Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯಿಂದ ‘ನೃತ್ಯಾಂತರಂಗ’ – 101ನೇ ಸರಣಿ ಕಾರ್ಯಕ್ರಮ.
    Bharathanatya

    ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯಿಂದ ‘ನೃತ್ಯಾಂತರಂಗ’ – 101ನೇ ಸರಣಿ ಕಾರ್ಯಕ್ರಮ.

    July 14, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 101ನೇ ಸರಣಿ ಕಾರ್ಯಕ್ರಮವು ದಿನಾಂಕ :01-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಡಬದ ವಿಶ್ವಮೋಹನ ಸಂಸ್ಥೆಯ ಗುರು ಮಾನಸ ಪುನೀತ್ ರೈಯವರ ಶಿಷ್ಯೆಯರಾದ ಕುಮಾರಿ ಪ್ರಣಮ್ಯಾ ಪಿ.ರಾವ್ ಮತ್ತು ಕುಮಾರಿ ಸ್ನೇಹಾ ಪಿ.ರಾವ್ ಇವರು ನೃತ್ಯ ಕಾರ್ಯಕ್ರಮ ನೀಡಿದರು.

    ಅಕಾಡಮಿಯ ಪುಟಾಣಿ ವಿದ್ಯಾರ್ಥಿಗಳಾದ ಆದ್ಯ, ವೃದ್ಧಿ ರೈ, ಆರುಷಿ ರೈ, ಮೇಧಾ ಘಾಟೆ, ಯಶ್ವಿ, ಧನ್ವಿ ಮತ್ತು ತಪಸ್ಯಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯಾಶಾಲೆಯ ರೂಢಿಯಂತೆ ಮಂಗಳಮಯ ಓಂಕಾರ ನಾದವು ವಿದುಷಿ ಪ್ರೀತಿಕಲಾ ಹಾಗೂ ಶಂಖನಾದ ವಿದ್ವಾನ್ ಗಿರೀಶ್ ಕುಮಾರ್ ಇವರಿಂದ ನಡೆಯಿತು.

    ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದಂತಹ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಇವರು ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭಿಸಿದರು. ಕುಮಾರಿ ಮಾತಂಗಿಯವರು ಪಂಚಾಂಗ ಪಠಣವನ್ನು ನಡೆಸಿಕೊಟ್ಟರು. ನಂತರ ಈ ಕಲಾ ಶಾಲೆಯ ಮತ್ತೊಂದು ಪುಟಾಣಿಗಳ ತಂಡದಲ್ಲಿರುವ ಶಾರ್ವರಿ ರೈ, ನಿಯತಿ, ನಿನಾದ, ಸ್ನಿಗ್ಧಾ ಕಿರಣ್, ಬೃಂದಾ ಮತ್ತು ಸೃಷ್ಟಿ ಇವರುಗಳು ನವಗ್ರಹ ಹಸ್ತಗಳ ಬಗ್ಗೆ ವಿಷಯ ಮಂಡಣೆ ಪ್ರಸ್ತುತಪಡಿಸಿದರು. ಭರತನಾಟ್ಯ ಕಾರ್ಯಕ್ರಮವು ಕುಮಾರಿಯರಾದ ಸ್ನೇಹಾ ಮತ್ತು ಪ್ರಣಮ್ಯಾರ ಪುಷ್ಪಾಂಜಲಿಯಿಂದ ಆರಂಭಗೊಂಡಿತು.

    ಗ್ರಾಮೀಣ ಪ್ರದೇಶವಾದ ಕಡಬದಿಂದ ಬಂದು ಅತ್ಯಂತ ಸಾಧನೆ ಮಾಡಿ ತನ್ನ 10ನೇ ತರಗತಿಯ ವಿದ್ಯಾಭ್ಯಾಸದ ನಡುವೆಯೂ ಸಹೋದರಿ ಪ್ರಣಮ್ಯಾ ಪಿ. ರಾವ್ ಇವರಿಗೆ ಸವಾಲಾಗುವಂತೆ ಕಿರಿಯ ಪ್ರತಿಭೆಯಾದ ಕುಮಾರಿ ಸ್ನೇಹಾ ಪಿ. ರಾವ್ ಇವರು ಆದಿತಾಳದ ರಾಗಮಾಲಿಕೆಯಲ್ಲಿರುವ ಮೂರು ದೇವಿಯರನ್ನು ಕುರಿತಾದ ‘ತ್ರಿಮಾತಕೌತ್ವಂ’ ಅನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ನಂತರ ಅಂಗಶುದ್ಧ ಹಾಗೂ ಅಭಿನಯ ಸಮತೋಲನವನ್ನು ಕಾದುಕೊಂಡಂತಹ ಹಿರಿಯ ಕಲಾವಿದೆ ಕುಮಾರಿ ಪ್ರಣಮ್ಯಾ ಪಿ. ರಾವ್ ಇವರು ಶ್ರೀಯುತ ಮಹೇಶ್ ಸ್ವಾಮಿ ಬೆಂಗಳೂರು ರಚಿಸಿದ ‘ಬಾರೇ ರಘುವಂಶ ಚಂದ್ರನೇ ಬಾ’ ಎಂಬ ಕನ್ನಡದ ವಿಶಿಷ್ಟ ಮತ್ತು ನವರಸಭರಿತವಾದ ‘ಪದವರ್ಣ’ವನ್ನು ಸುಮಾರು 30 ನಿಮಿಷಗಳ ಕಾಲ ವಿವಿಧ ಜತಿಗಳಿಂದ ಮನೋಜ್ಞವಾಗಿ, ಭಕ್ತರು ರಾಮನನ್ನು ಭಜಿಸುವ ಹಾಗೆ ಪ್ರಸ್ತುತಪಡಿಸಿದರು.

    ಕಾರ್ಯಕ್ರಮಕ್ಕೆ ಆಗಮಿಸಿದ ಅಭ್ಯಾಗತರು ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತೂರಿನ ಹಿರಿಯ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈಯವರು ಅವರ ಶಿಷ್ಯೆಯಾದ ಮಾನಸ ರೈಯವರ ಸಾಧನೆಯನ್ನು ಹೊಗಳುತ್ತಾ ಮತ್ತು ಅವರ ಶಿಷ್ಯೆಯರಾದ ಪ್ರಣಮ್ಯಾ ಮತ್ತು ಸ್ನೇಹಾ ಇವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ಅಭ್ಯಾಗತರು ಕಲಾವಿದರಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡುವುದರ ಮೂಲಕ ಕೃತಜ್ಞತೆಯನ್ನು ಅರ್ಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಮಂಗಳದೊಂದಿಗೆ ‘ವಿಶ್ವಕ್ಕೆ ಮಂಗಳವಾಗಲಿ’ ಎಂಬ ಹಾರೈಕೆಯಿರುವ ಶ್ಲೋಕಕ್ಕೆ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಈ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದವರೆಲ್ಲ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.

    ಕಲಾವಿದರ ಗುರುಗಳಾದ ವಿದುಷಿ ಶ್ರೀಮತಿ ಮಾನಸ ಪುನೀತ್ ರೈಯವರನ್ನು ಕುಮಾರಿ ಮನಿಷಾ ಕಜೆ ಮತ್ತು ಅಭ್ಯಾಗತರಾಗಿ ಆಗಮಿಸಿದ ಶ್ರೀ ಮಹೇಶ್ ನಿಟಿಲಾಪುರ ಇವರನ್ನು ಪ್ರೀತಿ ಪ್ರಭು ಪರಿಚಯಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕುಮಾರಿ ವರ್ಷ ನಿರ್ವಹಿಸಿ, ಕಲಾವಿದರ ಪರಿಚಯವನ್ನು ಕುಮಾರಿ ನಿಶಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಒಟ್ಟು ನಿರ್ವಹಣೆ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ, ಸಹಕಾರ ವಿದ್ವಾನ್ ಗಿರೀಶ್ ಕುಮಾರ್ ಮತ್ತು ಶ್ರೀಮತಿ ಶಶಿಪ್ರಭಾ.

    Share. Facebook Twitter Pinterest LinkedIn Tumblr WhatsApp Email
    Previous Articleಸ್ವಚ್ಛತಾ ಜಾಗೃತಿ ಜಾಥಾ ಹಾಗೂ ಬೀದಿ ನಾಟಕ ಪ್ರದರ್ಶನ   
    Next Article ಶ್ರೀ ಶಾರದಾ ನಾಟ್ಯಾಲಯದಲ್ಲಿ ‘ಗುರು ಪೂರ್ಣಿಮಾ’
    roovari

    Add Comment Cancel Reply


    Related Posts

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಮಂಗಳೂರಿನ ಪುರಭವನದಲ್ಲಿ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ | ಮೇ 04

    May 1, 2025

    ಸುಳ್ಯದ ಕನಕ ಕಲಾ ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ವಿಶ್ವ ನೃತ್ಯ ದಿನ ಆಚರಣೆ

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.