Subscribe to Updates

    Get the latest creative news from FooBar about art, design and business.

    What's Hot

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    ಕ.ಸಾ.ಪ.ದ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಮತ್ತು ದತ್ತಿ ಪುರಸ್ಕಾರ

    June 3, 2025

    ಸಾಗರ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ | ಜೂನ್ 09

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಾ.ಮಂ. ಕೃಷ್ಣರಾಯರಿಗೆ ಕ.ಸಾ.ಪ.ದಿಂದ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ
    Awards

    ಶಾ.ಮಂ. ಕೃಷ್ಣರಾಯರಿಗೆ ಕ.ಸಾ.ಪ.ದಿಂದ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ

    February 16, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾ.ಮಂ. ಕೃಷ್ಣರಾಯರಿಗೆ ದಿ. ಟಿ. ಶ್ರೀನಿವಾಸ್ ಸ್ಮರಣಾರ್ಥ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-02-2024ರಂದು ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಮಹೇಶ ಜೋಶಿಯವರು “ಶಾ.ಮಂ. ಕೃಷ್ಣರಾವ್ ಅವರು ಗೋವಾ ಮತ್ತು ಕರ್ನಾಟಕದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತ: ತಾವು ಬರೆಯುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಬೆಳೆಸಿದ್ದಾರೆ ಎಂದು ವಿಶ್ಲೇಷಿಸಿದರು.

    ಗೋವಾದಲ್ಲಿ ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಅಲ್ಲಿದ್ದ ನಿರುದ್ವಿಗ್ನ ವಾತಾವರಣವನ್ನು ನೆನಪು ಮಾಡಿಕೊಂಡ ನಾಡೋಜ ಡಾ. ಮಹೇಶ ಜೋಶಿಯವರು ಅಂತಹ ಕಡೆ ಕನ್ನಡವನ್ನು ಕಟ್ಟಿ ಶಾ.ಮಂ. ಕೃಷ್ಣರಾಯರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಗೋವಾದಲ್ಲಿ ಅವರು ಕನ್ನಡ ಶಾಲೆಗಳನ್ನು ಕಟ್ಟಿದರು, ಸೈಕಲ್ಲಿನಲ್ಲಿ ಮನೆ ಮನೆಗೆ ಹೋಗಿ ಕನ್ನಡ ಪತ್ರಿಕೆಗಳನ್ನು ತಲುಪಿಸಿ ವಾಚನಾಭಿರುಚಿ ಬೆಳೆಸಿದರು. ‘ಗೋವಾ ಕನ್ನಡ ಸಂಘ’, ‘ಗೋಮಾಂತ ಭಾರತಿ’, ‘ಕರ್ನಾಟಕ ಸಂಘ’ಗಳನ್ನು ಕಟ್ಟಿ ಕನ್ನಡಿಗರನ್ನು ಸಂಘಟಿಸಿದರು. ಒಮ್ಮೆ ಗೌರೀಶ ಕಾಯ್ಕಿಣಿಯವರು ಗೋವಾಗೆ ಬಂದಾಗ ಕೃಷ್ಣರಾಯರು ಒಂದು ಸೇತುವೆ ತೋರಿಸಿ ‘ಇದು ಶಿಥಿಲಾವಸ್ಥೆಯಲ್ಲಿದೆ, ಇದು ಕುಸಿದರೆ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕ ಕಡಿದು ಹೋಗುತ್ತದೆ’ ಎಂದು ಹೇಳಿದಾಗ ತಕ್ಷಣ ಗೌರೀಶರು ‘ನೀನಿದ್ದೀಯಲ್ಲ’ ಎಂದು ಹೇಳಿದ್ದ ಘಟನೆಯನ್ನು ನೆನಪು ಮಾಡಿಕೊಂಡು ಈ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಕೃಷ್ಣರಾಯರು ನಲವತ್ತು ವರ್ಷಗಳ ಕಾಲ ಕರ್ನಾಟಕ ಮತ್ತು ಗೋವೆಯ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದರು. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿ, ಛಲಬಿಡದೆ ಕೈಯಿಂದಲೇ ಹಣ ತೆತ್ತು ಕನ್ನಡ ಕಾರ್ಯಕ್ರಮಗಳನ್ನು ನಡೆಸಿ ಕನ್ನಡವನ್ನು ಪಸರಿಸುವ ಕೈಂಕರ್ಯವನ್ನು ಕೈಗೊಂಡರು. ಸಾಹಿತಿಗಳು, ಸಂಗೀತಗಾರರನ್ನು ಕರೆಸಿ ಕನ್ನಡದ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಶಾ.ಮಂ. ಕೃಷ್ಣರಾಯರು ಕನ್ನಡ ಪ್ರಚಾರಕ್ಕಾಗಿ ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದರ ಜೊತೆಗೆ ಕನ್ನಡ ಓದುವುದರ ಬಗ್ಗೆಯೂ ಆಸ್ಥೆ ಬೆಳೆಯುವಂತೆ ಮಾಡಲು ಪುಸ್ತಕಗಳ ಪ್ರಕಟಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ನಾಟಕಾಭಿನಯಕ್ಕೂ ಒತ್ತು ಕೊಟ್ಟು ತಾವೇ ನಾಟಕಗಳನ್ನು ರಚಿಸಿ ರಂಗದ ಮೇಲೆ ಪ್ರದರ್ಶಿಸಿದರು. ಇವೆಲ್ಲವನ್ನೂ ನಾನು ಗೋವಾದಲ್ಲಿದ್ದಾಗ ಕಣ್ಣಾರೆ ಕಂಡಿದ್ದೇನೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಶಾ.ಮಂ. ಕೃಷ್ಣರಾಯರ ಕೊಡುಗೆಗಳನ್ನು ಸ್ಮರಿಸಿಕೊಂಡರು.

    ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಡಾ.ಈಶ್ವರ ದೈತೋಟ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಇಂದು ಅಂತರಂಗ ಮತ್ತು ಬಹಿರಂಗಗಳೆರಡಲ್ಲಿಯೂ ಬಹಳ ಸುಂದರವಾಗಿದೆ ಎಂದು ಹೇಳಿ ಇದಕ್ಕೆ ಕಾರಣರಾದ ನಾಡೋಜ ಡಾ.ಮಹೇಶ ಜೋಶಿಯವರನ್ನು ಅಭಿನಂದಿಸಿದರು. ಶಾ.ಮಂ.ಕೃಷ್ಣರಾಯರ ಕೊಡುಗೆಗಳನ್ನು ವಿವರಿಸಿದ ಅವರು ಕೃಷ್ಣರಾಯರು ಸಂಪಾದಕರಾಗಿ ಪುಸ್ತಕ ಪ್ರಕಟಸಿದಾಗ ಆದದ್ದು ನಷ್ಟವೇ. ಆದರೂ ಧೃತಿಗೆಡದೆ ಅ.ನ.ಕೃ., ತ.ರಾ.ಸು., ಬೀಚಿ ಮೊದಲಾದವರ ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದರು. ಕೃಷ್ಣರಾಯರು ಹಲವಾರು ಗ್ರಂಥಗಳನ್ನು ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿ ಕೊಂಕಣಿ ಕನ್ನಡಿಗರ ಸ್ನೇಹಸೇತುವೂ ಆದರು. ‘ಯುಗ ಪ್ರವರ್ತಕ ಜೀವೊತ್ತಮತೀರ್ಥರು’ ಕೃತಿಯನ್ನು ಮರಾಠಿಯಿಂದ ಅನುವಾದಿಸಿದರು. ಬೆಂಗಳೂರಿಗೆ ಬಂದು ನೆಲೆಸಿದಾಗ ನೂತನ ವಾರಪತ್ರಿಕೆಯ ಸಂಪಾದಕರ ಜವಾಬ್ದಾರಿಯನ್ನು ಕೆಲಕಾಲ ನಿರ್ವಹಿಸಿದರು ಆಗ ತಾನೂ ಅವರ ಸಹೋದ್ಯೋಗಿಯಾಗಿದ್ದೆ ಎಂದು ನೆನಪು ಮಾಡಿಕೊಂಡರು. ದತ್ತಿ ಸ್ಥಾಪಿಸಿರುವ ಡಾ. ವರದಾ ಶ್ರೀನಿವಾಸರನ್ನು ಅವರು ಪ್ರಶಂಸಿಸಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾ.ಮಂ.ಕೃಷ್ಣರಾಯರು ‘ಪ್ರಶಸ್ತಿ’ ಎಂದರೆ ಆತಂಕ ಪಡುವ ಕಾಲ ಇದು. ನಾನು ಸರ್ಕಾರಿ ಪ್ರಶಸ್ತಿಗಳಿಂದ ಸದಾ ದೂರವೇ ಇದ್ದೇನೆ. ಆದರೆ ಇದು ಪ್ರೀತಿ ಅಭಿಮಾನ ತುಂಬಿದ ಪ್ರಶಸ್ತಿ. ಶಿವರಾಮ ಕಾರಂತರು, ಇದ್ದಿನಬ್ಬರ ಜೊತೆಗೆ ವಿದ್ವಾನ್ ಪಿ.ಕೆ. ನಾರಾಯಣ್ ದಕ್ಷಿಣ ಕನ್ನಡದಲ್ಲಿ ಕನ್ನಡವನ್ನು ಕಟ್ಟಿದವರು. ಅಂತಹವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ನಾನು ತುಂಬಾ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಗಿರುವ ಸುಧಾರಣೆಗಳನ್ನು ಅವರು ಮೆಚ್ಚಿಕೊಂಡರು.

    ದತ್ತಿದಾನಿಗಳಾದ ಡಾ.ವರದಾ ಶ್ರೀನಿವಾಸ್ ಕನ್ನಡ ಚಳುವಳಿಗೆ ಶ್ರೀ ಪಿ.ಕೆ. ನಾರಾಯಣ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಕನ್ನಡವನ್ನು ಬೆಳೆಸಿದ ಶಾ.ಮ.ಕೃಷ್ಣರಾಯರಿಗೆ ಅದು ಸಂದಿರುವುದು ಅರ್ಥಪೂರ್ಣವಾಗಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ಸ್ವಾಗತವನ್ನು ಮಾಡಿದರೆ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು.

    Share. Facebook Twitter Pinterest LinkedIn Tumblr WhatsApp Email
    Previous Articleಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದಿಂದ ಪುರಸ್ಕಾರ ಪ್ರದಾನ
    Next Article ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ‘ಸಿರಿಸಂಧಿ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    ಕ.ಸಾ.ಪ.ದ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಮತ್ತು ದತ್ತಿ ಪುರಸ್ಕಾರ

    June 3, 2025

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.