Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಕ್ಕಳ ಜಗಲಿ ಪತ್ರಿಕೆಯ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023 | ಕೊನೆಯ ದಿನಾಂಕ ಒಕ್ಟೋಬರ್ 28
    Competition

    ಮಕ್ಕಳ ಜಗಲಿ ಪತ್ರಿಕೆಯ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023 | ಕೊನೆಯ ದಿನಾಂಕ ಒಕ್ಟೋಬರ್ 28

    September 27, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪತ್ರಿಕೆಯಾದ ‘ಮಕ್ಕಳ ಜಗಲಿ’ ತನ್ನ ಮೂರನೇ ವರ್ಷದ ಸಂಭ್ರಮದಲ್ಲಿ ‘ಕವನ ಸಿರಿ’ ಮತ್ತು ‘ಕಥಾ ಸಿರಿ’-2023 ಪ್ರಶಸ್ತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಮಕ್ಕಳಿಂದ ಕವನ ಮತ್ತು ಕಥೆಗಳನ್ನು ಆಹ್ವಾನಿಸುತ್ತಿದೆ.
    ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕವನ ಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 12 ಸಾಲುಗಳು ಹಾಗೂ ಗರಿಷ್ಠ 20 ಸಾಲುಗಳನ್ನು ಹೊಂದಿರಬೇಕು. ಎರಡನೇ ವಿಭಾಗವು 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 16 ಸಾಲುಗಳು ಹಾಗೂ ಗರಿಷ್ಠ 24 ಸಾಲುಗಳನ್ನು ಹೊಂದಿರಬೇಕು.
    ಕಥಾಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. A4 ಅಳತೆಯ ಕಾಗದದಲ್ಲಿ ಬರಹವು ಎರಡು ಪುಟಗಳನ್ನು ಮೀರಿರಬಾರದು. ಎರಡನೇ ವಿಭಾಗ 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಬರಹಾವು A4 ಅಳತೆಯ ಕಾಗದದಲ್ಲಿ ಮೂರು ಪುಟಗಳನ್ನು ಮೀರಿರಬಾರದು.
    ಫಲಿತಾಂಶವನ್ನು 14-11-2023 ರಂದು ಪ್ರಕಟಿಸಲಾಗುವುದು. ಪ್ರತಿ ವಿಭಾಗದಲ್ಲೂ ಸಮಾನ ಎರಡು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ. ಅತ್ಯುತ್ತಮ 10 ಕಥೆಗಳಿಗೆ ಮತ್ತು 10 ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ನೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.
    ಸರ್ಧಿಗಳಿಗೆ ಸೂಚನೆಗಳು :
    1. ಒಬ್ಬ ಸ್ಪರ್ಧಿಗೆ ಕಥೆ ಮತ್ತು ಕವನ ಎರಡೂ ವಿಭಾಗದಲ್ಲೂ ಸ್ಪರ್ಧಿಸುವ ಅವಕಾಶವಿದೆ.
    2. ಭಾಗವಹಿಸುವ ಸ್ಪರ್ಧಿಗಳು ಅತ್ಯುತ್ತಮವಾದ ಒಂದು ಕಥೆ ಮತ್ತು ಒಂದು ಕವನವನ್ನು ಮಾತ್ರ ಕಳುಹಿಸಲು ಅವಕಾಶ.
    3. ಸ್ಪರ್ಧಿಗಳು ಕವನ ಮತ್ತು ಕಥೆಯನ್ನು ಕಳುಹಿಸುವಾಗ ಒಂದು ಮೂಲಪ್ರತಿಯೊಂದಿಗೆ ಮೂರು ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು.
    4. ಸ್ಪರ್ಧಿಗಳು ಕವನ ಅಥವಾ ಕಥೆಯನ್ನು ಸ್ವಂತ ಕಲ್ಪನೆಯಲ್ಲಿ ಯಾರದೇ ಸಹಾಯವಿಲ್ಲದೆ ರಚನೆ ಮಾಡಿರಬೇಕು.
    5. ಓದಿದ ಕಥೆ, ಕವನಗಳು ಅಥವಾ ಯಾರೋ ಹೇಳಿದ ಕಥೆ, ಕವನಗಳನ್ನು ಬರೆದು ಕಳುಹಿಸಬಾರದು. ನಕಲು ಬರಹಗಳನ್ನು ಪರಿಗಣಿಸಲಾಗುವುದಿಲ್ಲ.
    6. ವಿದ್ಯಾರ್ಥಿಗಳು ತಾವೇ ಸ್ವತಃ ರಚನೆ ಮಾಡಿರುವ ಕವನ ಮತ್ತು ಕಥೆಯನ್ನು ಶಾಲೆ/ಕಾಲೇಜಿನ ಮುಖ್ಯಸ್ಥರು ಶಾಲಾ ಮೊಹರು, ಸಹಿಯೊಂದಿಗೆ ದೃಢೀಕರಿಸಿರಬೇಕು.
    7. ಸ್ವಂತವಾಗಿ ಬರೆದ ಕಥೆ – ಕವನಗಳ ಹಾಳೆಯ ಹಿಂಬದಿಯಲ್ಲಿ ಶಾಲೆ ಕಾಲೇಜಿನ ಮುಖ್ಯಸ್ಥರು ದೃಢೀಕರಿಸದಿದ್ದರೆ ಅಂತಹ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
    8. ರಾಜಕೀಯ/ಧರ್ಮ/ಜಾತಿ/ವ್ಯಕ್ತಿ ನಿಂದನೆಯ ಬರಹಗಳಿಗೆ ಅವಕಾಶವಿಲ್ಲ.
    9. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
    10. ಬರಹದ ಹಿಂಭಾಗದಲ್ಲಿ,
    ವಿದ್ಯಾರ್ಥಿಯ ಹೆಸರು :
    ಜನ್ಮ ದಿನಾಂಕ
    ಶಾಲಾ ಹೆಸರು
    ತಾಲೂಕು
    ವಾಟ್ಸಾಪ್ ನಂ.
    ಈ ರೀತಿ ಮಾಹಿತಿ ಬರೆಯಬೇಕು.
    ಕವನ ಮತ್ತು ಕಥೆಗಳನ್ನು ದಿನಾಂಕ 28-10-2023ರ ಒಳಗಾಗಿ ತಾರಾನಾಥ್ ಕೈರಂಗಳ, ಮಕ್ಕಳ ಜಗಲಿ ಕಥೆ ಮತ್ತು ಕವನ ಸ್ಪರ್ಧೆ -2023, ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಮಂಚಿ ಅಂಚೆ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಪಿನ್ ಕೋಡ್ 574323 ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾರನಾಥ್ ಕೈರಂಗಳ -9844820979, ಗೋಪಾಲಕೃಷ್ಣ ನೇರಳಕಟ್ಟೆ – 9980223736, ರಮೇಶ್ ನಾಯ್ಕ ಉಪ್ಪುಂದ – 9448887713, ಅರವಿಂದ ಕುಡ್ಲ – 9844898124, ಶಿವ ಕುಮಾರ್ ಎಂ.ಜಿ – 9964499583, ಅಕ್ಬರ್ ಅಲಿ – 6364137064, ವಿಜಯಾ ಶೆಟ್ಟಿ ಸಾಲೆತ್ತೂರು – 7892587191, ತೇಜಸ್ವಿ ಅಂಬೇಕಲ್ಲು – 9480345799, ತುಳಸಿ ಕೈರಂಗಳ – 9480288214, ವಿದ್ಯಾ ಕಾರ್ಕಳ – 7619447371 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಪಡುಕುತ್ಯಾರಿನಲ್ಲಿ ‘ಸುದರ್ಶನ ವಿಜಯ’ ತಾಳಮದ್ದಳೆ  
    Next Article ಮುಂಬಯಿ ವಿವಿಯ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ ‘ಸುವರ್ಣಯುಗ’ ಕೃತಿ ಬಿಡುಗಡೆ | ಸೆಪ್ಟೆಂಬರ್ 30ಕ್ಕೆ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.