Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

    November 18, 2025

    ಹಾಸನದಲ್ಲಿ ‘ಕಪ್ಪು ಹಳ್ಳಿನ ಕತೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ | ನವೆಂಬರ್ 22

    November 18, 2025

    ಯಕ್ಷಗಾನ ಕಲಾರಂಗಕ್ಕೆ ಕಟೀಲು ದೇವಳದಿಂದ ‘ಶ್ರೀದುರ್ಗಾನುಗ್ರಹ ಪ್ರಶಸ್ತಿ’

    November 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ಕಲಾರಂಗಕ್ಕೆ ಕಟೀಲು ದೇವಳದಿಂದ ‘ಶ್ರೀದುರ್ಗಾನುಗ್ರಹ ಪ್ರಶಸ್ತಿ’
    Awards

    ಯಕ್ಷಗಾನ ಕಲಾರಂಗಕ್ಕೆ ಕಟೀಲು ದೇವಳದಿಂದ ‘ಶ್ರೀದುರ್ಗಾನುಗ್ರಹ ಪ್ರಶಸ್ತಿ’

    November 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಟೀಲು ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ತಿರುಗಾಟದ ಆರಂಭದ ಸೇವೆಯಾಟ ಹಾಗೂ ಏಳನೇ ಮೇಳದ ಉದ್ಘಾಟನೆ ದಿನಾಂಕ 16 ನವೆಂಬರ್ 2025ರಂದು ಜರಗಿತು. ಈ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಘನ ಅಧ್ಯಕ್ಷತೆ ಹಾಗು ಅತಿಥಿ ಗಣ್ಯರ ಸಮಕ್ಷ ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಏಳು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅನುವಂಶಿಕ ಮೊಕ್ತೇಸರುಗಳಾದ ವಾಸುದೇವ ಅಸ್ರಣ್ಣ ಮತ್ತು ಸಹೋದರರು ಕಲೆ- ಕಲಾವಿದರು ಮತ್ತು ಸಾಮಾಜಿಕ ಕಳಕಳಿಯ ಕೈಂಕರ್ಯ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ‘ಶ್ರೀ ದುರ್ಗಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಿದರು.

    ಶ್ರೀದೇವಿಯ ಪ್ರಸಾದ, ಸನ್ಮಾನ ಪತ್ರ ಹಾಗೂ ರೂ.25,000/-ದ ಹಮ್ಮಿಣಿಯನ್ನು ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಇವರಿಗೆ ನೀಡಿ ಅಭಿನಂದಿಸಿದರು. ಕಲಾವಿದ ಶ್ರುತಕೀರ್ತಿರಾಜ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಸದಸ್ಯರಾದ ಎಸ್. ಗಣರಾಜ ಭಟ್, ಸಂತೋಷ ಕುಮಾರ ಶೆಟ್ಟಿ, ಕಿಶೋರ ಸಿ. ಉದ್ಯಾವರ, ಡಾ. ಪೃಥ್ವಿರಾಜ ಕವತ್ತಾರು, ಎಚ್.ಎನ್. ವೆಂಕಟೇಶ ಉಪಸ್ಥಿತರಿದ್ದರು. ಕಳೆದ ಐದು ದಶಕಗಳಿಂದ ಮೌನವಾಗಿ ಕಾರ್ಯನಿರ್ವಹಿಸುತ್ತಾ ಬಂದ ಸಂಸ್ಥೆಗೆ, ಯಕ್ಷಗಾನ ಪ್ರಿಯೆ ಕಟೀಲು ದುರ್ಗಾಮಾತೆಯ ಸಮ್ಮುಖದಲ್ಲಿ ದೊರೆತ ಅನುಗ್ರಹ ಪೂರ್ವಕ ಪ್ರಸಾದ ಕಾರ್ಯಕರ್ತರಿಗೆ ಧನ್ಯತೆ ನೀಡಿತು.

    award baikady felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಎರಡು ಹೊಸ ಕೃತಿಗಳ ಲೋಕಾರ್ಪಣೆ
    Next Article ಹಾಸನದಲ್ಲಿ ‘ಕಪ್ಪು ಹಳ್ಳಿನ ಕತೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ | ನವೆಂಬರ್ 22
    roovari

    Add Comment Cancel Reply


    Related Posts

    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

    November 18, 2025

    ಹಾಸನದಲ್ಲಿ ‘ಕಪ್ಪು ಹಳ್ಳಿನ ಕತೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ | ನವೆಂಬರ್ 22

    November 18, 2025

    ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಎರಡು ಹೊಸ ಕೃತಿಗಳ ಲೋಕಾರ್ಪಣೆ

    November 18, 2025

    ಧಾರವಾಡದಲ್ಲಿ ‘ಶಾಂತಕವಿ ನಾಟಕೋತ್ಸವ-2025’ | ನವೆಂಬರ್ 22 ಮತ್ತು 23

    November 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.