆಯನ್ನು ಬೆಳೆಸಿಕೊಂಡರು.
ಸಂಗೀತದತ್ತ ವಿಶೇಷ ಪ್ರೀತಿಯನ್ನು ಹೊಂದಿದ್ದ ಜಯಶ್ರೀ ಅವರು ಪಂಡಿತ ಭೀಮಸೇನ್ ಜೋಶಿಯವರ ತಕ್ಕಂದಿರಾದ ಶಾಮಾಚಾರಿ ಜೋಶಿಯವರಲ್ಲಿ ಹಿಂದುಸ್ತಾನಿ ಸಂಗೀತವನ್ನು ಕಲಿತರು ಮುಂದೆ ಜಿ. ಆರ್. ನಿಂಬರಗಿ ಇವರಲ್ಲಿ ಸಂಗೀತ ಕಲಿಕೆ ಮುಂದುವರಿಸಿದರು.
ಆಕಾಶವಾಣಿ ದೂರದರ್ಶನಗಳಲ್ಲಿ ಜೆ. ಸಿ. ಗುತ್ತಲ ಇವರ ಗಾಯನ, ಆಶುಭಾಷಣ, ಸಂದರ್ಶನಗಳು ಪ್ರಸಾರವಾಗಿದ್ದಲ್ಲದೆ ಹಲವೆಡೆ ಅವರ ಕಾರ್ಯಕ್ರಮಗಳು ನಡೆದವು. ಜಾನಪದ ಸಂಗೀತದ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ಅಂತೆಯೇ ಹರಿದಾಸ ಸಾಹಿತ್ಯ ಸುಧೆ, ಹರಿದಾಸರ ಅಪೂರ್ವ ಕೀರ್ತನೆಗಳ ಸಂಗ್ರಹ, ಜನಪದ ಗೀತೆಗುಚ್ಛ ಮುಂತಾದ ಕೃತಿಗಳೂ ಪ್ರಕಟಗೊಂಡವು. ‘ಗೊರೂರು ಸಾಹಿತ್ಯ ಪ್ರಶಸ್ತಿ’, ‘ಅತ್ತಿಮಬ್ಬೆ ರನ್ನ ಸಾಹಿತ್ಯ ಪ್ರಶಸ್ತಿ’, ಬೈಲಹೊಂಗಲ ಯುವಕ ಸಂಘದಿಂದ ‘ಪ್ರವೀಣ ಪ್ರಶಸ್ತಿ’ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ.
ಶ್ರೀಮತಿ ಮಾಧರಿ ಶ್ರೀರಾಮ್
ಅಧ್ಯಾಪಕಿ, ಮಂಗಳೂರು