Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಅಭಿನಯ ಭಾರತೀಯ 45ನೇ ವಾರ್ಷಿಕೋತ್ಸವ | ಸೆಪ್ಟೆಂಬರ್ 05

    September 1, 2025

    ‘ಡಿಜಿಟಲ್ ಲೋಕೊಡು ತುಳು’ ಒಂದು ದಿನದ ಬರವಣಿಗೆ ಕಮ್ಮಟ

    September 1, 2025

    ಕ.ಸಾ.ಪ. ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಡಾ. ಶಿವಶರಣ ಗೋಡ್ರಾಳ ನಾಮ ನಿರ್ದೇಶನ

    September 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂವೇದನಾಶೀಲ ಕಾದಂಬರಿಗಾರ್ತಿ ಗಂಗಾ ಪಾದೇಕಲ್
    Birthday

    ಸಂವೇದನಾಶೀಲ ಕಾದಂಬರಿಗಾರ್ತಿ ಗಂಗಾ ಪಾದೇಕಲ್

    September 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಿನಾಂಕ 01 ಸೆಪ್ಟೆಂಬರ್ 1948ರಂದು ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ ಇವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ ಚಿನ್ನ, ಬೆಳ್ಳಿ ವ್ಯಾಪಾರಸ್ಥರು, ತಾಯಿ ಸರಸ್ವತಿ. ಇವರ ಅಜ್ಜಿ ಮೂಕಾಂಬಿಕಾ ಹಾಡುಗಳನ್ನು ರಚಿಸುತ್ತಿದ್ದರು. ಅವುಗಳನ್ನು ಬರಹ ರೂಪಕ್ಕೆ ತಂದವರು ತಂದೆ ಕೇಶವ ಭಟ್, ಆ ರಚನೆಗಳನ್ನು ತಾಯಿ ರಾಗಬದ್ಧವಾಗಿ ಹಾಡುತ್ತಿದ್ದರು. ಹೀಗೆ ಒಂದು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಗಂಗಾ ಪಾದೇಕಲ್ ಬಾಲ್ಯದಿಂದಲೇ ಹಲವು ಪತ್ರಿಕೆಗಳನ್ನೂ ಓದುತ್ತಿದ್ದರು. ಬಾಳ ಹಾದಿಯಲ್ಲಿ ಕಂಡ ನೋವುಗಳಿಗೆ ಅಕ್ಷರ ರೂಪವನ್ನು ಕೊಟ್ಟು, ಜನರ ಮನಕ್ಕೆ, ಹೃದಯಕ್ಕೆ ತಟ್ಟುವಂತಹ ಕಥೆ-ಕಾದಂಬರಿಗಳನ್ನು ಬರೆಯುವಲ್ಲಿ ಬಾಲ್ಯದ ಅವರ ಆಸಕ್ತಿಗಳು ಸಹಾಯಕವಾಗಿದ್ದವು.

    ಕುಟುಂಬದ ಪರಮಾಪ್ತರನ್ನು ಕಳೆದುಕೊಂಡಾಗ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾದದ್ದು ಸಾಹಿತ್ಯ, ಓದು, ಬರಹ. ಗಂಗಾ ಪಾದೇಕಲ್ ಅವರ ಸ್ನೇಹ ಸಖಿಯರೊಂದಿಗೆ ಮಂಗಳೂರಿನಲ್ಲಿ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’ವನ್ನು ಕಟ್ಟಿದರು. ಅವರ ‘ಹೊಸ ಹೆಜ್ಜೆ’ ಕಥಾಸಂಕಲನವು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ‘ಪುಲಪೇಡಿ’ ಕಥೆಯು ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ರಂಗ ನಾಟಕ ಹಾಗೂ ಚಲನಚಿತ್ರಕ್ಕೂ ಆಯ್ಕೆಯಾಗಿದೆ. ‘ಇನ್ನೊಂದು ಅಧ್ಯಾಯ’ ಹಾಗೂ ‘ಸೆರೆಯಿಂದ ಹೊರಗೆ’ ಇವರ ಪ್ರಮುಖ ಕೃತಿಗಳು. ‘ಹೊನ್ನಳ್ಳಿಯಲ್ಲೊಮ್ಮೆ’, ‘ಪಯಣದ ಹಾದಿಯಲ್ಲಿ’, ‘ಮೌನರಾಗಗಳು’ ಹೀಗೆ ಹಲವು ಕಾದಂಬರಿಗಳು ಜನಪ್ರಿಯವಾಗಿವೆ.

    ‘ಆಯ್ದ ಕಥೆಗಳು’, ‘ಪ್ರತಿಬಿಂಬ’, ‘ಮುಳಿಯ ಮೂಕಾಂಬಿಕಾ’, ‘ಏರ್ಯ ಚಂದ್ರಭಾಗಿ ರೈ’ ಮುಂತಾದವು ಗಂಗಾ ಪಾದೇಕಲ್ ಸಂಪಾದಿತ ಕೃತಿಗಳು. ‘ರಾಜ್ಯೋತ್ಸವ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ‘ವನಿತ ಕಾದಂಬರಿ ಸ್ಪರ್ಧೆ’ಯಲ್ಲಿ ದ್ವಿತೀಯ ಬಹುಮಾನ, ‘ಅಕ್ಷಯ’, ‘ತುಷಾರ’ ಮಾಸಿಕಗಳಲ್ಲಿ ಬಹುಮಾನಗಳು, ‘ಪುಲಪೇಡಿ’ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ. ಹೀಗೆ ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾದ ಗಂಗಾ ಪಾದೇಕಲ್ ಕನ್ನಡ ಸಾಹಿತ್ಯದ ಅಪೂರ್ವ ಲೇಖಕಿ.

    – ಶ್ರೀಮತಿ ಮಾಧುರಿ ಶ್ರೀರಾಮ್
    ಅಧ್ಯಾಪಕಿ, ಮಂಗಳೂರು

    baikady Birthday Literature roovari specialarticle
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ಮಹೋತ್ಸವ
    Next Article ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಸಾಹಿತಿ ಮನೆಗೆ ಭೇಟಿ ಕಾರ್ಯಕ್ರಮ
    roovari

    Add Comment Cancel Reply


    Related Posts

    ಧಾರವಾಡದ ಅಭಿನಯ ಭಾರತೀಯ 45ನೇ ವಾರ್ಷಿಕೋತ್ಸವ | ಸೆಪ್ಟೆಂಬರ್ 05

    September 1, 2025

    ‘ಡಿಜಿಟಲ್ ಲೋಕೊಡು ತುಳು’ ಒಂದು ದಿನದ ಬರವಣಿಗೆ ಕಮ್ಮಟ

    September 1, 2025

    ಕ.ಸಾ.ಪ. ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಡಾ. ಶಿವಶರಣ ಗೋಡ್ರಾಳ ನಾಮ ನಿರ್ದೇಶನ

    September 1, 2025

    ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಗಗನ್ ಜಿ. ಗಾಂವ್ಕರ್

    September 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.