Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    June 26, 2025

    ಅಂಬುರುಹ ಯಕ್ಷ ಕಲಾ ಕೇಂದ್ರ (ರಿ.) ಇದರ ಸಪ್ತಮ ಸಂಭ್ರಮ | ಜೂನ್ 28 ಮತ್ತು 29

    June 26, 2025

    ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿ ಉದ್ಪಾಟನೆ

    June 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಛಂದೋಬದ್ಧ ಕವಿತೆಗಳ ಕರ್ತೃ ವಿ. ಬಿ. ಮೊಳೆಯಾರ
    Article

    ವಿಶೇಷ ಲೇಖನ – ಛಂದೋಬದ್ಧ ಕವಿತೆಗಳ ಕರ್ತೃ ವಿ. ಬಿ. ಮೊಳೆಯಾರ

    June 26, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪ್ರೊ. ವೆಂಕಟರಮಣ ಭಟ್ ಸಾಹಿತ್ಯ ಲೋಕದಲ್ಲಿ ವಿ. ಬಿ. ಮೊಳೆಯಾರ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರು ಮನೆತನದಲ್ಲಿ 1936ರ ಜೂನ್ 26ರಂದು ಜನಿಸಿದ ಇವರ ತಂದೆ ಶಂಕರನಾರಾಯಣ ಭಟ್ಟ ಹಾಗೂ ತಾಯಿ ಪರಮೇಶ್ವರಿ. ಸಂಸ್ಕೃತ ಹಾಗೂ ಕನ್ನಡ ಭಾಷಾ ವಿದ್ವಾಂಸರಾದ ತಂದೆ ಶಂಕರನಾರಾಯಣ ಭಟ್ಟರಿಂದ ಪ್ರಭಾವಿತರಾಗಿ ಬೆಳೆದ ಮೊಳೆಯಾರ ಅವರು ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದರು. ಛಂದೋಬದ್ಧವಾದ ಕವಿತೆಗಳನ್ನು ರಚಿಸಿದ್ದರು.
    ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿ ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ. ಎ. ಆನರ್ಸ್ ಮತ್ತು ಎಂ. ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಮದರಾಸಿನಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಕಾವ್ಯ ಬರಹ, ಚಿಂತನ ಬರಹಗಳು, ನಗೆ ಬರಹಗಳು, ನಾಟಕ ರಚನೆ, ವ್ಯಕ್ತಿ ಚಿತ್ರ ರಚನೆಗಳು ಹೀಗೆ ಸಾಹಿತ್ಯ ಕೃಷಿ ಮಾಡಿರುವ ವಿ. ಬಿ. ಮೊಳೆಯಾರರದ್ದು ಚಟುವಟಿಕೆಯಿಂದ ಸದಾ ಕಾರ್ಯ ಪ್ರವೃತ್ತಗಾಗಿದ್ದ ವ್ಯಕ್ತಿತ್ವ. ‘ಪುಸ್ತಕ ಪ್ರಕಾಶನದ ಗೌರವ ಪ್ರಶಸ್ತಿ’, ‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸೇರಿದಂತೆ ಹಲವಾರು ಗೌರವ ಸಮ್ಮಾನಗಳಿಗೆ ವಿ. ಬಿ. ಮೊಳೆಯಾರ ಭಾಜನರಾಗಿದ್ದಾರೆ.

       ಶ್ರೀಮತಿ ಮಾಧರಿ ಶ್ರೀರಾಮ್
    ಅಧ್ಯಾಪಕಿ, ಮಂಗಳೂರು

    article baikady Birthday kannada roovari specialarticle
    Share. Facebook Twitter Pinterest LinkedIn Tumblr WhatsApp Email
    Previous Articleಲೋಕಾರ್ಪಣೆಗೊಂಡ “ನದಿ ತಟದ ವೃಕ್ಷ” ಕವನ ಸಂಕಲನ
    Next Article ವಿಶೇಷ ಲೇಖನ – ಜನಪದ ಗೀತೆಗಳು ವಿಶಿಷ್ಟ ಗಾಯಕಿ ಜಯಶ್ರೀ ಗುತ್ತಲ
    roovari

    Add Comment Cancel Reply


    Related Posts

    ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    June 26, 2025

    ಅಂಬುರುಹ ಯಕ್ಷ ಕಲಾ ಕೇಂದ್ರ (ರಿ.) ಇದರ ಸಪ್ತಮ ಸಂಭ್ರಮ | ಜೂನ್ 28 ಮತ್ತು 29

    June 26, 2025

    ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿ ಉದ್ಪಾಟನೆ

    June 26, 2025

    ಕುಪ್ಪಳ್ಳಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ‘ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.