Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ
    Literature

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಪ್ಪಳ : ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ದಿನಾಂಕ 25 ಮೇ 2025ರಂದು ಹಿರಿಯ ಪತ್ರಕರ್ತ ರಮೇಶ್ ಸುರ್ವೆಯವರ ಪುತ್ರ ಕಿಶನ್ ಜೊತೆ ತೇಜಸ್ವಿಯವರ ವಿವಾಹ ಆರತಕ್ಷತೆ ಕಾರ್ಯಕ್ರಮ ನಿಮಿತ್ತ ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು.

    ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ ಮಾತನಾಡಿ “ಕನ್ನಡ ಸಾಹಿತ್ಯ ಇಂದು ಹಲವಾರು ಪ್ರಕಾರಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದೆ. ಕಾದಂಬರಿ, ನಾಟಕ, ಎನರ್ಜಿ, ಜೀವನ ಚರಿತ್ರೆ, ಆತ್ಮಚರಿತ್ರೆಯಂತೆ ಕಾವ್ಯವೂ ಕೂಡ ಒಂದು ಅತ್ಯಂತ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ. ಕಾವ್ಯ ರಚನೆಗೆ ಕವಿಗೆ ಸತತ ಅಧ್ಯಯನದ ಅವಶ್ಯಕತೆ ಇದೆ ಮತ್ತು ಶಬ್ದ ಭಂಡಾರದ ತಿಳುವಳಿಕೆ ಜ್ಞಾನ ಇರಬೇಕು. ಆಧುನಿಕ ಹನಿಗವನ, ಮಿನಿ ಗವನ, ಚುಟುಕು, ಹಾಯ್ಕುಗಳು ಕೂಡ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಚುಟುಕು ನಾಲ್ಕು ಸಾಲುಗಳನ್ನು ಹೊಂದಿರಬೇಕು ಮತ್ತು ಅಂತ್ಯ ಪ್ರಾಸದಿಂದ ಕೂಡಿರಬೇಕು. ಚಿಕ್ಕದರಲ್ಲಿ ಚೊಕ್ಕ ಅರ್ಥವನ್ನೇ ಬಿಂಬಿಸುವುದು ಚುಟುಕಿನ ಉದ್ದೇಶವಾಗಿದೆ ಹಾಸ್ಯ, ವಿಡಂಬನೆ ಇದು ಚುಟುಕಿನ ಲಕ್ಷಣವಾಗಿದೆ” ಎಂದು ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ಗದುಗಿನ ಹಿರಿಯ ಸಾಹಿತಿ ಡಾ. ರಾಜೇಂದ್ರ ಗಡಾದ ಇವರು ಮಾತನಾಡಿ, “ವಧು ವರರ ಜೀವನದಲ್ಲಿ ಕವಿಗೋಷ್ಠಿ ಸ್ಪೂರ್ತಿಯಾಗಲಿ ಎಂದು ತಿಳಿಸಿದರು. ಕ.ಸಾ.ಪ. ಮಾಜಿ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್, ರವಿತೇಜ ಅಬ್ಬಿಗೇರಿ, ಸಿರಿ ಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್. ಗೋನಾಳ, ಸಾಹಿತಿ ಶರಣ ಬಸಪ್ಪ ಬಿಳಿ ಎಲೆ, ಡಾ. ಮಹಾಂತೇಶ್ ಮಲ್ಲನಗೌಡರ, ಉಮೇಶ್ ಬಾಬು ಸುರ್ವೆ ಮೊದಲಾದವರು ಉಪಸ್ಥಿತರಿದ್ದರು. ವಿಜಯಪುರ ಸಾಹಿತಿ ಶಿಕ್ಷಕ ಶ್ರೀಮಂತ ಡೊಳವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನ್ನಪೂರ್ಣ ಮಹೇಶ್ ಪಾರ್ಥನೆ ಗೈದು, ಶಿವಪ್ರಸಾದ ಹಾದಿಮನಿ ಸ್ವಾಗತಿಸಿ, ಶಿಕ್ಷಕಿ ಬಾಲನಾಗಮ್ಮ ನಿರೂಪಿಸಿ, ಶಿವಾನಂದಯ್ಯ ಬೀಳಗಿ ಮಠ ವಂದಿಸಿದರು.

    ನಂತರ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಅನ್ನಪೂರ್ಣ ಮಹೇಶ್, ಸುಮಂಗಲಾ ಹಂಚಿನಾಳ, ಶರಣಬಸಪ್ಪ ಬಿಳಿ ಎಲೆ, ಸುಭಾಸ್ ಬೀ.ಎಂ., ಡಾ. ಪ್ರಕಾಶ್ ಹಳ್ಳಿಗುಡಿ, ಪ್ರದೀಪ್ ಹದ್ದನ್ನವರ್, ಪುಷ್ಪಲತಾ ಯೋಳುಭಾವಿ, ಶಿವಪ್ರಸಾದ್ ಹಾದಿಮನಿ, ಈರಯ್ಯ ಕುರ್ತಕೋಟಿ, ಶಿವಮ್ಮ ಗುರುಸ್ತಳಮಠ, ಸೋಮಶೇಖರ ಕಂಚಿ, ಜಿಲಾನಸಾಬ ಬಡಿಗೇರ, ಪೂಜಾ ದಗಲಿ, ವಸಂತ ಕುಮಾರ್ ಗುಡಿ, ಪ್ರಭಾಕರ್ ಎಸ್. ಬೆಂಗಳೂರು, ಡಾ. ಜಲಾಲುದ್ದೀನ್ ಹಟ್ಟಿ ಚಿನ್ನದ ಗಣಿ, ಮಂಜುಳಾ ಮುನವಳ್ಳಿ, ಉಮೇಶ್ ಮುನವಳ್ಳಿ ಸೇರಿದಂತೆ ಹಲವರು ಕವಿತೆ ವಾಚಿಸಿದ ಕೊನೆಯಲ್ಲಿ ಪ್ರತಿ ಕವಿಗಳಿಗೂ ‘ಕರ್ನಾಟಕ ಕವಿಭೂಷಣ ರಾಜ್ಯ ಪ್ರಶಸ್ತಿ’ ಹಾಗೂ ‘ಬಹುಜನರ ಕವಿತೆಗಳು’ ಕವನ ಸಂಕಲನವನ್ನು ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು.

    baikady Literature Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01
    Next Article ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’
    roovari

    Add Comment Cancel Reply


    Related Posts

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.