Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖ ವಕ್ತಾರ – ಎಂ. ಎನ್. ವ್ಯಾಸರಾವ್
    Article

    ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖ ವಕ್ತಾರ – ಎಂ. ಎನ್. ವ್ಯಾಸರಾವ್

    January 27, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾದಂಬರಿಕಾರ, ಕಥೆಗಾರ, ಕವಿ, ಗೀತಾ ರಚನೆಗಾರ ಎಂ. ಎನ್. ವ್ಯಾಸರಾವ್ ಒಬ್ಬ ಅದ್ಭುತ ಸಾಹಿತಿ. ಮೈಸೂರಿನಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ, ಬಿ. ಎ. ಪದವಿ ಮತ್ತು ಡ್ರಾಮ್ಯಾಟಿಕ್ ನಲ್ಲಿ ಡಿಪ್ಲೋಮಾವನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದ ನಂತರ ಅಧ್ಯಯನ, ಸಾಹಿತ್ಯ ರಚನೆ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನೂರಾರು ಚಲನಚಿತ್ರಗಳಿಗೆ ಗೀತ ರಚನೆ ಮಾಡಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯದ ‘ಆಸ್ಪೋಟ’, ‘ದಂಗೆ ಎದ್ದ ಮಕ್ಕಳು’, ‘ಮೈಸೂರು ಮಲ್ಲಿಗೆ, ‘ವಾತ್ಸಲ್ಯ ಪಥ’ ಇತ್ಯಾದಿ ಚಲನಚಿತ್ರಗಳಾಗಿ ತೆರೆಯ ಮೇಲೆ ಪ್ರದರ್ಶನಗೊಂಡಿವೆ. ಅಹಂ ಇಲ್ಲದೆ ಬಾಗುವ, ಬೀಗದ, ಸರಳತೆ ಇವರಲ್ಲಿತ್ತು. ಸಾಹಿತ್ಯ ರಚನೆಗೆ ಮುಂದಾಗುವ ಎಳಸುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವಂತೆ ಮಾಡಿದ್ದಾರೆ. ಶುಭ ಮಂಗಳ ಚಿತ್ರದ ‘ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು’ ಹಾಡಿನಿಂದ ಜನಮನಸೆಳೆದ ಇವರು ಮುಂದೆ ‘ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶ್ರುತಿ’, ‘ಚಂದ ಚಂದ ಸಂಗಾತಿ ನೋಟವೇ ಚೆಂದ’, ‘ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ’ ಇತ್ಯಾದಿ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವ ಗೀತೆಗಳನ್ನು ರಚಿಸಿದ್ದಾರೆ. ಸುಮಾರು 35 ಕ್ಕೂ ಹೆಚ್ಚು ಧಾರಾವಾಹಿಗಳಿಗೂ ಸಾಹಿತ್ಯ ರಚನೆ ಮಾಡಿದ ಜ್ಞಾನ ಶ್ರೀಮಂತ ಇವರು.
    ಇವರೊಬ್ಬ ಸೃಜನಶೀಲ ಸಾಹಿತಿ. ಇವರ ಮೊದಲ ಕಥಾ ಸಂಕಲನ ‘ಬೆಳ್ಳಿ ಮೂಡುವ ಮುನ್ನ’. ನಂತರದ ಸಂಕಲನ ‘ಮಳೆಯಲ್ಲಿ ನೆನೆದ ಮರಗಳು’. ‘ಇರಲಿ ನಿನ್ನ ಪ್ರೀತಿ’ ಕವನ ಸಂಕಲನ, ‘ಉತ್ತರಮುಖಿ’ ಎಂಬುದು ಇವರ ನೀಳ್ಗವಿತೆಗಳ ಸಂಕಲನ. ‘ಸ್ಕಾರ್ಟ್ ಡಬಲ್ ಎಕ್ಸ್’, ‘ಅಖಿಲ ಮೈ ಡಾರ್ಲಿಂಗ್’ ಇತ್ಯಾದಿ ಇವರ ಪತ್ತೆದಾರಿ ಕಾದಂಬರಿಗಳು. ‘ನಿರೋಷ’, ‘ನದಿ ಮೂಲ’ ಮೊದಲಾದ ಸೃಜನಶೀಲ ಕಾದಂಬರಿಗಳು ಇವರಿಂದ ಬರೆಯಲ್ಪಟ್ಟಿವೆ. ‘ಕತ್ತಲಲ್ಲಿ ಬಂದವರು’ ಇವರು ರಚಿಸಿದ ನಾಟಕ. ಮೋಸಪನ ಕಥೆಗಳು ಇವರಿಂದ ಅನುವಾದಗೊಂಡ ಕಥಾ ಸಂಕಲನ. ಇವರ ಹಲವಾರು ಕಥೆಗಳು ತೆಲುಗು, ಹಿಂದಿ, ಬಂಗಾಳಿ, ಇಂಗ್ಲಿಷ್ ಇತ್ಯಾದಿ ಭಾಷೆಗಳಿಗೆ ಭಾಷಾಂತರಗೊಂಡಿವೆ. ಹಾಗೆಯೇ ಚೀನಿ, ಇಂಗ್ಲಿಷ್, ಫ್ರೆಂಚ್, ಉರ್ದು ಮುಂತಾದ ಭಾಷೆಗಳ ಕಥೆಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೀಗೆ ಎಂ. ಎನ್. ವ್ಯಾಸರಾಯರು ಒಬ್ಬ ಅದ್ಭುತ ಸಾಹಿತಿ.
    ಪ್ರಸಿದ್ಧ ಸಾಹಿತಿಗಳ ಸಂದರ್ಶನ ಲೇಖನಗಳನ್ನು ಪ್ರಕಟಿಸಿದ ಮತ್ತು ಕೆ. ಎಸ್. ಅಶ್ವಥ್ ಇವರ ಆತ್ಮ ಕಥನವನ್ನು ‘ಸುಧಾ ಪತ್ರಿಕೆ’ಯಲ್ಲಿ ನಿರೂಪಿಸುವುದರೊಂದಿಗೆ ಹಲವಾರು ವಿಚಾರ ಸಂಕಿರಣ ಮತ್ತು ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿದ ಅನುಭವಿ.
    ಇವರ ‘ಮಳೆಯಲಿ ನೆನೆದ ಮರಗಳು’ ಕಥಾ ಸಂಕಲನಕ್ಕೆ ‘ಸಾಹಿತ್ಯ ಅಕಾಡೆಮಿ ಬಹುಮಾನ’ ಹಾಗೂ ‘ಬರ್ಕಲೀ ತರಂಗಿಣಿ’ ಪ್ರಶಸ್ತಿ, ‘ಲಾವಣ್ಯ ಪ್ರಶಸ್ತಿ’, ‘ಜೇ. ಸೀ. ಪ್ರಶಸ್ತಿ’, ‘ಸ್ವರ ಮಂದಾರ ಪ್ರಶಸ್ತಿ’ ಮತ್ತು ‘ಆರ್ಯಭಟ ಪ್ರಶಸ್ತಿ’ ಇವು ಇವರ ಸಾಹಿತ್ಯ ಸಾಧನೆಗೆ ದೊರೆತ ಗೌರವಗಳು.
    ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುವವರನ್ನು ಪ್ರೀತಿ ಗೌರವದಿಂದ ಕಂಡು ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಮತ್ತು ಎಡವುತ್ತಾ ಸಣ್ಣಪುಟ್ಟ ಸಾಹಿತ್ಯ ರಚನೆ ಮಾಡಿದವರ ಕೆಲಸವನ್ನು ಮೆಚ್ಚಿ ಸಂಭ್ರಮಿಸಿ ಮುಂದೆ ಹೆಜ್ಜೆ ಇಡಲು ಸ್ಪೂರ್ತಿ ನೀಡುವುದು ಎಂ. ಎನ್ ವ್ಯಾಸರಾವ್ ಇವರ ಹೃದಯ ಶ್ರೀಮಂತಿಕೆಗೆ ಸಾಕ್ಷಿ. ಇಂತಹ ಒಬ್ಬ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖ ಹರಿಕಾರ 15 ಜನವರಿ 2018ರಲ್ಲಿ ಸಾಹಿತ್ಯ ಲೋಕದಿಂದ ಕಣ್ಮರೆಯಾದರು.
    ದಿವ್ಯ ಚೇತನಕ್ಕೆ ಅನಂತ ನಮನ.

    – ಅಕ್ಷರೀ 

     

    article Birthday kannada Literature
    Share. Facebook Twitter Pinterest LinkedIn Tumblr WhatsApp Email
    Previous Articleನಾಪೋಕ್ಲುವಿನ ಎಕ್ಸೆಲ್ ಶಾಲೆಯಲ್ಲಿ ದತ್ತಿನಿಧಿ ಉಪನ್ಯಾಸ
    Next Article ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ಮನೆಯ ಅಂಗಳದಲ್ಲಿ ‘ನೆನಪು’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.